
10 ಓವರ್ಗಳಲ್ಲಿ 36 ರನ್ಗಳನ್ನು ಬಿಟ್ಟುಕೊಟ್ಟ ಆಕಾಶ್ ಪಾಂಡೆ
ರಾಹುಲ್ ತ್ರಿಪಾಠಿ ಲೆಗ್ ಸ್ಪಿನ್ನರ್ ಕರಣ್ ಶರ್ಮಾಗೆ ವಿಕೆಟ್ ಒಪ್ಪಿಸಿದ ನಂತರ, ಮಹಾರಾಷ್ಟ್ರ ತಂಡವು ಕೇದಾರ್ ಜಾಧವ್ ಮತ್ತು ಅಜೀಮ್ ಕಾಜಿ ಅವರ ವಿಕೆಟ್ಗಳನ್ನು ಬೇಗ ಕಳೆದುಕೊಂಡಿತು. ಆದರೆ ಅಷ್ಟೊತ್ತಿಗಾಗಲೇ ರೈಲ್ವೇಸ್ ತಂಡದ ಸೋಲು ಖಚಿತವಾಗಿತ್ತು.
ರೈಲ್ವೇಸ್ ಪರ ಶಿವಂ ಚೌಧರಿ, ಯುವರಾಜ್ ಸಿಂಗ್ ಮತ್ತು ನಾಯಕ ಕರಣ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು. ಆಕಾಶ್ ಪಾಂಡೆ ವಿಕೆಟ್ ಪಡೆಯದೇ ಹೋದರೂ, 3.6ರ ಎಕಾನಮಿ ದರದಲ್ಲಿ 10 ಓವರ್ಗಳಲ್ಲಿ 36 ರನ್ಗಳನ್ನು ಬಿಟ್ಟುಕೊಟ್ಟರು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮಹಾರಾಷ್ಟ್ರ
ಇದಕ್ಕೂ ಮೊದಲು ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮಹಾರಾಷ್ಟ್ರ ತಂಡವು ರೈಲ್ವೇಸ್ ತಂಡವನ್ನು ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ಗಳಿಗೆ ನಿಯಂತ್ರಿಸಿತು. ಬಲಗೈ ಆಫ್ ಸ್ಪಿನ್ನರ್ ಶಂಶುಜಾಮ ಕಾಜಿ 26 ರನ್ ನೀಡಿ ಎರಡು ವಿಕೆಟ್ಗಳನ್ನು ಪಡೆದರು ಮತ್ತು ತಮ್ಮ ತಂಡದ ಪರ ಅತ್ಯುತ್ತಮ ಬೌಲರ್ ಎನಿಸಿದರು. ಮುಖೇಶ್ ಚೌಧರಿ, ಮನೋಜ್ ಇಂಗಳೆ, ಸತ್ಯಜೀತ್ ಬಚಾವ್ ಮತ್ತು ಅಜೀಂ ಕಾಜಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ರೈಲ್ವೇಸ್ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ
ಶಿವಂ ಚೌಧರಿ ಮತ್ತು ವಿವೇಕ್ ಸಿಂಗ್ 19.5 ಓವರ್ಗಳಲ್ಲಿ ಆರಂಭಿಕ ವಿಕೆಟ್ಗೆ 81 ರನ್ಗಳ ಜೊತೆಯಾಟದಿಂದ ರೈಲ್ವೇಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ, ನಂತರದ ಆಟದಲ್ಲಿ ವಿಕೆಟ್ಗಳು ಉರುಳಿದ್ದರಿಂದ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.
ರೈಲ್ವೇಸ್ ಪರ ಶಿವಂ ಚೌಧರಿ ಗರಿಷ್ಠ 46 ರನ್ ಗಳಿಸಿದರೆ, ವಿವೇಕ್ 32 ರನ್ ಗಳಿಸಿ ಔಟಾದರು. ಮೂರು ಓವರ್ಗಳ ಅಂತರದಲ್ಲಿ ಇಬ್ಬರೂ ಆರಂಭಿಕರು ಔಟಾದ ನಂತರ, ರೈಲ್ವೇಸ್ ತಂಡದ ಬ್ಯಾಟಿಂಗ್ ಹಾದಿ ಕಠಿಣವಾಗಿತ್ತು. ನಾಯಕ ಕರಣ್ ಶರ್ಮಾ 33 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ನೊಂ


Click it and Unblock the Notifications
