
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಅವರು ವಿಕೆಟ್ ಕೀಪರ್- ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅವರಿಗಿಂತ ಮೊದಲು ರಿಷಭ್ ಪಂತ್ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿರಬೇಕು ಮತ್ತು ಪ್ರತಿ ಟಿ20 ವಿಶ್ವಕಪ್ ಪಂದ್ಯದ ಇನ್ನಿಂಗ್ಸ್ ಪ್ರಾರಂಭಿಸಬೇಕು ಎಂದು ಪರಿಗಣಿಸಿದ್ದಾರೆ.
ಟಿ20 ವಿಶ್ವಕಪ್ 2022ರಲ್ಲಿ ದಿನೇಶ್ ಕಾರ್ತಿಕ್ ಎಲ್ಲಾ ನಾಲ್ಕು ಸೂಪರ್ 12 ಪಂದ್ಯಗಳಲ್ಲಿ ಭಾರತದ ವಿಕೆಟ್ ಕೀಪರ್ ಆಗಿದ್ದರೆ, ರಿಷಭ್ ಪಂತ್ ಬೆಂಚ್ ಕಾಯಿಸಿದರು.
ವಿಶ್ವಕಪ್ಗೆ ಮುಂಚಿತವಾಗಿ ದಿನೇಶ್ ಕಾರ್ತಿಕ್ ಮೊದಲ ಆಯ್ಕೆಯ ಕೀಪರ್ ಎಂದು ನಿರೀಕ್ಷಿಸಲಾಗಿತ್ತು, ರಿಷಭ್ ಪಂತ್ ಆಡುವ 11ರ ಬಳಗದಲ್ಲಿ 37 ವರ್ಷದ ದಿನೇಶ್ ಕಾರ್ತಿಕ್ಗಿಂತ ಮೊದಲು ಆಡಬೇಕೆಂದು ಹಲವರು ಹೇಳಿದ್ದಾರೆ.
ಆಸ್ಟ್ರೇಲಿಯದ ಟಿ20 ವಿಶ್ವಕಪ್ ತಂಡದಲ್ಲಿ ಟಿಮ್ ಡೇವಿಡ್ ಸೇರ್ಪಡೆಯನ್ನು ಇಯಾನ್ ಚಾಪೆಲ್ ಭಾರತೀಯ ಸೆಟಪ್ನೊಂದಿಗೆ ಹೋಲಿಸಿದರು ಮತ್ತು ದಿನೇಶ್ ಕಾರ್ತಿಕ್ ಪುನರಾಗಮನವನ್ನು ಉಲ್ಲೇಖಿಸಿದರು. ಅಂಡರ್ ಫೈರಿಂಗ್ ದಿನೇಶ್ ಕಾರ್ತಿಕ್ ಬದಲಿಗೆ ರಿಷಭ್ ಪಂತ್ ಅವರನ್ನು ಸೇರಿಸಿಕೊಳ್ಳುವಂತೆ ವ್ಯಾಪಕ ಕೂಗು ಕೇಳಿಬಂದಿದೆ.

"ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿಮ್ ಡೇವಿಡ್ ಏನು ಮಾಡಿದ್ದಾರೆ? ಕೆಲವೊಮ್ಮೆ, ಆಯ್ಕೆಗಾರರು ದೇಶೀಯ ಫಾರ್ಮ್ನಲ್ಲಿರುವ ಆಟಗಾರರನ್ನು ಆಯ್ಕೆ ಮಾಡುತ್ತಾರೆ. ಭಾರತವು ಒಂದು ಶ್ರೇಷ್ಠ ಉದಾಹರಣೆ ಎಂದು ನಾನು ಭಾವಿಸುತ್ತೇನೆ. ಭಾರತ ತಂಡ ದಿನೇಶ್ ಕಾರ್ತಿಕ್ ಅವರನ್ನು ರಿಷಭ್ ಪಂತ್ಗಿಂತ ಮುಂಚಿತವಾಗಿ ಆಯ್ಕೆ ಮಾಡುತ್ತಿದ್ದಾರೆ. ಇದು ಹಾಸ್ಯಾಸ್ಪದ! ಅಂದರೆ, ರಿಷಭ್ ಪಂತ್ ಪ್ರತಿಯೊಂದು ಪಂದ್ಯವನ್ನು ಆಡಬೇಕು," ಎಂದು ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ನಲ್ಲಿ ಹೇಳಿದರು.
"ನಾನು ಟಿಮ್ ಡೇವಿಡ್ಗಾಗಿ ಕಾಯಲು ಹೇಳುತ್ತಿದ್ದೇನೆ, ವಿಶ್ವಕಪ್ ನಂತರ ಅವನನ್ನು ಆಡಿಸೋಣ. ಕೆಲವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಯ್ಕೆ ಮಾಡೋಣ. ಸರಾಸರಿ 120 ಕಿಮೀ ಹುಡುಗರನ್ನು ಆಯ್ಕೆ ಮಾಡಬೇಡಿ, 150 ಕಿಮೀ ಎಸೆಯುವ ಹುಡುಗರನ್ನು ಆಯ್ಕೆ ಮಾಡಿ. ಏಕೆಂದರೆ ಅದು ಅಷ್ಟು ಸುಲಭವಲ್ಲ," ಎಂದು ಅವರು ಹೇಳಿದರು.

ಗಮನಾರ್ಹವಾಗಿ, 2022ರಲ್ಲಿ ಬಾಂಗ್ಲಾದೇಶ ಪಂದ್ಯದವರೆಗೆ 28 ಟಿ20 ಪಂದ್ಯಗಳನ್ನು ಆಡಿದ ದಿನೇಶ್ ಕಾರ್ತಿಕ್, ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ತಂಡದಿಂದ ನಿರ್ಲಕ್ಷಿಸಲ್ಪಟ್ಟಿದ್ದಾರೆ.