ವಿರಾಟ್ ಕೊಹ್ಲಿ ಟ್ವೀಟ್
'ಕೇರಳದಲ್ಲಿ ನಡೆದಿರುವ ಘಟನೆ ಕೇಳಿ ದಿಗಿಲಾಗುತ್ತಿದೆ. ನಾವು ನಮ್ಮ ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳೋಣ ಮತ್ತು ಈ ಹೇಡಿತನದ ಕೃತ್ಯಗಳನ್ನು ಕೊನೆಗೊಳಿಸೋಣ' ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ ಮತ್ತು ಫೆಸ್ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ.

ನಿರುಪದ್ರವಿ ಗರ್ಭಿಣಿ ಆನೆ
'ಅದು ನಿರುಪದ್ರವಿ, ಗರ್ಭಿಣಿ ಆನೆಯಾಗಿತ್ತು. ಆನೆಯನ್ನು ಅಮಾನುಷವಾಗಿ ಕೊಂದವರು ರಾಕ್ಷಸರು. ಇಂಥ ದುರುಳರಿಗೆ ತಕ್ಕ ಶಿಕ್ಷೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಪ್ರಕೃತಿಯನ್ನು ಕಾಪಾಡುವ ವಿಚಾರದಲ್ಲಿ ನಾವು ಮತ್ತೆ ಮತ್ತೆ ಸೋಲುತ್ತಲೇ ಇದ್ದೇವೆ. ಈ ರೀತಿ ವರ್ತಿಸುತ್ತೇವಾದರೆ ನಾವು ಪ್ರಾಣಿಗಳಿಗಿಂತ ಭಿನ್ನ ಹೇಗೆ ಹೇಳಿ?' ಎಂದು ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಟ್ವೀಟ್ ಮಾಡಿದ್ದಾರೆ.
ಸೈನಾ ನೆಹ್ವಾಲ್ ಸಂತಾಪ
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ, ಸೈನಾ ನೆಹ್ವಾಲ್ ಕೂಡ ಹೆಣ್ಣಾನೆ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. 'ಈ ಘಟನೆ ನೋಡಲು ಬೇಸರವಾಗುತ್ತದೆ ಎಂದು ಸೈನಾ ತಮ್ಮ ಅಧಿಕೃತ ಟ್ವೀಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.

ರಕ್ಕಸರು ಮಾತ್ರ ಇದನ್ನು ಮಾಡಬಲ್ಲರು
ಘಟನೆಗೆ ಸಂಬಂಧಿಸಿ ಆಕ್ರೋಶ ವ್ಯಕ್ತಪಡಿಸಿರುವ ಟೀಮ್ ಇಂಡಿಯಾದ ವೇಗಿ ಉಮೇಶ್ ಯಾದವ್, 'ಗರ್ಭಿಣಿ ಆನೆಗೆ ಸಿಡಿಮದ್ದು ತುಂಬಿಸಿದ್ದ ಪೈನಾಪಲ್ ತಿನ್ನಿಸುವುದೆಂದರೆ? ಇದನ್ನು ರಾಕ್ಷಸರು ಮಾತ್ರ ಮಾಡಬಲ್ಲರು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲೇಬೇಕು' ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications












