
ಡೆತ್ ಓವರ್ನಲ್ಲಿ ರನ್ ಸೋರಿಕೆ
ಏಷ್ಯಾ ಕಪ್ನಿಂದ ಕಳಪೆ ನಿರ್ಗಮನದ ನಂತರ ಭಾರತ ತಂಡವು ಒತ್ತಡದಲ್ಲಿದೆ. ಆದರೆ ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳಿದ ನಂತರ ಭಾರತ ತಂಡ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದೆ. ಡೆತ್ ಓವರ್ನಲ್ಲಿ ರನ್ ಸೋರಿಕೆಯಾದ ನಂತರ ತಂಡದ ವೇಗದ ಬೌಲಿಂಗ್ ಲೈನ್ ಅಪ್ ಸ್ಕ್ಯಾನರ್ಗೆ ಒಳಗಾಯಿತು. ಇದು ಭಾರತವು ಗಮನಹರಿಸಬೇಕಾದ ವಿಷಯವಾಗಿದೆ ಎಂದು ಆಶಿಶ್ ನೆಹ್ರಾ ಸಲಹೆ ನೀಡಿದರು.
"ತಂಡದಲ್ಲಿ 5 ಬೌಲರ್ಗಳಿದ್ದಾರೆ, ಆದ್ದರಿಂದ ನೀವು ಬೌಲಿಂಗ್ ವಿಭಾಗವನ್ನು ನೋಡುತ್ತಿದ್ದೀರಿ. ಏಕೆಂದರೆ ನಿಮಗೆ ಖಚಿತವಿಲ್ಲ. ನಾಯಕ, ಕೋಚ್ ಮತ್ತು ತಂಡದ ಮ್ಯಾನೇಜ್ಮೆಂಟ್ ವೇಗದ ಬೌಲಿಂಗ್ ವಿಭಾಗವನ್ನು ನೋಡುತ್ತಿದ್ದಾರೆ," ಎಂದು ಅವರು ಹೇಳಿದರು.

ಬ್ಯಾಟಿಂಗ್ ಸ್ಥಿರವಾದ ಲೈನ್-ಅಪ್ ಅನ್ನು ಆಡಿಲ್ಲ
ಇಂಡಿಯನ್ ಪ್ರೀಮಿಯರ್ ಲೀಗ್ ವಿಜೇತ ತಂಡದ ಕೋಚ್ ಅಗಿರುವ ಆಶಿಶ್ ನೆಹ್ರಾ, ಭಾರತವು ಬೌಲಿಂಗ್ ವಿಷಯಗಳ ಮೇಲೆ ಮಾತ್ರ ಗಮನಹರಿಸಬೇಕು, ಅದೇ ರೀತಿ ಅವರ ಬ್ಯಾಟಿಂಗ್ನಲ್ಲಿಯೂ ಸಹ ಗಮನಹರಿಸಬೇಕು, ಏಕೆಂದರೆ ಬ್ಯಾಟಿಂಗ್ ಸ್ಥಿರವಾದ ಲೈನ್-ಅಪ್ ಅನ್ನು ಆಡಿಲ್ಲ ಎಂದರು.
"ಭಾರತವು ಪಾಕಿಸ್ತಾನದ ವಿರುದ್ಧ 147 ರನ್ ಚೇಸ್ ಮಾಡಲು ಕಷ್ಟಪಡಬೇಕಾಯಿತು. ಬೌಲಿಂಗ್ನಲ್ಲಿ ಮಾತ್ರವಲ್ಲದೆ ಒಟ್ಟಾರೆಯಾಗಿ ತಂಡವು ಸುಧಾರಿಸಬೇಕಾಗಿದೆ. ಬ್ಯಾಟಿಂಗ್ ಕ್ರಮಾಂಕದ ಸಂಯೋಜನೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ ಮತ್ತು ನೀವು ವಿಶ್ವಕಪ್ಗೆ ಹೋಗುವ ಹೊತ್ತಿಗೆ ತಂಡಕ್ಕೆ ಬೇಕಾದುದನ್ನು ಕಂಡುಕೊಳ್ಳಬೇಕು," ಎಂದು ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಹೇಳಿದರು.

ಟಿ20 ವಿಶ್ವಕಪ್ಗಾಗಿ ಭಾರತದ ಪೂರ್ಣ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್ದೀಪ್ ಸಿಂಗ್.
ಸ್ಟ್ಯಾಂಡ್ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್


Click it and Unblock the Notifications












