ಶಾರ್ದೂಲ್ಗೆ 3 ವಿಕೆಟ್
5ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ 'ಎ' 20 ಓವರ್ಗೆ 204 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 'ಎ' ತಂಡ, ರೀಜಾ ಹೆಂಡ್ರಿಕ್ಸ್ 59, ಕೈಲ್ ವೆರೆನ್ನೆ 44 ರನ್ನೊಂದಿಗೆ 20 ಓವರ್ಗೆ ಎಲ್ಲಾ ವಿಕೆಟ್ ಕಳೆದು 168 ರನ್ ಗಳಿಸಿತು. ಭಾರತದ ಶಾರ್ದೂಲ್ ಠಾಕೂರ್ 3, ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದು ಗಮನ ಸೆಳೆದರು.
ದೂಬೆ, ಅಕ್ಸರ್ ಅದ್ಭುತ ಆಟ
ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಆಗಸ್ಟ್ 29ರಂದು ನಡೆದಿದ್ದ ಇತ್ತಂಡಗಳ ಮೊದಲ ಏಕದಿನ ಪಂದ್ಯದಲ್ಲಿ ಶುಬ್ಮಾನ್ ಗಿಲ್ 46, ನಾಯಕ ಮನೀಶ್ ಪಾಂಡೆ 39, ಇಶಾನ್ ಕಿಶಾನ್ 37, ಶಿವಂ ದೂಬೆ 79, ಅಕ್ಸರ್ ಪಟೇಲ್ 60 ರನ್ನೊಂದಿಗೆ ಭಾರತ 47 ಓವರ್ಗೆ 327 ರನ್ ಗಳಿಸಿತ್ತಲ್ಲದೆ ಇದರಲ್ಲಿ 69 ರನ್ ಗೆಲುವನ್ನಾಚರಿಸಿತ್ತು.
ಭಾರತ ರೋಚಕ ಗೆಲುವು
ಆಗಸ್ಟ್ 31ರಂದು ನಡೆದಿದ್ದ 2ನೇ ಏಕದಿನ ಪಂದ್ಯವನ್ನು 21 ಓವರ್ಗೆ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಫ್ರಿಕಾ, ನಾಯಕ ತೆಂಬ ಬವುಮ 40 ರನ್ನೊಂದಿಗೆ 163 ರನ್ ಮಾಡಿತ್ತು. ಭಾರತ ಇಶಾನ್ ಕಿಶಾನ್ 55, ಅನ್ಮೋಲ್ಪ್ರೀತ್ ಸಿಂಗ್ 30 ರನ್ ಕೊಡುಗೆಯೊಂದಿಗೆ 163 ರನ್ ನೊಂದಿಗೆ 2 ವಿಕೆಟ್ ಜಯ ಗಳಿಸಿತು.
ಮನೀಷ್ ಪಾಂಡೆ ಭರ್ಜರಿ ಆಟ
ಸರಣಿಯುದ್ದಕ್ಕೂ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು ನಿಜ. 3ನೇ ಏಕದಿನ ಪಂದ್ಯವನ್ನು 30 ಓವರ್ಗೆ ಕಡಿತಗೊಳಿಸಲಾಗಿತ್ತು. ಈ ಪಂದ್ಯದಲ್ಲಿ ಮನೀಷ್ ಪಾಂಡೆ 81 ರನ್ (59 ಎಸೆತ) ಕೊಡುಗೆಯೊಂದಿಗೆ ಭಾರತ 4 ವಿಕೆಟ್ ಗೆಲುವನ್ನಾಚರಿಸಿತ್ತು. 4ನೇ ಪಂದ್ಯದಲ್ಲಿ ಮಾತ್ರ ಪ್ರವಾಸಿ ದಕ್ಷಿಣ ಆಫ್ರಿಕಾ 4 ರನ್ ಗೆಲುವು ದಾಖಲಿಸಿತು. ಈ ಪಂದ್ಯ 25 ಓವರ್ಗೆ ನಡೆದಿತ್ತು.