
ದೀಪಕ್ ಹೂಡಾಗೆ ಸ್ಥಾನ ಇಶಾನ್ ಕಿಶನ್ ಹೊರಕ್ಕೆ
ಕಳೆದ ಕೆಲ ತಿಂಗಳಿನಿಂದ ಭಾರತ ತಂಡದಲ್ಲಿ ಸಿಕ್ಕ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡಿರುವ ದೀಪಕ್ ಹೂಡಾ ಅರ್ಹವಾಗಿಯೇ ಟೀಮ್ ಇಂಡಿಯಾ ಸ್ಕ್ವಾಡ್ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಒಂದೆರಡು ವರ್ಷಗಳಲ್ಲಿ ದೀಪಕ್ ಹೂಡಾ ಅವರ ಫಾರ್ಮ್ಗೆ ಸಿಕ್ಕ ಅತ್ಯುತ್ತಮ ಉಡುಗೊರೆ ಇದಾಗಿದೆ. ಎಲ್ಲಾ ಕ್ರಮಾಂಕದಲ್ಲಿಯೂ ಆಡುವ ಸಾಮರ್ಥ್ಯವಿರುವ ದೀಪಕ್ ಹೂಡಾ ವಿಶ್ವಕಪ್ನಲ್ಲಿ ಮಿಂಚುವ ವಿಶ್ವಾಸವನ್ನು ಮೂಡಿಸಿದ್ದಾರೆ. ಮತ್ತೊಂದೆಡೆ ಆರಂಭಿಕನಾಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಮರ್ಥ್ಯವಿರುವ ಇಶಾನ್ ಕಿಶನ್ ಈ ಬಾರಿಯ ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ಇತ್ತೀಚಿನ ಕೆಲ ಪಂದ್ಯಗಳಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸಲು ವಿಫಲವಾದ ಇಶಾನ್ ಕಿಶನ್ ನಿರಾಸೆ ಅನುಭವಿಸಿದ್ದಾರೆ.
Asia Cup 2022 Final: ಪಾಕಿಸ್ತಾನ ಮಣಿಸಿ 6ನೇ ಬಾರಿ ಚಾಂಪಿಯನ್ ಆದ ಶ್ರೀಲಂಕಾ

ದಿನೇಶ್ ಕಾರ್ತಿಕ್ಗೆ ಅವಕಾಶ ರವೀಂದ್ರ ಜಡೇಜಾ ಹೊರಕ್ಕೆ
ಟೀಮ್ ಇಂಡಿಯಾದ ಈ ಬಾರಿಯ ವಿಶ್ವಕಪ್ನ ತಂಡದಲ್ಲಿ ಕಾಣಿಸಿಕೊಂಡ ಮತ್ತೊಂದು ಪ್ರಮುಖ ಹೆಸರು ದಿನೇಶ್ ಕಾರ್ತಿಕ್. ಫಿನಿಷರ್ ಆಗಿ ಭಾರತ ತಂಡದಲ್ಲಿ ಅತ್ಯಂತ ಪರಿಣಾಮಕಾರಿ ಪ್ರದರ್ಶನ ನೀಡಿರುವ ಡಿಕೆ ಅರ್ಹವಾಗಿಯೇ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಐಪಿಎಲ್ನಲ್ಲಿ ನೀಡಿದ ಅಮೋಘ ಪ್ರದರ್ಶನದ ಕಾರಣದಿಂದಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡ ಡಿಕೆ ತಮ್ಮ ಕನಸಿನಂತೆಯೇ ವಿಶ್ವಕಪ್ ಸ್ಕ್ವಾಡ್ನಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಆಲ್ರೌಂಡರ್ ರವೀಂದ್ರ ಜಡೇಜಾ ಗಾಯದ ಕಾರಣದಿಂದಾಗಿ ಈ ಬಾರಿಯ ಟಿ20 ವಿಶ್ವಕಪ್ನ ತಂಡದಿಂದ ಹೊರಬಿದ್ದಿದ್ದಾರೆ.

ಹರ್ಷಲ್ ಪಟೇಲ್ಗೆ ಸ್ಥಾನ, ವರುಣ್ ಚಕ್ರವರ್ತಿ ಔಟ್
2021ರ ಟಿ20 ವಿಶ್ವಕಪ್ನಲ್ಲಿ ನೆಟ್ ಬೌಲರ್ ಆಗಿದ್ದ ಹರ್ಷಲ್ ಪಟೇಲ್ ಈ ಬಾರಿ ಮುಖ್ಯ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಈ ಬಾರಿಯ ಟಿ20 ವಿಶ್ವಕಪ್ ನಡೆಯುವ ಕಾರಣ ಕಳೆದ ವಿಶ್ವಕಪ್ನ ಬಳಿಕ ಸ್ಕ್ವಾಡ್ನ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಂಡಿತು ಮ್ಯಾನೇಜ್ಮೆಂಟ್. ಭಾರತದ ಪರವಾಗಿ ಹಾಗೂ ಕಳೆದ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್ ಪರವಾಗಿ ಪರಿಣಾಮಕಾರಿಯಾಗಿ ಪ್ರದರ್ಶನ ನೀಡಲು ವಿಫಲವಾದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಭಾರತ ತಂಡದಿಂದ ಹೊರಬಿದ್ದಿದ್ದಾರೆ.

ರಾಹುಲ್ ಚಾಹರ್ ಬದಲಿಗೆ ಯುಜುವೇಂದ್ರ ಚಾಹಲ್
ಕಳೆದ ವರ್ಷದ ಟಿ20 ವಿಶ್ವಕಪ್ನ ತಂಡದಲ್ಲಿ ಅನುಭವಿ ಯುಜುವೇಂದ್ರ ಚಾಹಲ್ ಬದಲಿಗೆ ರಾಹುಲ್ ಚಾಹರ್ಗೆ ಅವಕಾಶ ನೀಡುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿತ್ತು ಟೀಮ್ ಇಂಡಿಯಾ ಆಯ್ಕೆ ಸಮಿತಿ. ಆಯ್ಕೆ ಮಂಡಳಿಯ ಈ ನಿರ್ಧಾರವನ್ನು ಸಮರ್ಥನೆ ಮಾಡಿಕೊಳ್ಳುವಂತಾ ಪ್ರದರ್ಶನ ರಾಹುಲ್ ಚಾಹರ್ ಅವರಿಂದ ಕಳೆದ ವರ್ಷ ಬಾರಲಿಲ್ಲ. ಆದರೆ ನಂತರ ಅನುಭವಿ ಯುಜುವೇಂದ್ರ ಚಾಹಲ್ ತನ್ನಲ್ಲಿ ಸಾಮರ್ಥ್ಯ ಇನ್ನೂ ಇದೆ ಎಂದು ಬಲವಾಗಿ ಸಮರ್ಥನೆ ಮಾಡಿಕೊಂಡರು. ಅದರ ಪರಿಣಾಮವಾಗಿ ರಾಹುಲ್ ಚಾಹರ್ ಭಾರತ ತಂಡದಿಂದ ಹೊರಬಿದ್ದರು. ಮತ್ತೆ ಭಾರತ ತಂಡದಲ್ಲಿ ರಾಹುಲ್ ರಾಹರ್ಗೆ ಸದ್ಯದ ಮಟ್ಟಿಗೆ ಅವಕಾಶವಿಲ್ಲ ಎಂಬ ಪರಿಸ್ಥಿತಿಯಿದೆ. ಅದೇ ಕಾರಣದಿಂದಾಗಿ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಯುಜುವೇಂದ್ರ ಚಾಹಲ್ ಅರ್ಹವಾಗಿಯೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು ರಾಹುಲ್ ಚಹರ್ ಹೊರಬಿದ್ದಿದ್ದಾರೆ.
ಭಾರತ ಪ್ರಶಸ್ತಿ ಗೆದ್ದಿಲ್ಲ, ಆದರೂ ಈತನಿಗಾಗಿ ಏಷ್ಯಾ ಕಪ್ ತಯಾರಿಸಿದಂತಿತ್ತು; ಸಂಜಯ್ ಮಂಜ್ರೇಕರ್

ಮೊಹಮ್ಮದ್ ಶಮಿ ಬದಲಿಗೆ ಅರ್ಷ್ದೀಪ್ ಸಿಂಗ್
ಈ ಬಾರಿಯ ಟಿ20 ವಿಶ್ವಕಪ್ನ ಅತ್ಯಂತ ಕಠಿಣ ನಿರ್ಧಾರವೆಂದೇ ಹೇಳಲಾಗುತ್ತಿರುವ ನಿರ್ಧಾರವಿದು. ಅನುಭವಿ ಮೊಹಮ್ಮದ್ ಶಮಿ ಬದಲಿಗೆ ಯುವ ಆಟಗಾರ ಅರ್ಷ್ದೀಪ್ ಸಿಂಗ್ಗೆ ಭಾರತ ತಂಡದಲ್ಲಿ ಅವಕಾಶ ನೀಡಲಾಗಿದೆ. ಕಳೆದ ವಿಶ್ವಕಪ್ನ ಬಳಿಕ ಮೊಹಮ್ಮದ್ ಶಮಿ ಟಿ20 ತಂಡದಿಂದ ಹೊರಬಿದ್ದಿದ್ದರು. ಹೀಗಾಗಿ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಹೆಚ್ಚಿನ ನಿರೀಕ್ಷೆಗಳು ಇರಲಿಲ್ಲ. ಆದರೆ ಏಷ್ಯಾ ಕಪ್ನಲ್ಲಿ ಭಾರತ ಅನುಭವಿ ಆಟಗಾರರ ಕೊರತೆಯನ್ನು ಎದುರಿಸಿದ ಕಾರಣ ಶಮಿ ಮತ್ತೆ ತಂಡಕ್ಕೆ ಸೇರ್ಪಡೆಗೊಳಿಸಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಮೊಹಮ್ಮದ್ ಶಮಿ ಅವರನ್ನು ಮೀಸಲು ಆಟಗಾರನನ್ನಾಗಿ ಹೆಸರಿಸಲಾಗಿದ್ದು ಪ್ರಾಥಮಿಕ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಯುವ ವೇಗಿ ಅರ್ಷ್ದೀಪ್ ಸಿಂಗ್ಗೆ ಭಾರತ ತಂಡದಲ್ಲಿ ಸ್ಥಾನ ದೊರೆತಿದ್ದು ಕುತೂಹಲ ಮೂಡಿಸಿದೆ.


Click it and Unblock the Notifications
