ಮೆಲ್ಬರ್ನ್: ಕ್ರಿಕೆಟ್ ಆಸ್ಟ್ರೇಲಿಯಾದ ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಭಾರತದಿಂದ ಆಸ್ಟ್ರೇಲಿಯಾ ಆಟಗಾರರನ್ನು ತವರಿಗೆ ಸುರಕ್ಷಿತವಾಗಿ ಕಳುಹಿಸಿದ್ದಕ್ಕಾಗಿ ಹಾಕ್ಲೆ ಕೃತಜ್ಞತೆ ತಿಳಿಸಿದ್ದಾರೆ.
ಭಾರತ 2011ರ ವಿಶ್ವಕಪ್ ಗೆದ್ದಾಗ ಕೊಹ್ಲಿ, ಪಠಾಣ್ರಲ್ಲಿ ಸಚಿನ್ ಹೇಳಿದ್ದೇನು ಗೊತ್ತಾ?!
ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಚೆನ್ನೈ ಸೂಪರ್ ಕಿಂಗ್ಸ್ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ, ಸನ್ ರೈಸರ್ಸ್ ಹೈದರಾಬಾದ್ನ ವೃದ್ಧಿಮಾನ್ ಸಾಹ, ಡೆಲ್ಲಿ ಕ್ಯಾಪಿಟಲ್ಸ್ನ ಅಮಿತ್ ಮಿಶ್ರಾಗೆ ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಐಪಿಎಲ್ ಅಮಾನತುಗೊಂಡಿತ್ತು.
ನಗದು ಶ್ರೀಮಂತ ಟೂರ್ನಿ ಐಪಿಎಲ್ ಅಮಾನತಾಗಿದ್ದರಿಂದ ವಿದೇಶಿ ಆಟಗಾರರನ್ನು ಅವರವರ ದೇಶಗಳಿಗೆ ಕಳುಹಿಸಿಕೊಡುವ ಹೊಣೆಗಾರಿಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಹೊತ್ತುಕೊಂಡಿತ್ತು. ಆದರೆ ಭಾರತದಿಂದ ಆಸ್ಟ್ರೇಲಿಯಾಕ್ಕೆ ನೇರವಾಗಿ ಪ್ರಯಾಣ ನಿರ್ಬಂಧವಿದ್ದರಿಂದ ಆಸೀಸ್ ಆಟಗಾರರನ್ನು ಮಾಲ್ಡೀವ್ಸ್ಗೆ ಕಳುಹಿಸಿ ಅಲ್ಲಿಂದ ಆಸ್ಟ್ರೇಲಿಯಾ ತಲುಪುವಂತೆ ಬಿಸಿಸಿಐ ನೋಡಿಕೊಂಡಿತ್ತು.
91 ವರ್ಷ ವಯಸ್ಸಾದರೂ ಕ್ರಿಕೆಟ್ ಆಡುತ್ತಿದ್ದಾರೆ ಈ ಹಿರಿಯ ಕ್ರಿಕೆಟಿಗ
ಮೇ 17ರ ಸೋಮವಾರ ಐಪಿಎಲ್ನಲ್ಲಿ ಪಾಲ್ಗೊಂಡಿದ್ದ ಎಲ್ಲಾ ಆಟಗಾರರು ಆಸ್ಟ್ರೇಲಿಯಾ ತಲುಪಿರುವುದರಿಂದ ಖುಷಿಗೊಂಡಿರುವ ಹಾಕ್ಲೆ ಪ್ರತಿಕ್ರಿಯಿಸಿದ್ದಾರೆ. 'ನಾವು ಖುಷಿಗೊಂಡಿದ್ದೇವೆ. ನಾವು ನಿಜಕ್ಕೂ ಬಿಸಿಸಿಐಗೆ ಕೃತಜ್ಞರಾಗಿದ್ದೇವೆ,' ಎಂದು ಹಾಕ್ಲೆ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಜೊತೆ ಹೇಳಿಕೊಂಡಿದ್ದಾರೆ.