ಬೆಂಗಳೂರು, ಜುಲೈ 17: ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದ ಮುರಳಿ ವಿಜಯ್ ಅವರು ತಂಡದಿಂದ ಔಟ್ ಆಗಿದ್ದಾರೆ.
ಗಾಯಗೊಂಡು ಗುಣಮುಖರಾಗದ ಮುರಳಿ ವಿಜಯ್ ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲಾಗಿರುವ ಕಾರಣ ಅವರ ಬದಲಾಗಿ ಶಿಖರ್ ಧವನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿ) ಸೋಮವಾರ(ಜುಲೈ 17) ಪ್ರಕಟಿಸಿದೆ.

ಫಿಟ್ನೆಸ್ ಪರೀಕ್ಷೆ ಮಾಡಲು ಅಭ್ಯಾಸ ಪಂದ್ಯವನ್ನಾಡಿದ ಮುರಳಿ ಅವರು ಮತ್ತೆ ನೋವಿನಿಂದ ಬಳಲಿದ್ದಾರೆ. ಮುರಳಿ ಅವರನ್ನು ಪರೀಕ್ಷಿಸಿದ ಬಿಸಿಸಿಐ ಮೆಡಿಕಲ್ ಟೀಮ್, ಮತ್ತೆ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ.