ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರಿಗೆ ಹಿರಿಯ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಟ್ವಿಟರ್ನಲ್ಲಿ ಧನ್ಯವಾದ ಹೇಳಿದ್ದಾರೆ. ಈ ಸಂದರ್ಭದಲ್ಲಿ ಯುವರಾಜ್ ಸಿಂಗ್ ಅವರು ಕ್ಯಾನ್ಸರ್ ನಿಂದ ಚೇತರಿಸಿಕೊಂಡಿರುವುದನ್ನು ಶ್ಲಾಘಿಸಿದ ವಿರಾಟ್, ಇದು ಕ್ರಿಕೆಟ್ ಮಾತ್ರವಲ್ಲದೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.
Yuvi Pa thank you for this lovely gesture.Your comeback from cancer will always be an inspiration for people in all walks of life not just cricket. You have always been generous and caring for people around you.I wish you all the happiness,God bless @YUVSTRONG12. Rab rakha 🙏😊 pic.twitter.com/KDrd2JQCHU
— Virat Kohli (@imVkohli) February 23, 2022
ಯುವರಾಜ್ ಸಿಂಗ್ ಅವರು ಯಾವಾಗಲೂ ಉದಾರ ವ್ಯಕ್ತಿ ಮತ್ತು ತಮ್ಮ ಸುತ್ತಮುತ್ತಲಿನವರ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಹೇಳಿದರು. ಯುವರಾಜ್ ಸಿಂಗ್ ಸಂತೋಷವಾಗಿರಲಿ ಎಂದು ವಿರಾಟ್ ಕೊಹ್ಲಿ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ. 2011ರಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದಾಗ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ತಂಡದ ಸದಸ್ಯರಾಗಿದ್ದರು.
ಪ್ರೋ ಕಬಡ್ಡಿ ಲೀಗ್ 8 ಸೆಮಿಫೈನಲ್ಸ್: ತಂಡಗಳು, ಸಮಯ, ದಿನಾಂಕ ಮತ್ತು ನೇರಪ್ರಸಾರದ ಮಾಹಿತಿ
ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿಗೆ ಗೋಲ್ಡನ್ ಶೂಸ್ ಗಿಫ್ಟ್ ಕಳುಹಿಸಿ ಟ್ವಿಟರ್ ನಲ್ಲಿ ಹೊಗಳಿದ್ದರು . ಕೊಹ್ಲಿಯ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಯುವರಾಜ್ ಪೋಸ್ಟ್ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಒಬ್ಬ ಕ್ರಿಕೆಟಿಗ ಮತ್ತು ವ್ಯಕ್ತಿಯಾಗಿ ಬೆಳೆಯುವುದನ್ನು ನಾನು ನೋಡಿದ್ದೇನೆ ಎಂದು ಯುವರಾಜ್ ಪೋಸ್ಟ್ನಲ್ಲಿ ಹೇಳಿದ್ದಾರೆ.
''ನೆಟ್ಸ್ನಲ್ಲಿ ಭಾರತೀಯ ಕ್ರಿಕೆಟ್ ಲೆಜೆಂಡ್ಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟಿರುವ ವಿರಾಟ್ ಕೊಹ್ಲಿ ಇದೀಗ ಹೊಸ ಪೀಳಿಗೆಗೆ ಸ್ಫೂರ್ತಿ ನೀಡುವ ದಂತಕಥೆ ಎಂದು ಶ್ಲಾಘಿಸಿದ್ದಾರೆ. ಮೈದಾನದಲ್ಲಿ ಕ್ರಿಕೆಟ್ಗೆ ಕೊಹ್ಲಿಯ ಶಿಸ್ತು, ಉತ್ಸಾಹ ಮತ್ತು ಸಮರ್ಪಣೆ ಈ ದೇಶದ ಪ್ರತಿ ಮಗುವಿಗೆ ಒಂದು ದಿನ ಕ್ರಿಕೆಟ್ ಆಯ್ಕೆ ಮಾಡುವ ಮತ್ತು ನೀಲಿ ಜೆರ್ಸಿ ಧರಿಸುವ ಕನಸು ಕಾಣಲು ಪ್ರೇರೇಪಿಸುತ್ತದೆ, "ಎಂದು ಯುವರಾಜ್ ಹೇಳಿದರು.
ಗುರುವಾರದಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿಯಲಿದ್ದಾರೆ. ಸತತ ಕ್ರಿಕೆಟ್ ಜೊತೆಗೆ ಫಾರ್ಮ್ ವೈಫಲ್ಯದಿಂದ ಹೊರಬರಲು ಕೊಹ್ಲಿಗೆ ಆಯ್ಕೆಗಾರರು ವಿಶ್ರಾಂತಿ ನೀಡಿದ್ದರು. ಹೀಗಾಸಗಿ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮಾತ್ರ ಕೊಹ್ಲಿ ಲಭ್ಯರಾಗಲಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ 99 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದೊಂದಿಗೆ 100 ಟೆಸ್ಟ್ ಕ್ಲಬ್ ಸೇರಲಿದ್ದಾರೆ. ಕೊಹ್ಲಿಯ 100ನೇ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ವಿಶೇಷ ವ್ಯವಸ್ಥೆ ಮಾಡಲಿದೆ.