For Quick Alerts
ALLOW NOTIFICATIONS  
For Daily Alerts
 

IND vs SA: ಪಂತ್ ಬದಲು ದೀಪಕ್ ಹೂಡಾ ಆಯ್ಕೆಯಾಗಿದ್ದಕ್ಕೆ ಆಶ್ಚರ್ಯಗೊಂಡ ವಾಸಿಂ ಜಾಫರ್

T20 World Cup 2022: Wasim Jaffer Surprised By Deepak Hoodas Selection Than Rishabh Pant Against South Africa

ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ 2022ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದ ಸೋಲು ಹಲವಾರು ಚರ್ಚೆಗಳನ್ನು ಹುಟ್ಟುಹಾಕಿದ್ದು, ಭಾರತೀಯ ಆಟಗಾರರು ಮೈದಾನದಲ್ಲಿ ಕ್ರಿಕೆಟ್‌ನ ಕಳಪೆ ಪ್ರದರ್ಶನದಿಂದ ಮಾತ್ರವಲ್ಲದೆ ತಂಡದ ಆಯ್ಕೆಯಿಂದಲೂ ಎಡವಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತವು ಕೆಲವು ನಿರ್ಣಾಯಕ ರನ್-ಔಟ್ ಅವಕಾಶಗಳನ್ನು ತಪ್ಪಿಸಿಕೊಂಡಿತು. ಪಂದ್ಯದ ದಿಕ್ಕನ್ನೇ ಬದಲಾಯಿಸುವ ಏಡೆನ್ ಮಾರ್ಕ್ರಾಮ್ ನೀಡಿದ ಕ್ಯಾಚ್ ಅನ್ನು ವಿರಾಟ್ ಕೊಹ್ಲಿ ಕೈಬಿಟ್ಟರು. ಭಾರತ ತಂಡವು ಮೊದಲ ಎರಡು ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿದ್ದರೂ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಬದಲಿಗೆ ದೀಪಕ್ ಹೂಡಾ ಅವರಿಗೆ ಅವಕಾಶ ನೀಡಿದರು.

ನಾಯಕ ರೋಹಿತ್ ಶರ್ಮಾ ಅವರು ದೀಪಕ್ ಹೂಡಾ ಅವರನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಮಾತ್ರ ಆಡಿಸಿದರು, ಅವರನ್ನು ಬೌಲಿಂಗ್‌ಗೆ ಬಳಸಿಕೊಳ್ಳಲಿಲ್ಲ. ಹೀಗಾಗಿ ರೋಹಿತ್ ಶರ್ಮಾ ಅವರ ನಿರ್ಧಾರದ ಬಗ್ಗೆ ಭಾರತ ತಂಡದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ದೀಪಕ್ ಹೂಡಾ ರಿಷಭ್ ಪಂತ್‌ ಆಯ್ಕೆ ಮಾಡಬಹುದಿತ್ತು

ದೀಪಕ್ ಹೂಡಾ ರಿಷಭ್ ಪಂತ್‌ ಆಯ್ಕೆ ಮಾಡಬಹುದಿತ್ತು

ಭಾರತ ತಂಡವು ದೀಪಕ್ ಹೂಡಾ ಅವರನ್ನು ಬ್ಯಾಟರ್ ಆಗಿ ಮಾತ್ರ ಬಯಸಿದ್ದರೆ, ಅವರ ಬದಲಾಗಿ ರಿಷಭ್ ಪಂತ್‌ ಆಯ್ಕೆ ಮಾಡಬಹುದಿತ್ತು. ಏಕೆಂದರೆ ಅದು ಭಾರತಕ್ಕೆ ಉತ್ತಮ ಆಯ್ಕೆಯಾಗಿತ್ತು ಮತ್ತು ಹೆಚ್ಚು ಅನುಭವಿ ಬ್ಯಾಟಿಂಗ್ ಹೊಂದಿದ್ದರು ಎಂದು ತಿಳಿಸಿದರು.

ವರದಿಗಳ ಪ್ರಕಾರ, ದೀಪಕ್ ಹೂಡಾ ಬೌಲಿಂಗ್ ಮಾಡದಿದ್ದರೆ, ರಿಷಭ್ ಪಂತ್ ಉತ್ತಮ ಆಯ್ಕೆಯಾಗಿದ್ದರು ಎಂದು ವಾಸಿಂ ಜಾಫರ್ ಹೇಳಿದ್ದಾರೆ. ಪಂತ್ ಆಸ್ಟ್ರೇಲಿಯಾದ ಪರಿಸ್ಥಿತಿಯಲ್ಲಿ ಆಡಿದ್ದಾರೆ ಮತ್ತು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ದೀಪಕ್ ಹೂಡಾ ಆಸ್ಟ್ರೇಲಿಯಾದಲ್ಲಿ ಆಡಿಲ್ಲ ಎಂದು ಮಾಜಿ ಬ್ಯಾಟರ್ ವಾಸಿಂ ಜಾಫರ್ ಹೇಳಿದ್ದಾರೆ.

ರಾಹುಲ್ ಫಾರ್ಮ್‌ ಭಾರತದ ಅಗ್ರ ಕ್ರಮಾಂಕದ ಮೇಲೆ ಪರಿಣಾಮ

ರಾಹುಲ್ ಫಾರ್ಮ್‌ ಭಾರತದ ಅಗ್ರ ಕ್ರಮಾಂಕದ ಮೇಲೆ ಪರಿಣಾಮ

ಕೆಎಲ್ ರಾಹುಲ್ ಫಾರ್ಮ್‌ನಿಂದ ಹೊರಗುಳಿದಿರುವುದರಿಂದ ಭಾರತದ ಅಗ್ರ ಕ್ರಮಾಂಕದ ಮೇಲೆ ಪರಿಣಾಮ ಬೀರುತ್ತಿದೆ. ಭಾರತಕ್ಕೆ ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯಲು ರಿಷಭ್ ಪಂತ್‌ಗೆ ಅವಕಾಶ ನೀಡಬೇಕು ಮತ್ತು ಕೆಎಲ್ ರಾಹುಲ್‌ಗೆ ಸ್ವಲ್ಪ ವಿಶ್ರಾಂತಿ ನೀಡಬೇಕು ಎಂದು ವಾಸಿಂ ಜಾಫರ್ ಹೇಳಿದ್ದಾರೆ.

ಟೂರ್ನಿಯಲ್ಲಿ ಭಾರತ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಎರಡಂಕಿಯ ಸ್ಕೋರ್ ದಾಟಲು ಸಾಧ್ಯವಾಗಿಲ್ಲ. ದೀಪಕ್ ಹೂಡಾ ಬದಲಿಗೆ ಭಾರತ ಅಕ್ಷರ್ ಪಟೇಲ್ ಅವರನ್ನು ಕರೆತರಬಹುದು ಮತ್ತು ರಿಷಭ್ ಪಂತ್ ಅವರು ರೋಹಿತ್ ಶರ್ಮಾ ಅವರೊಂದಿಗೆ ಓಪನಿಂಗ್ ಮಾಡಬಹುದು ಎಂದು ವಾಸಿಂ ಜಾಫರ್ ಸಲಹೆ ನೀಡಿದರು.

133 ರನ್‌ ರಕ್ಷಿಸಿಕೊಳ್ಳುವಲ್ಲಿ ಭಾರತ ವಿಫಲ

133 ರನ್‌ ರಕ್ಷಿಸಿಕೊಳ್ಳುವಲ್ಲಿ ಭಾರತ ವಿಫಲ

ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133 ರನ್ ಗಳಿಸುವಲ್ಲಿ ಸೂರ್ಯ ಕುಮಾರ್ ಯಾದವ್ 40 ಎಸೆತಗಳಲ್ಲಿ 68 ರನ್ ಕೊಡುಗೆ ಇತ್ತು. ಅವರನ್ನು ಹೊರತುಪಡಿಸಿದರೆ ಇತರ ಬ್ಯಾಟ್ಸ್‌ಮನ್‌ಗಳು ದೊಡ್ಡ ಸ್ಕೋರ್ ಮಾಡಲು ವಿಫಲವಾದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತಿತು. 133 ರನ್‌ಗಳ ಕೆಳಗಿನ ಮೊತ್ತವನ್ನು ಭಾರತ ರಕ್ಷಿಸಿಕೊಳ್ಳುವುದು ಯಾವಾಗಲೂ ಸವಾಲಾಗಿದೆ.

ಆರಂಭದಲ್ಲಿ ಅರ್ಶ್‌ದೀಪ್ ಸಿಂಗ್ ಮತ್ತೊಂದು ಉತ್ತಮ ಸ್ಪೆಲ್ ಬೌಲ್ ಮಾಡಿದರು. ಆದರೆ ಏಡನ್ ಮಾರ್ಕ್ರಾಮ್ (41 ಎಸೆತಗಳಲ್ಲಿ 52) ಮತ್ತು ಡೇವಿಡ್ ಮಿಲ್ಲರ್ (46 ಎಸೆತಗಳಲ್ಲಿ ಔಟಾಗದೆ 59), ಪಂದ್ಯದ ಅತ್ಯುತ್ತಮ ಟಿ20 ಫಿನಿಶರ್‌ಗಳಾಗಿದ್ದರು, ಅಂತಿಮವಾಗಿ 19.4 ಓವರ್‌ಗಳಲ್ಲಿ ಗುರಿ ತಲುಪಿತು.

Story first published: Monday, October 31, 2022, 18:02 [IST]
Other articles published on Oct 31, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+