
ಮೊಹಮ್ಮದುಲ್ಲಾ ಮತ್ತು ತಮೀಮ್ ಇಕ್ಬಾಲ್
ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರಾದ ಮೊಹಮ್ಮದುಲ್ಲಾ ಮತ್ತು ತಮಿಮ್ ಇಕ್ಬಾಲ್ ಕೆರಿಬಿಯನ್ ಪ್ರಿಮಿಯರ್ ಲೀಗ್ ಆಫರ್ ತಿರಸ್ಕರಿಸಿರುವ ಆಟಗಾರರಾಗಿದ್ದಾರೆ. ಇಬ್ಬರು ಆಟಗಾರರು ಬೇರೆ ಬೇರೆ ಕಾರಣಗಳನ್ನು ನೀಡಿ ಟೂರ್ನಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಕೊರೊನಾ ವೈರಸ್ ಕಾರಣ
ನಾನು ಸಿಪಿಎಲ್ನ ಒಂದು ಫ್ರಾಂಚೈಸಿ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಸನಿಹದಲ್ಲಿದ್ದೆ. ಆದರೆ ನನ್ನ ಕುಟುಂಬದ ಕಾಳಜಿ ನನಗೆ ಮುಖ್ಯ. ಕೊರೊನಾ ವೈರಸ್ನ ಇಂತಾ ಸಂದರ್ಭದಲ್ಲಿ ನಾನು ಪ್ರಯಾಣವನ್ನು ಮಾಡುವುದಕ್ಕೆ ಅವರು ಕೂಡ ಆತಂಕಿತರಾಗಿದ್ದಾರೆ. ನಾನು ಈ ಹಿಂದೆ ಕೂಡ ಸಿಪಿಎಲ್ನಲ್ಲಿ ಆಡಿದ್ದೇನೆ. ಅಲ್ಲಿನ ಅನುಭವವನ್ನು ನಾನು ಆನಂದಿಸಿದ್ದೇನೆ ಎಂದು ಮೊಹಮ್ಮದುಲ್ಲಾ ಹೇಳಿಕೆ ನೀಡಿದ್ದಾರೆ.

ತಮೀಮ್ ಇಕ್ಬಾಲ್ ನೀಡಿದ ಕಾರಣ
ಮತ್ತೊಂದೆಡೆ ಈ ಬಗ್ಗೆ ತಮಿಮ್ ಇಕ್ಬಾಲ್ ಕೂಡ ಪ್ರತಿಕ್ರಿಯಿಸಿದ್ದಾರೆ. ತಮೀಮ್ ಇಕ್ಬಾಲ್ ಸಿಪಿಎಲ್ ಟೂರ್ನಿಯನ್ನು ತಿರಸ್ಕರಿಸಲು ಬೇರೆಯದ್ದೇ ಕಾರಣವನ್ನು ನೀಡಿದ್ದಾರೆ. ಬಾಂಗ್ಲಾದೇಶ ಪ್ರಥಮದರ್ಜೆ ಕ್ರಿಕೆಟ್ ಜೊತೆಗೆ ಹೊಂದಾಣಿಕೆಯಾಗದ ಕಾರಣಕ್ಕೆ ತಿರಸ್ಕರಿಸಿರುವುದಾಗಿ ಹೇಳಿದ್ದಾರೆ. ಬಾಂಗ್ಲಾ ಪ್ರಥಮರ್ಜೆ ಕ್ರಿಕೆಟ್ ಆಗಸ್ಟ್ನಲ್ಲಿ ಆರಂಭವಾಗುವ ನಿರೀಕ್ಷೆಯಲ್ಲಿದ್ದಾರೆ.

ಇಬ್ಬರೂ ಈ ಹಿಂದೆ ಪಾಲ್ಗೊಂಡಿದ್ದರು
ಮೊಹಮ್ಮದುಲ್ಲಾ ಹಾಗೂ ತಮೀಮ್ ಇಕ್ಬಾಲ್ ಈ ಹಿಂದಿನ ಆವೃತ್ತಿಯಲ್ಲೂ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿ ಇನ್ನಷ್ಟು ವಿದೇಶಿ ಆಟಗಾರರೊಂದಿಗೆ ಈ ಹಿಂದಿನ ಲೀಗ್ ಟೂರ್ನಿಗಿಂತ ಹೆಚ್ಚು ವರ್ಣರಂಜಿತವಾಗುವ ನಿರೀಕ್ಷೆಯಿದೆ.


Click it and Unblock the Notifications
