For Quick Alerts
ALLOW NOTIFICATIONS  
For Daily Alerts
 

IND vs BAN: ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡರ್ ಪದಕ ಪಡೆದ ಆಟಗಾರ ಯಾರು?

ಶನಿವಾರ, ಜೂನ್ 22ರಂದು ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 8ರ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 50 ರನ್‌ಗಳಿಂದ ಗೆಲುವು ಸಾಧಿಸಿತು.

ಇದರ ಬೆನ್ನಲ್ಲೇ ವೆಸ್ಟ್‌ಇಂಡೀಸ್‌ ಲೆಜೆಂಡರಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರು ಅಗ್ರ ಶ್ರೇಯಾಂಕದ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಗೆ "ಫೀಲ್ಡರ್ ಆಫ್ ದಿ ಮ್ಯಾಚ್' ಪ್ರಶಸ್ತಿ ನೀಡಿ ಗೌರವಿಸಿದರು.

T20 World Cup 2024 Suryakumar Yadav Recieves Best Fielder Medal in Match Against Bangladesh

ಆ್ಯಂಟಿಗುವಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್‌ 8ರ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 50 ರನ್‌ಗಳಿಂದ ಸೋಲಿಸಿದ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಸೆಮಿಫೈನಲ್ ಅರ್ಹತೆಗೆ ಪಡೆಯಲು ಒಂದು ಹೆಜ್ಜೆ ಮುಂದಿಟ್ಟಿತು.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನ, ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ಅವರ ಮಾರಕ ಬೌಲಿಂಗ್ ದಾಳಿಯು ಮುಖ್ಯಾಂಶವೆನಿಸಿತು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಅತ್ಯುತ್ತಮ ಫೀಲ್ಡರ್ ಪದಕ ಸಮಾರಂಭದ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದು ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರತಿ ಪಂದ್ಯದ ನಂತರ ನಡೆಯುತ್ತದೆ.

ಭಾರತ ತಂಡದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಂಡದ ಫೀಲ್ಡಿಂಗ್ ಪ್ರದರ್ಶನಕ್ಕಾಗಿ ಶ್ಲಾಘಿಸಿದರು. ಎದುರಾಳಿ ತಂಡಕ್ಕೆ ಸುಲಭವಾಗಿ ರನ್ ಗಳಿಸಲು ಯಾವುದೇ ಅವಕಾಶವನ್ನು ಬಿಟ್ಟುಕೊಡದ ಕಾರಣ, ಪಟ್ಟುಬಿಡದೆ ಇರುವುದರ ಅರ್ಥವನ್ನು ತಂಡವು ಪ್ರದರ್ಶಿಸಿದೆ ಎಂದು ಹೇಳಿದರು.

"ತಂಡಕ್ಕೆ ಪಂದ್ಯದಲ್ಲಿ ಗೆಲ್ಲುವ ಹಸಿವು ಕಾಣಿಸುತ್ತಿತ್ತು. ಅದಕ್ಕೇ ಆಟಗಾರರಿಂದ ಇಂತಹ ಪ್ರದರ್ಶನ ಹೊರಬಂದಿತು. ನಮ್ಮ ಪ್ರಯತ್ನಗಳು ಒಂದು ಸಾಮಾನ್ಯ ಉದ್ದೇಶಕ್ಕೆ ಹೊಂದಿಕೊಂಡಾಗ, ನಾವು ನಿಗದಿಪಡಿಸಿದ ಮಾನದಂಡಗಳನ್ನು ಮಾತ್ರ ನಾವು ಪೂರೈಸುವುದಿಲ್ಲ, ನಾವು ಸಾರ್ವಕಾಲಿಕವಾಗಿ ಮರುವ್ಯಾಖ್ಯಾನಿಸುತ್ತಲೇ ಇರುತ್ತೇವೆ," ಎಂದು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ತಿಳಿಸಿದರು.

T20 World Cup 2024 Suryakumar Yadav Recieves Best Fielder Medal in Match Against Bangladesh

ಇದೇ ವೇಳೆ ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್ ಮತ್ತು ನಾಯಕ ರೋಹಿತ್ ಶರ್ಮಾ ಅವರನ್ನು ಅತ್ಯುತ್ತಮ ಫೀಲ್ಡಿಂಗ್ ಪದಕದ ಸ್ಪರ್ಧಿಗಳಾಗಿ ಹೆಸರಿಸಿದರು.

ಟಿ ದಿಲೀಪ್ ಅವರು 'ನಿರ್ಭಯತೆ ಮತ್ತು ಸಾಟಿಯಿಲ್ಲದ ಆನ್-ಫೀಲ್ಡ್ ವರ್ಚಸ್ಸಿಗೆ' ಸಮಾನಾರ್ಥಕವಾದ ಹೆಸರನ್ನು ಪರಿಚಯಿಸಿದ ವೆಸ್ಟ್ ಇಂಡೀಸ್ ಲೆಜೆಂಡ್ ಸರ್ ವಿವಿಯನ್ ರಿಚರ್ಡ್ಸ್ ಅವರಿಂದ ಸೂರ್ಯಕುಮಾರ್ ಯಾದವ್‌ಗೆ ಪದಕವನ್ನು ನೀಡಲಾಯಿತು.

ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಉತ್ತಮ ಡೈವಿಂಗ್ ಕ್ಯಾಚ್ ಪಡೆದು ಲಿಟ್ಟನ್ ದಾಸ್ ಅವರನ್ನು ಔಟಾಗುವ ಮೂಲಕ ಹಾರ್ದಿಕ್ ಪಾಂಡ್ಯ ಮತ್ತು ಭಾರತ ತಂಡಕ್ಕೆ ಮೊದಲ ವಿಕೆಟ್ ನೀಡಿದರು.

ಸೂರ್ಯಕುಮಾರ್ ಯಾದವ್‌ಗೆ ಪದಕ ನೀಡಿದ ಸರ್ ವಿವಿಯನ್ ರಿಚರ್ಡ್ಸ್, ಭಾರತ ತಂಡದ ಪ್ರದರ್ಶನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು ಮತ್ತು ವೆಸ್ಟ್ ಇಂಡೀಸ್ ತಂಡವು ಪ್ರಶಸ್ತಿ ಗೆಲ್ಲಲು ಸಾಧ್ಯವಾಗದಿದ್ದರೆ, 11 ವರ್ಷಗಳ ಸುದೀರ್ಘ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಲು ಅವರು ಭಾರತ ತಂಡಕ್ಕೆ ಬೆಂಬಲಿಸಿದರು.

"ಈಗಾಗಲೇ ಶಕ್ತಿಶಾಲಿಯಾಗಿರುವ ಭಾರತ ತಂಡಕ್ಕೆ ನಾನು ಏನು ಹೇಳಬಲ್ಲೆ? ನಿಮಗೆ ತಿಳಿದಿದೆ, ನೀವು ಇಲ್ಲಿಯವರೆಗೂ ಹೋಗುತ್ತಿರುವುದು ಒಳ್ಳೆಯದು. ನಾನು ಇದನ್ನು ಮಾತ್ರ ಹೇಳಬಲ್ಲೆ, ವೆಸ್ಟ್ ಇಂಡೀಸ್ ಹುಡುಗರು ಗೆಲ್ಲಲು ಸಾಧ್ಯವಾಗದಿದ್ದರೆ, ನಾನು ನಿಮಗೆ ಬೆಂಬಲ ನೀಡುತ್ತೇನೆ," ಎಂದು ವೆಸ್ಟ್ ಇಂಡೀಸ್ ಲೆಜೆಂಡ್ ಹೇಳಿದರು.

T20 World Cup 2024 Suryakumar Yadav Recieves Best Fielder Medal in Match Against Bangladesh

2022ರ ಅಂತ್ಯದಲ್ಲಿ ಎದುರಿಸಿದ ಭೀಕರ ಕಾರು ಅಪಘಾತದ ನಂತರ, ಬ್ಯಾಟರ್-ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಪ್ರದರ್ಶನದ ಬಗ್ಗೆ ಸರ್ ವಿವಿಯನ್ ರಿಚರ್ಡ್ಸ್ ಸಂತೋಷ ವ್ಯಕ್ತಪಡಿಸಿದರು.

ಅತ್ಯುತ್ತಮ ಫೀಲ್ಡಿಂಗ್ ಪದಕ ಸ್ವೀಕರಿಸಿದ ನಂತರ ಸೂರ್ಯಕುಮಾರ್ ಯಾದವ್, "ನನಗೆ ತುಂಬಾ ಚೆನ್ನಾಗಿದೆ. ಮೊಹಮ್ಮದ್ ಸಿರಾಜ್ ಎಂದು ನಾನು ಭಾವಿಸಿದ್ದೆ... ಅವರು ಮೊದಲ ಪಂದ್ಯದಿಂದ ಮೈದಾನದಲ್ಲಿ ಬೆಂಚ್‌ಮಾರ್ಕ್ ಅನ್ನು ನಿಜವಾಗಿಯೂ ಎತ್ತರಕ್ಕೆ ಹೊಂದಿಸಿದ್ದಾರೆ ಮತ್ತು ಶ್ರೇಷ್ಠ ಲೆಜೆಂಡ್ ಕಡೆಯಿಂದ ಈ ಪದಕವನ್ನು ಪಡೆದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ," ಎಂದರು.

"ಫೀಲ್ಡಿಂಗ್‌ನಲ್ಲಿ ನಾವು ದಿಲೀಪ್ ಸರ್ ಅವರೊಂದಿಗೆ ನಿಜವಾಗಿಯೂ ಶ್ರಮಿಸುತ್ತಿದ್ದೇವೆ ಮತ್ತು ಅದು ಉತ್ತಮವಾಗಿದೆ. ಆಶಾದಾಯಕವಾಗಿ, ಪದಕದೊಂದಿಗೆ ಈ ಪ್ರಯಾಣವು ಮುಂದುವರಿಯುತ್ತದೆ ಮತ್ತು ಇದು ನನಗೆ ಸಾಕಷ್ಟು ಪ್ರೇರಣೆ ಮತ್ತು ಸ್ಫೂರ್ತಿಯನ್ನು ನೀಡುತ್ತದೆ," ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದರು.

Story first published: Sunday, June 23, 2024, 16:20 [IST]
Other articles published on Jun 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+