For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ಯಾದವ್‌ ನಾಯಕನಾದರೆ ವೈಸ್‌ಕ್ಯಾಪ್ಟನ್‌ ಯಾರು?

ಜುಲೈ 17 ಬುಧವಾರ, ಭಾರತದ ಕ್ರಿಕೆಟ್‌ನಲ್ಲಿ ಬದಲಾವಣೆಯ ಪರ್ವ ಮುಂದುವರಿದಿದೆ. ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಮ್‌ ಇಂಡಿಯಾ ನಿರ್ಗಮಿತ ಹೆಡ್‌ ಕೋಚ್‌ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಂಡಿತ್ತು.

ಇದರ ಬೆನ್ನಲ್ಲೇ ಟೀಮ್‌ ಇಂಡಿಯಾಗೆ ಮೊದಲು ಹೊಸ ಮುಖ್ಯ ಕೋಚ್ ಸಿಕ್ಕಿತು. ರಾಹುಲ್‌ ದ್ರಾವಿಡ್‌ ಸ್ಥಾನಕ್ಕೆ ಗೌತಮ್ ಗಂಭೀರ್ ಅವರನ್ನು ಆಯ್ಕೆ ಮಾಡಲಾಗಿತ್ತು.

ಟಿ20 ಮಾದರಿ ಕ್ರಿಕೆಟ್‌ಗೆ ರೋಹಿತ್ ಶರ್ಮಾ ನಿವೃತ್ತಿಯಾದ ನಂತರ ಇದೀಗ ನಾಯಕನ ಸ್ಥಾನ ಖಾಲಿಯಾಗಿದೆ. ಇದಕ್ಕೆ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿತ್ತು. ಹಾರ್ದಿಕ್‌ ತಂಡದ ಉಪನಾಯಕರಾಗಿದ್ದರು.

Suryakumar Yadav becomes the captain who will be vice-captain

ಆದರೆ ಇದ್ದಕ್ಕಿದ್ದಂತೆ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ನಾಯಕತ್ವವನ್ನು ಸೂರ್ಯಕುಮಾರ್ ಯಾದವ್‌ ಹಸ್ತಾಂತರಿಸಲು ಯೋಚಿಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಸೂರ್ಯಕುಮಾರ್ ನಾಯಕನಾದರೆ ವೈಸ್‌ಕ್ಯಾಪ್ಟನ್‌ ಯಾರು ಎಂಬ ಪ್ರಶ್ನೆ ಎದ್ದಿದೆ. ಈ ರೇಸ್‌ನಲ್ಲಿ ಟೀಮ್‌ ಇಂಡಿಯಾ ಐವರು ಆಟಗಾರರು ಇದ್ದಾರೆ.

ಋತುರಾಜ್ ಗಾಯಕ್ವಾಡ್

ಈ ಹಿಂದೆಯೂ ಋತುರಾಜ್ ಗಾಯಕ್ವಾಡ್ ಟೀಮ್‌ ಇಂಡಿಯಾ ನಾಯಕತ್ವ ವಹಿಸಿದ್ದಾರೆ. ಕಳೆದ ವರ್ಷ ಏಷ್ಯನ್ ಗೇಮ್ಸ್ ವೇಳೆ ಋತುರಾಜ್‌ ನಾಯಕತ್ವದಲ್ಲಿ ಭಾರತ ಚಿನ್ನದ ಪದಕ ಗೆದ್ದುಕೊಂಡಿತ್ತು. ಅಲ್ಲದೆ ಋತುರಾಜ್‌ 2024ರ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿದ್ದಾರೆ.

ಎಂಎಸ್‌ ಧೋನಿ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದಾರೆ. ಹೀಗಿರುವಾಗ ಋತುರಾಜ್ ಅವರ ಕೈ ಮೇಲುಗೈ ಸಾಧಿಸಲಿದೆ. ಅಂದರೆ ಟೀಮ್‌ ಇಂಡಿಯಾದ ಉಪನಾಯಕನ ಸ್ಥಾನಕ್ಕೆ ಋತುರಾಜ್‌ ಹೆಸರು ಕೇಳಿಬರುತ್ತಿದೆ.

ಸಂಜು ಸ್ಯಾಮ್ಸನ್

ಐಪಿಎಲ್‌ನಲ್ಲಿ ದೀರ್ಘ ಕಾಲ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿರುವ ಸಂಜು ಸ್ಯಾಮ್ಸನ್ ಈ ಹುದ್ದೆಗೆ ದೊಡ್ಡ ಸ್ಪರ್ಧಿಯಾಗಿದ್ದಾರೆ. ಸಂಜು ನಾಯಕತ್ವದಲ್ಲಿ ರಾಜಸ್ಥಾನ ತಂಡ 2022ರಲ್ಲಿ ಫೈನಲ್ ತಲುಪಿತ್ತು. ಸ್ಯಾಮ್ಸನ್‌ಗೆ ಸಾಕಷ್ಟು ನಾಯಕತ್ವದ ಅನುಭವವಿದೆ. ಭಾರತ ತಂಡವು ಇದರ ಪ್ರಯೋಜನ ಪಡೆಯಬಹುದು.

ಜಸ್ಪ್ರೀತ್ ಬುಮ್ರಾ

ಟೆಸ್ಟ್‌ನಲ್ಲಿ ಭಾರತವನ್ನು ಮುನ್ನಡೆಸಿರುವ ಅನುಭವಿ ಬೌಲರ್ ಜಸ್ಪ್ರೀತ್ ಬುಮ್ರಾ ಟಿ20ಯಲ್ಲೂ ನಾಯಕತ್ವ ವಹಿಸಿಕೊಂಡಿದ್ದಾರೆ. ಕಳೆದ ವರ್ಷ ಐರ್ಲೆಂಡ್ ಪ್ರವಾಸದಲ್ಲಿ ಬುಮ್ರಾ ತಂಡದ ನಾಯಕರಾಗಿದ್ದರು.

ಟೀಮ್ ಇಂಡಿಯಾದಲ್ಲಿ ಬುಮ್ರಾ ಗೌರವಾನ್ವಿತರಾಗಿದ್ದಾರೆ. ಎಲ್ಲಾ ಆಟಗಾರರು ಅವರನ್ನು ಇಷ್ಟಪಡುತ್ತಾರೆ. ಹೀಗಾಗಿ ಬುಮ್ರಾ ಉಪನಾಯಕನಾದರೆ ಅವರ ಅನುಭವ ತಂಡಕ್ಕೆ ಉಪಯುಕ್ತವಾಗಬಹುದು.

ರಿಷಬ್ ಪಂತ್

ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿರುವ ರಿಷಬ್ ಪಂತ್ ಅಂತರಾಷ್ಟ್ರೀಯ ಪಂದ್ಯಗಳಲ್ಲೂ ಕಮಾಂಡಿಂಗ್ ಮಾಡಿದ ಅನುಭವ ಹೊಂದಿದ್ದಾರೆ. ಪಂತ್‌ ಟಿ20ಯಲ್ಲಿ ಭಾರತಕ್ಕೆ ನಾಯಕ ಆಗಿದ್ದಾರೆ.

ಕಾರು ಅಪಘಾತದ ಮೊದಲು, ಪಂತ್ ಭಾರತದ ಮುಂದಿನ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದರು. ಆದರೆ ಒಂದು ವರ್ಷದಲ್ಲಿ ಬಹಳಷ್ಟು ಬದಲಾಗಿದೆ. ಅವರು ಈ ವರ್ಷ ಐಪಿಎಲ್‌ನಲ್ಲಿ ಪುನರಾಗಮನ ಮಾಡಿದರು.

ಬಳಿಕ ಟಿ 20 ವಿಶ್ವಕಪ್‌ನಲ್ಲೂ ಅತ್ಯುತ್ತಮ ಪ್ರದರ್ಶನವನ್ನು ತೋರಿಸಿದರು. ಇದೀಗ ಉಪನಾಯಕನ ಸ್ಥಾನಕ್ಕೆ ಪಂತ್ ಸೂಕ್ತ ಎನ್ನಲಾಗುತ್ತಿದೆ.

ಶುಭಮನ್ ಗಿಲ್

ಇತ್ತೀಚೆಗಷ್ಟೇ ಜಿಂಬಾಬ್ವೆ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಶುಭಮನ್ ಗಿಲ್ ಕೂಡ ಉಪನಾಯಕ ಹುದ್ದೆಯ ರೇಸ್ ನಲ್ಲಿದ್ದಾರೆ. ಗಿಲ್‌ ನಾಯಕತ್ವದಲ್ಲಿ ಟೀಮ್ ಇಂಡಿಯಾ 5 ಟಿ20 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದಿದೆ. ಗಿಲ್ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದಾರೆ.

Story first published: Wednesday, July 17, 2024, 22:17 [IST]
Other articles published on Jul 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+