
ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಭಾನುವಾರದಂದು ಟಿ20 ವಿಶ್ವಕಪ್ನ ಸೆಮಿಫೈನಲ್ಗೆ ತಲುಪಿತು, ತಮ್ಮ ಅಂತಿಮ ಸೂಪರ್ 12 ಪಂದ್ಯದಲ್ಲಿ ಜಿಂಬಾಬ್ವೆಯನ್ನು ಸೋಲಿಸಿ ಗ್ರೂಪ್ 2 ಟಾಪರ್ಗಳಾಗಿ ಸೆಮಿಫೈನಲ್ ಪ್ರವೇಶಿಸಿದರು.
ನೆದರ್ಲ್ಯಾಂಡ್ಸ್ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಜಿಂಬಾಬ್ವೆ ವಿರುದ್ಧದ ಪಂದ್ಯ ಆರಂಭಕ್ಕೂ ಮುನ್ನವೇ ಭಾರತ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು. ಆದರೂ, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ಪ್ಲೇಯಿಂಗ್ XIನಲ್ಲಿ ಬದಲಾವಣೆ ಮಾಡಿತು.
ರಿಷಬ್ ಪಂತ್ ಅವರನ್ನು ಆಡುವ XI ಗೆ ಸೇರಿಸಿತು. ಹಿಂದಿನ ಪಂದ್ಯಗಳಲ್ಲಿ ಭಾರತದ ವಿಕೆಟ್ ಕೀಪರ್ ಆಗಿದ್ದ ದಿನೇಶ್ ಕಾರ್ತಿಕ್ ಅವರನ್ನು ಕೈಬಿಡಲಾಯಿತು. ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್, ತಂಡದ ನಿರ್ವಹಣೆಯ ತಂತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ದಿನೇಶ್ ಕಾರ್ತಿಕ್ರನ್ನು ಕೈಬಿಡುವುದಿದ್ದರೆ ಅದನ್ನು ವಿಶ್ವಕಪ್ ಆರಂಭದ ಪಂದ್ಯದಿಂದಲೇ ಮಾಡಬೇಕಿತ್ತು. ರಿಷಬ್ ಪಂತ್ಗೆ ಮೊದಲನೇ ಪಂದ್ಯದಿಂದಲೇ ಅವಕಾಶ ನೀಡಿದ್ದರೆ, ಅವರಿಗೂ ಫಾರ್ಮ್ ಕಂಡುಕೊಳ್ಳಲು ಅನುಕೂಲವಾಗುತ್ತಿತ್ತು ಎಂದು ಹೇಳಿದ್ದಾರೆ.
"ನಾವು ಈಗಾಗಲೇ ಸೆಮಿಸ್ಗೆ ಅರ್ಹತೆ ಪಡೆದಿರುವ ಕಾರಣ ನಾವು ರಿಷಬ್ ಪಂತ್ಗೆ ಒಂದು ಪಂದ್ಯವನ್ನು ನೀಡಲು ಬಯಸಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದರು. ನಾವು ಮೊದಲು ಬ್ಯಾಟಿಂಗ್ ಮಾಡುತ್ತಿರುವುದರಿಂದ ನಮಗೆ ಫಿನಿಶರ್ ಅಗತ್ಯವಿಲ್ಲ. ನೀವು ಚೇಸಿಂಗ್ ಮಾಡುವಾಗ ನಿಮಗೆ ಫಿನಿಶರ್ ಬೇಕು" ಎಂದು ಹೇಳಿದರು.

ಸೆಮಿಫೈನಲ್ಗೆ ಮುನ್ನ ಈ ನಿರ್ಧಾರ ಒಳ್ಳೆಯದಲ್ಲ
ಆದರೆ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಮಾಡಬೇಕಿತ್ತು. ರಿಷಭ್ ಪಂತ್ ಇಂತಹ ಪರಿಸ್ಥಿತಿಗಳಲ್ಲಿ ರೆಡ್ ಬಾಲ್ ಮತ್ತು ವೈಟ್ ಬಾಲ್ ಎರಡರಲ್ಲೂ ಕ್ರಿಕೆಟ್ ಆಡಿದ್ದಾರೆ. ರಿಷಬ್ ಪಂತ್ ದೊಡ್ಡ ಮೊತ್ತವನ್ನು ಗಳಿಸಿದ್ದರೆ ಅವರ ನಿರ್ಧಾರ ಸರಿಯಾಗಿರುತ್ತಿತ್ತು, ಆದರೆ ಪಂತ್ ವೈಫಲ್ಯ ಅನುಭವಿಸಿದರು, ಸೆಮಿಫೈನಲ್ಗೆ ಮುನ್ನ ಪ್ಲೇಯಿಂಗ್ XI ನಲ್ಲಿ ಬದಲಾವಣೆ ಮಾಡುವ ಅಗತ್ಯವೇನಿತ್ತು ಎಂದು ಅವರು ಕಿಡಿಕಾರಿದರು.
ಭಾರತ ಇಂಗ್ಲೆಂಡ್ ವಿರುದ್ಧದ ನಾಕೌಟ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ರನ್ನು ಆಡಿಸಲು ನಿರ್ಧರಿಸಿದರೆ. ಸೆಮಿಫೈನಲ್ಗೆ ಮುಂಚಿತವಾಗಿ ಕಾರ್ತಿಕ್ ಅವರನ್ನು ಕೈಬಿಡುವುದು ಅವರ ಆತ್ಮವಿಶ್ವಾಸಕ್ಕೆ ಒಳ್ಳೆಯದಲ್ಲ ಎಂದು ಸೆಹ್ವಾಗ್ ಹೇಳಿದರು.
"ನೀವು ಟಿ20 ವಿಶ್ವಕಪ್ಗಾಗಿ ದಿನೇಶ್ ಕಾರ್ತಿಕ್ ವಿರುದ್ಧ ಜೂಜಾಡಿದ್ದರೆ, ಪಂದ್ಯಾವಳಿಯ ಕೊನೆಯವರೆಗೂ ನೀವು ಅವರನ್ನು ಆಡಬೇಕು. ದಿನೇಶ್ ಕಾರ್ತಿಕ್ ಅವರನ್ನು ಬೆಂಚ್ ಮಾಡುವುದು ಅವರ ಆತ್ಮವಿಶ್ವಾಸಕ್ಕೆ ಒಳ್ಳೆಯದಲ್ಲ. ಅವರಿಗೆ ಸ್ವಲ್ಪ ಆತ್ಮವಿಶ್ವಾಸ ಬೇಕು" ಎಂದು ಅವರು ಹೇಳಿದರು.
ಗುರುವಾರ ಅಡಿಲೇಡ್ ಓವಲ್ನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.