ಕೊಲಂಬೋ, ಏಪ್ರಿಲ್ 27: ಕಳೆದ ವಾರ ಕೊಲಂಬೋದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಸುಮಾರು 253 ಜನ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಪಾಕಿಸ್ತಾನ ವಿರುದ್ಧ ಆಡಬೇಕಿದ್ದ ಅಂಡರ್ 19 ಕ್ರಿಕೆಟ್ ಸರಣಿಯನ್ನು ಶ್ರೀಲಂಕಾ ಕ್ರಿಕೆಟ್ ಶನಿವಾರ (ಏಪ್ರಿಲ್ 27) ರದ್ದುಗೊಳಿಸಿದೆ.
ಕ್ರಿಕೆಟ್: ಸುಂದರಂ ರವಿ ವಿಶ್ವಕಪ್ನಲ್ಲಿ ಭಾರತದ ಏಕೈಕ ಅಂಪೈರ್
ಸರಣಿ ನಿಮಿತ್ತ ಏಪ್ರಿಲ್ 30ರಂದು ಶ್ರೀಲಂಕಾ ಪ್ರವಾಸ ಕೈಗೊಳ್ಳಲು ಪಾಕಿಸ್ತಾನ ಕ್ರಿಕೆಟ್ ತಂಡ ಸಿದ್ಧವಾಗಿತ್ತು. ಮೇ 3ರಂದು ಪಾಕ್ ತಂಡ ಲಂಕಾ ವಿರುದ್ಧ ಮೊದಲ ಪಂದ್ಯವನ್ನು ಆಡುವುದರಲ್ಲಿತ್ತು. ಆದರೆ ಯೋಜಿತ ಸರಣಿಯನ್ನು ಸದ್ಯಕ್ಕೆ ರದ್ದುಗೊಳಿಸಿ, ಅನಿರ್ಧಿಷ್ಟಾವಧಿವರೆಗೆ ಮುಂದೂಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ತಿಳಿಸಿದೆ.
Pakistan U-19 Cricket Team's tour to Srilanka has been postponed due to security reasons. Srilanka is not ready to conduct series in current situation.#SriLanka #PAKU19vSLU19 pic.twitter.com/ZE77U2p3zr
— Hasnain Shah (@Shahhasnain69) April 27, 2019
ಇಎಸ್ಪಿಎನ್ ಕ್ರಿಕ್ ಇನ್ಫೋ ಜೊತೆ ಮಾತನಾಡುತ್ತ ಶ್ರೀಲಂಕಾ ಕ್ರಿಕೆಟ್ ಅಧಿಕಾರಿಗಳು, 'ಶ್ರೀಲಂಕಾಕ್ಕೆ ಪಾಕಿಸ್ತಾನ ಪ್ರವಾಸವನ್ನು ಅನಿರ್ಧಿಷ್ಟಾವಧಿವರೆಗೆ ಮುಂದೂಡಲಾಗಿದೆ. ಭದ್ರತೆಯ ಕಾರಣದಿಂದಾಗಿ ಶ್ರೀಲಂಕಾ ಕ್ರಿಕೆಟ್ ಈ ನಿರ್ಧಾರವನ್ನು ತೆಗೆದುಕೊಂಡಿದೆ' ಎಂದು ಮಾಹಿತಿ ನೀಡಿದ್ದಾರೆ.
ಮುಂಬೈ ಎದುರು ಚೆನ್ನೈಗೆ ಸೋಲು, ಧೋನಿ ಆಡದಿದ್ರೆ ಸೋಲು ಮಾಮೂಲು?!
ಲಂಕಾ ಪ್ರವಾಸ ಕೈಗೊಳ್ಳಲಿದ್ದ ಪಾಕ್ ಕ್ರಿಕೆಟ್ ತಂಡ ಗ್ಯಾಲೆ ಮತ್ತು ಹ್ಯಾಂಬಂಟೊಟದಲ್ಲಿ ಕ್ರಮವಾಗಿ 2 ನಾಲ್ಕು ದಿನಗಳ ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳನ್ನು ಆಡುವುದರಲ್ಲಿತ್ತು. ಈ ಸರಣಿ ನಿಮಿತ್ತ ಕಳೆದ ಐದು ದಿನಗಳಿಂದಲೂ ರಾಹಿಲ್ ನಝೀರ್ ಮುಂದಾಳತ್ವದ ಪಾಕ್ ತಂಡ ಕರಾಚಿಯಲ್ಲಿ ಅಭ್ಯಾಸ ನಡೆಸುತ್ತಿತ್ತು.