For Quick Alerts
ALLOW NOTIFICATIONS  
For Daily Alerts
 

ಸೆಹ್ವಾಗ್ ಬಾಯಲ್ಲಿ ಕನ್ನಡ ಸಿನಿಮಾದ ಖಡಕ್ ಡೈಲಾಗ್ ಕೇಳಿ!

By Naveen
Virendra Sehwag Told Kannada Kempegowda Movie Dialouge At KCC

ಬೆಂಗಳೂರು, ಜುಲೈ 25: ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಉದ್ಗಾಟನೆ ಸಮಾರಂಭ ಕಳೆದ ಶನಿವಾರ ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ವಿಶ್ವ ಕ್ರಿಕೆಟ್ ದಿಗ್ಗಜರಾದ ಸೆಹ್ವಾಗ್, ತಿಲಕರತ್ನೆ ದಿಲ್ಶನ್, ಹರ್ಷಲ್ ಗಿಬ್ಸ್, ಲ್ಯಾನ್ಸ್ ಕ್ಲೂಸ್ನರ್, ಒವೈಸ್ ಶಾ ಭಾಗಿಯಾಗಿದ್ದರು. ಕನ್ನಡ ಚಿತ್ರರಂಗದ ಸ್ಟಾರ್ ಗಳು ಸಹ ಹಾಜರಿದ್ದರು.

ವಿಶೇಷ ಅಂದರೆ, ಕಾರ್ಯಕ್ರಮದಲ್ಲಿ ಸೆಹ್ವಾಗ್ 'ಕೆಂಪೇಗೌಡ' ಚಿತ್ರದ ಡೈಲಾಗ್ ಹೇಳಿದ್ದಾರೆ. ಆರುಮುಘ ರವಿಶಂಕರ್ ಅವರ ಜನಪ್ರಿಯ ಡೈಲಾಗ್ ಈಗ ಸೆಹ್ವಾಗ್ ಬಾಯಲ್ಲಿ ಕೂಡ ಬಂದಿದೆ. ಕೆಸಿಸಿ ಉದ್ಗಾಟನೆ ಸಮಾರಂಭದ ನಿರೂಪಣೆ ಮಾಡುತ್ತಿದ್ದ ಸೃಜನ್ ಲೋಕೇಶ್ ಸೆಹ್ವಾಗ್ ಗೆ ಚಾಲೆಂಜ್ ಹಾಕಿದರು.

ಕನ್ನಡ ಚಲನಚಿತ್ರ ಕಪ್ ಎಂದ ಮೇಲೆ ಕನ್ನಡ ಡೈಲಾಗ್ ಹೇಳಬೇಕು ಎಂದ ಸೃಜನ್ ಸೆಹ್ವಾಗ್ ಅವರಿಗೆ ಡೈಲಾಗ್ ಹೇಳಿಕೊಟ್ಟರು. ಆರುಮುಘ ಡೈಲಾಗ್ ಅನ್ನು ಕ್ರಿಕೆಟ್ ಶೈಲಿಯಲ್ಲಿ ಸೆಹ್ವಾಗ್ ಹೇಳಿದರು. ''ಇದು ವಿರೇಂದ್ರ ಸೆಹ್ವಾಗ್ ಕೋಟೆ ಕಣೋ...'' ಎಂದು ಖಡಕ್ ಡೈಲಾಗ್ ಹೊಡೆದರು ಸೆಹ್ವಾಗ್.

Virendra Sehwag Told Kannada Kempegowda Movie Dialouge At KCC

ಅಂದಹಾಗೆ, ಕನ್ನಡ ಚಲನಚಿತ್ರ ಕಪ್ ಎರಡನೇ ಸೀಸನ್ ಇದಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್, ಯಶ್ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಸಪ್ಟೆಂಬರ್ 8 ಮತ್ತು 9 ರಂದು ಪಂದ್ಯಗಳು ನಡೆಯಲಿದೆ. ಒಟ್ಟು ಆರು ಪಂದ್ಯಗಳು ಇರಲಿದ್ದು, ಫೈನಲ್ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Story first published: Wednesday, July 25, 2018, 18:06 [IST]
Other articles published on Jul 25, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+