ನಿವೃತ್ತಿಯಂಚಿನಲ್ಲಿ ಧೋನಿ
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಳೆದ ವರ್ಷ ನಿವೃತ್ತಿಯನ್ನು ಘೋಷಿಸಿರುವ ಎಂಎಸ್ ಧೋನಿ ಐಪಿಎಲ್ಗೂ ನಿವೃತ್ತಿ ಹೇಳುವ ಅಂಚಿನಲ್ಲಿದ್ದಾರೆ. ಕಳೆದ ಬಾರಿಯ ಆವೃತ್ತಿಯ ನಂತರ ಈ ಬಾರಿಯ ಐಪಿಎಲ್ ಆವೃತ್ತಿಗೆ ಧೋನಿ ಆಡುವುದು ಅನುಮಾನ ಎಂಬ ಮಾತುಗಳು ವ್ಯಕ್ತವಾಗಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಧೋನಿ ತಾನು ಮುಂದಿನ ಪಂದ್ಯದಲ್ಲಿ ಆಡುವುದು ಖಚಿತ ಎಂದಿದ್ದರು. ಈಗ ಮುಂದಿನ ಆವೃತ್ತಿಯಲ್ಲಿ ಧೋನಿ ಪಾಲ್ಗೊಳ್ಳುತ್ತಾರಾ ಎಂಬುದು ಅನುಮಾನವಾಗುಳಿದಿದೆ.
ಜಡೇಜಾ ಹೆಸರು ಚಾಲ್ತಿಯಲ್ಲಿ
ಧೋನಿ ನಾಯಕತ್ವದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಸುಲಭವಾಗು ಕೇಳಿ ಬರುವ ಹೆಸರು ರವೀಂದ್ರ ಜಡೇಜಾ. ಅನುಭವ ಹಾಗೂ ಪ್ರದರ್ಶನ ಜೊತೆಗೆ ಆಟಗಾರರ ಜೊತೆಗಿನ ಹೊಂದಾಣಿಕೆಯ ಕಾರಣದಿಂದಾಗಿ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಸೂಕ್ತ ಎಂಬ ಮಾತುಗಳು ಕೇಳಿಬರುತ್ತಿದೆ.
ಸೆಹ್ವಾಗ್ ಹೆಸರಿಸಿದ್ದು ಯಾರನ್ನು
ಆದರೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೆಸರಿಸಿದ್ದು ಜಡೇಜಾ, ರೈನಾ ಯಾರನ್ನೂ ಅಲ್ಲ. ಈ ಬಾರಿಯ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿರುವ ಋತುರಾಜ್ ಗಾಯಕ್ವಾಡ್ ಅವರನ್ನು. ಧೋನಿಯ ನಂತರ ಗಾಯಕ್ವಾಡ್ ನಾಯಕತ್ವಕ್ಕೆ ಸೂಕ್ತ ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.
ನಾಯಕನಾಗುವ ಅರ್ಹತೆಯಿದೆ
ನಾನು ಆತನನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ. ಆತನ ಆಟನ್ನು ಹತ್ತಿರದಿಂದ ನೋಡಿಲ್ಲ. ಆದರೆ ಮುಮದಿನ ಕೆಲ ವರ್ಷಗಳ ಕಾಲ ಆತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದರೆ ನಾಯಕನಾಗುವ ಸಾಮರ್ಥ್ಯವನ್ನು ಪಡೆಯುತ್ತಾರೆ" ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ