
ಕರ್ನಾಟಕ 203ಕ್ಕೆ ಆಲ್ಔಟ್
ಇನ್ನು ತಮಿಳುನಾಡು ತಂಡ ನೀಡಿದ ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಕರ್ನಾಟಕ 39 ಓವರ್ಗಳಲ್ಲಿ 203 ರನ್ಗಳಿಗೆ ಆಲ್ ಔಟ್ ಆಯಿತು. ಕರ್ನಾಟಕ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ರೋಹನ್ ಕದಂ 24 ರನ್ ಗಳಿಸಿದರೆ, ದೇವದತ್ ಪಡಿಕ್ಕಲ್ ಶೂನ್ಯಕ್ಕೆ ಔಟ್ ಆಗುವ ಮೂಲಕ ಮುಗ್ಗರಿಸಿದರು. ಇನ್ನುಳಿದಂತೆ ಕೃಷ್ಣಮೂರ್ತಿ ಸಿದ್ಧಾರ್ಥ್ 29, ನಾಯಕ ಮನೀಷ್ ಪಾಂಡೆ 9, ಅಭಿನವ್ ಮನೋಹರ್ 34, ಶ್ರೀನಿವಾಸ್ ಶರತ್ 43, ಪ್ರವೀಣ್ ದುಬೆ 26, ವಿಜಯ್ ಕುಮಾರ್ ವೈಶಾಖ್ 5, ಕಾರಿಯಪ್ಪ 10, ಪ್ರಸಿದ್ಧ್ ಕೃಷ್ಣ 8 ಮತ್ತು ಪ್ರತೀಕ್ ಜೈನ್ ಅಜೇಯ 2 ರನ್ ಕಲೆ ಹಾಕಿದರು. ಈ ಮೂಲಕ ತಮಿಳುನಾಡು ಬೌಲಿಂಗ್ ದಾಳಿಗೆ ತತ್ತರಿಸಿದ ಕರ್ನಾಟಕ 203 ರನ್ಗಳಿಗೆ ಆಲ್ ಔಟ್ ಆಗಿ 151 ರನ್ಗಳ ಹೀನಾಯ ಸೋಲನ್ನು ಕಂಡಿತು.

ತ. ನಾಡು ಉತ್ತಮ ಬೌಲಿಂಗ್
ತಮಿಳುನಾಡು ತಂಡದ ಪರ ವಾಷಿಂಗ್ಟನ್ ಸುಂದರ್ 9 ಓವರ್ ಮಾಡಿ 43 ರನ್ ನೀಡಿ 3 ವಿಕೆಟ್ ಪಡೆದರೆ, ಆರ್ ಸಿಲಂಬರಸನ್ 8 ಓವರ್ ಮಾಡಿ 36 ರನ್ ನೀಡಿ 4 ವಿಕೆಟ್ ಪಡೆದರು. ಹೀಗೆ ಈ ಇಬ್ಬರೂ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಕರ್ನಾಟಕದ ಆಟಗಾರರನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಸಂದೀಪ್ ವಾರಿಯರ್, ರವಿಶ್ರೀನಿವಾಸನ್ ಸಾಯಿ ಕಿಶೋರ್ ಮತ್ತು ಮಣಿಮಾರನ್ ಸಿದ್ಧಾರ್ಥ್ ತಲಾ ಒಂದೊಂದು ವಿಕೆಟ್ ಪಡೆದರು.

ವರ್ಷದಲ್ಲಿ ಕರ್ನಾಟಕಕ್ಕೆ ಎರಡನೇ ಸೋಲುಣಿಸಿದ ತ. ನಾಡು
ಈ ಮೂಲಕ ಕ್ವಾರ್ಟರ್ ಫೈನಲ್ ಸುತ್ತಿನ ಈ ಪಂದ್ಯದಲ್ಲಿ ಕರ್ನಾಟಕಕ್ಕೆ ಸೋಲುಣಿಸಿದ ತಮಿಳುನಾಡು ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯನ್ನು ಎತ್ತಿಹಿಡಿಯಬೇಕೆಂಬ ಕರ್ನಾಟಕದ ಕನಸಿಗೆ ತಣ್ಣೀರು ಎರಚಿ ತಾನು ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ. ಹಾಗೂ ಇತ್ತೀಚೆಗಷ್ಟೇ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿಯೂ ಕೂಡ ಕರ್ನಾಟಕಕ್ಕೆ ಸೋಲನ್ನುಣಿಸಿ ಟ್ರೋಫಿ ಎತ್ತಿ ಹಿಡಿಯುವ ಕನಸನ್ನು ಅಂತಿಮ ಹಂತದಲ್ಲಿ ಭಗ್ನಗೊಳಿಸಿದ ತಮಿಳುನಾಡು ಚಾಂಪಿಯನ್ಸ್ ಆಗಿ ಹೊರ ಹೊಮ್ಮಿತ್ತು.


Click it and Unblock the Notifications
