ಮುಂಬೈ, ಏಪ್ರಿಲ್ 21: ಕಾಲದ ಗಡಿಯಾರದ ಮುಂದೆ ನಾವೆಷ್ಟು ಬದಲಾಗುತ್ತಾ ಹೋಗುತ್ತೇವೆ ಅಲ್ಲವೆ? ಈಗ ಒಂದು ರೀತಿ ಇದ್ದವರು ಇನ್ನತ್ತು ವರ್ಷ ಕಳೆದ ಮೇಲೆ ಇನ್ ಹೇಗೋ ಬದಲಾಗಿರುತ್ತೇವೆ. ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸುಮಾರು 9 ವರ್ಷಗಳ ಹಿಂದಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಭಾರತದ ಬೆಸ್ಟ್ ನಾಯಕ, ವಿಶ್ವದ ಬ್ಯಾಟ್ಸ್ಮನ್, ಬೌಲರ್ ಹೆಸರಿಸಿದ ಶ್ರೀಶಾಂತ್
2011ರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಕ್ಯಮರಾದೆದುರು ನಕ್ಕು ಪೋಸ್ ಕೊಟ್ಟಿದ್ದ ಫೋಟೋ ಇದು. ದೇಸಿ ದಿರಿಸಿನಲ್ಲಿರುವ ಚಿಗುರು ಮೀಸೆಯ ಹಾರ್ದಿಕ್-ಕೃನಾಲ್ ಅವರ ಫೋಟೋ ನೋಡೋಕೆ ಗಮ್ಮತ್ತಾಗಿಯೂ ಇದೆ. ಕಿರಿಯ ಸಹೋದರ ಹಾರ್ದಿಕ್ ಈ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ರೋಹಿತ್ ಯಾಕೆ ಐಪಿಎಲ್ನ ಬೆಸ್ಟ್ ಕ್ಯಾಪ್ಟನ್: ಕಾರಣ ಹೇಳಿದ ಮಾಜಿ ಟೀಮ್ ಇಂಡಿಯಾ ಕೋಚ್
ಇನ್ಸ್ಟಾಗ್ರಾಮ್ ಫೋಟೋ ಜೊತೆ ಹಾರ್ದಿಕ್, '2011ರ ಹಳೆಯ ಫೋಟೋ ಇದು. ಕಾಲ ಹೇಗೆಲ್ಲ ಬದಲಾಗುತ್ತದೆ ಅಲ್ಲವೆ ಕೃನಾಲ್ ಪಾಂಡ್ಯ?. ಸ್ವಾಗ್ ಮೇರಾ ದೇಸಿ ಹೈ' ಎಂದು ಬರೆದುಕೊಂಡಿದ್ದಾರೆ. ಬೆನ್ನು ನೋವಿಗೆ ತುತ್ತಾಗಿದ್ದ ಹಾರ್ದಿಕ್ ಪಾಂಡ್ಯ ಬಹುಕಾಲ ಟೀಮ್ ಇಂಡಿಯಾದಿಂದ ಹೊರಗಿದ್ದರು.
ಮೊಹಮದ್ ಕೈಫ್ 'ಭಾಯ್ ಸಾಹಬ್' ಆದ ಕ್ಷಣವನ್ನು ಹೇಳಿದ ಸಚಿನ್ ತೆಂಡೂಲ್ಕರ್
ಗಾಯದಿಂದ ಚೇತರಿಕೊಂಡ ಬಳಿಕ ಹಾರ್ದಿಕ್, ಕಳೆದ ಮಾರ್ಚ್ನಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ ತಂಡ ಪ್ರವಾಸ ಬಂದಿದ್ದಾಗ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದರು. ಆದರೆ ಭಾರತ vs ದಕ್ಷಿಣ ಆಫ್ರಿಕಾ ಸರಣಿ ನಡೆಯಲೇ ಇಲ್ಲ. ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯ ಮಳೆಯಿಂದ ರದ್ದಾದರೆ, ಇನ್ನೆರಡು ಪಂದ್ಯಗಳು ಕೊರೊನಾವೈರಸ್ನಿಂದ ರದ್ದುಗೊಂಡವು.