ಉತ್ತಮ ಆರಂಭ ಪಡೆದ ಕರ್ನಾಟಕ
ಇನ್ನು ಬರೋಡಾ ತಂಡ ನೀಡಿದ 135 ರನ್ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿ 73 ರನ್ಗಳ ಜಿತೆಯಾಟವನ್ನು ಆಡಿದರು. 25 ಎಸೆತಗಳಲ್ಲಿ 28 ರನ್ಗಳಿಸಿದ ಮಯಾಂಕ್ ಅಗರ್ವಾಲ್ ನಂತರ ನಿನಾದ್ ನಿತ್ವಾಗೆ ವಿಕೆಟ್ ಒಪ್ಪಿಸಿ ಹೊರ ನಡೆಯುವ ಮೂಲಕ ಮಯಾಂಕ್ ಹೋರಾಟ ಮುಕ್ತಾಯವಾಯಿತು. ನಂತರ ನಾಯಕ ಮನೀಶ್ ಪಾಂಡೆ ಕೇವಲ 3 ರನ್ಗಳಿಗೆ ಔಟ್ ಆಗುವ ಮೂಲಕ ಆತಂಕವನ್ನು ಮೂಡಿಸಿದರು.
ಆತಂಕ ದೂರಮಾಡಿದ ಪಡಿಕ್ಕಲ್, ನಾಯರ್
ಇನ್ನು ಈ ಪಂದ್ಯದಲ್ಲಿ ಕರ್ನಾಟಕ ತಂಡದ ಆರಂಬಿಕ ಆಟಗಾರ ದೇವದತ್ ಪಡಿಕ್ಕಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಂತರ ಕರುಣ್ ನಾಯರ್ ಕೂಡ ಉತ್ತಮ ಪ್ರದರ್ಶನ ನಿಡುವ ಮೂಲಕ ತಂಡದ ಜಯವನ್ನು ಸಾರಿದ್ದಾರೆ. ದೇವದತ್ ಪಡಿಕ್ಕಲ್ 47 ಎಸೆತಗಳಲ್ಲಿ ಭರ್ಜರಿ 56 ರನ್ಗಳನ್ನು ಸಿಡಿಸಿದ್ದಾರೆ. ನಂತರ ಅವರು ಕೂಡ ನಿನಾದ್ ರಿತ್ವಾ ಎಸೆತಕ್ಕೆ ಔಟಾಗಿ ನಿರ್ಗಸಿದ್ದಾರೆ.
ಗೆಲುವನ್ನು ಸಾರಿದ ಕರುಣ್, ಜೋಶಿ
ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡಾಗ ಕರ್ನಾಟಕ 15.5 ಓವರ್ಗಳಲ್ಲಿ 104 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ನಂತರ ಬಂದ ಅನಿರುದ್ಧ ಜೋಶಿ ಜೊತೆಗೆ 33 ರನ್ಗಳ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ಭರ್ಜರಿಯಾಗಿ ಗೆಲುವು ಪಡೆದುಕೊಂಡಿದೆ. ಕರ್ನಾಟಕ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ.