ಮೂರು ತಿಂಗಳು ಜರ್ಮನಿಯಲ್ಲಿ ಸಿಲುಕಿದ್ದ ವಿಶ್ವನಾಥನ್ ಆನಂದ್ ಇಂದು ತಾಯ್ನಾಡಿಗೆ ವಾಪಾಸ್

ಜರ್ಮನಿಯಲ್ಲಿ ಸಿಲುಕಿದ್ದ ವಿಶ್ವನಾಥನ್ ಆನಂದ್ ಇಂದು ತಾಯ್ನಾಡಿಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವನಾಥನ್ ಆನಂದ್ ಕಳೆದ ಮೂರು ತಿಂಗಳಿನಿಂದ ಜರ್ಮನಿಯಲ್ಲಿ ಸಿಲುಕಿಕೊಂಡಿದ್ದರು. ಕೊರೊನಾ ವೈರಸ್ನ ಕಾರಣದಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗದೆ ಅಲ್ಲ ಜರ್ಮನಿಯಲ್ಲೇ ಉಳಿದುಕೊಂಡಿದ್ದರು.
ನಾಲ್ಕನೇ ಹಂತದ ಲಾಕ್ಡೌನ್ ಸಡಿಲಗೊಳಿಸಿದ ನಂತರ ವಿಮಾನ ಹಾರಾಟಗಳಿಗೆ ಅವಕಾಶವನ್ನು ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ವಿಶ್ವನಾಥನ್ ಆನಂದ್ ವಾಪಾಸಾಗುತ್ತಿದ್ದಾರೆ. ಶುಕ್ರವಾರ ರಾತ್ರಿ ಏರ್ ಇಂಡಿಯಾ ವಿಮಾನದ ಮೂಲಕ ಪ್ರಯಾಣವನ್ನು ಆನಂದ್ ಆರಂಭಿಸಿದ್ದು ಶನಿವಾರ ಮಧ್ಯಾಹ್ನ 1.15 ಬೆಂಗಳೂರಿಗೆ ತಲುಪಲಿದ್ದಾರೆ ಎಂದು ಅವರ ಪತ್ನಿ ಅರುಣಾ ಮಾಹಿತಿ ನೀಡಿದ್ದಾರೆ.
ಐದು ಬಾರಿಯ ಚೆಸ್ ವಿಶ್ವ ಚಾಂಪಿಯನ್ ಆನಂದ್ ಬೆಂಗಳೂರಿಗೆ ಬಂದಿಳಿದ ಕೂಡಲೇ ಕ್ವಾರಂಟೈನ್ಗೆ ಒಳಪಡಲಿದ್ದಾರೆ. ಕರ್ನಾಟಕ ಸರ್ಕಾರದ ನಿಯಮದ ಪ್ರಕಾರ ಈ ಅವಧಿಯನ್ನು ಪೂರೈಸಿದ ನಂತರ ಚೆನ್ನೈನ ತಮ್ಮ ನಿವಾಸಕ್ಕೆ ತೆರಳಲಿದ್ದಾರೆ ಎಂದು ಅರುಣಾ ಮಾಹಿತಿ ನೀಡಿದ್ದಾರೆ.
ಬಂದೆಸ್ಲಿಗಾ ಚೆಸ್ ಲೀಗ್ನಲ್ಲಿ ಪಾಲ್ಗೊಳ್ಳಲು ವಿಶ್ವನಾಥನ್ ಆನಂದ್ ಜರ್ಮನಿಗೆ ತೆರಳಿದ್ದರು. ಅಲ್ಲಿಂದ ಭಾರತಕ್ಕೆ ವಾಪಾಸಾಗಬೇಕೆನ್ನುವಷ್ಟರಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಲು ಆರಂಭಿಸಿತ್ತು. ಅದಾದ ಬಳಿಕ ಲಾಕ್ಡೌನ್ ಘೋಷಣೆಯಾದ ಕಾರಣ ವಿಶ್ವನಾಥನ್ ಆನಂದ್ ಭಾರತಕ್ಕೆ ಮರಳಲು ಸಾಧ್ಯವಾಗಿರಲಿಲ್ಲ.
ಜರ್ಮನಿಯಿಂದ ಭಾರತಕ್ಕೆ ದೆಹಲಿ ಮತ್ತು ಬೆಂಗಳೂರು ಎರಡು ನಗರಗಳಿಗೆ ಮಾತ್ರ ಸಂಪರ್ಕವಿದೆ. ಆ ಹಿನ್ನೆಲೆಯಲ್ಲಿ ವಿಶ್ವನಾಥನ್ ಆನಂದ್ ಬೆಂಗಳೂರಿಗೆ ಬಂದಿಳಿದು ಕ್ವಾರಂಟೈನ್ ಅವಧಿ ಪೂರೈಸಿದ ನಂತರ ಚೆನ್ನೈನಲ್ಲಿರುವ ತಮ್ಮ ಕುಟುಂಬವನ್ನು ಸೇರಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications