ಕಾಶ್ಮೀರದ ಪಹಲ್ಗಮ್ನಲ್ಲಿ ನಡೆದ ಉಗ್ರರ ದಾಳಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಕಾಶ್ಮೀರ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರ ಮೇಲೆ ಉಗ್ರರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಉಗ್ರರನ್ನು ಸದೆಬಡಿಯಲು ಕೇಂದ್ರ ಸರ್ಕಾರವನ್ನು ಇಡೀ ದೇಶ ಒತ್ತಾಯಿಸುತ್ತಿದೆ. ಅನೇಕ ಭಾರತೀಯ ಕ್ರಿಕೆಟಿಗರು ಈ ಘಟನೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದು, ಬಲವಾಗಿ ಖಂಡಿಸಿದ್ದಾರೆ. ಉಗ್ರರ ಗುಂಡಿಗೆ ಬಲಿಯಾದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಮಧ್ಯೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಪಹಲ್ಗಾಮ್ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಯನ್ನು ಖಂಡಿಸಿರುವ ಬಸಿತ್ ಅಲಿ ಭಾರತವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಉಗ್ರರನ್ನು ಆದಷ್ಟು ಬೇಗ ಹುಡುಕಿ ಸಾರ್ವಜನಿಕರ ಮುಂದೆ ಗುಂಡು ಹಾರಿಸಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಬಾಸಿತ್ ಅಲಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. "ನಿನ್ನೆ ಕಾಶ್ಮೀರದಲ್ಲಿ ಒಂದು ದೊಡ್ಡ ಅಹಿತಕರ ಘಟನೆ ನಡೆದಿದೆ. ಉಗ್ರರ ದಾಳಿಗೆ 26 ಜನರು ಹುತಾತ್ಮರಾದರು. ಇದು ಒಂದು ದೊಡ್ಡ ದೌರ್ಜನ್ಯ. ಕ್ಷಮಿಸಿ, ಪಹಲ್ಗಾಮ್ನಲ್ಲಿ ದಾಳಿ ನಡೆದಿದೆ ಎಂದು ನನಗೆ ತಿಳಿದಿರಲಿಲ್ಲ ಮತ್ತು ನಾನು ಕೇಳಿರುವ ಪ್ರಕಾರ ಅದು ಕ್ಷಮೆಯಾಚನೆಯಲ್ಲ. ಅದು ಯಾರೇ ಆಗಿರಲಿ, ಯಾರ ಜೀವವನ್ನೂ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ.
ನನ್ನ ಧರ್ಮ ಹೇಳುವುದು ಇದನ್ನೇ. ನನ್ನ ಧರ್ಮ ಹೇಳುತ್ತದೆ, ಅದು ಕ್ರಿಶ್ಚಿಯನ್ ಆಗಿರಲಿ, ಯಹೂದಿ ಆಗಿರಲಿ, ಹಿಂದೂ ಆಗಿರಲಿ ಅಥವಾ ಜಾಟ್ ಆಗಿರಲಿ, ಯಾರಿಗೂ ಹೀಗೆ ಮಾಡುವ ಹಕ್ಕಿಲ್ಲ. ಯಾರದ್ದಾದರೂ ಜೀವ ತೆಗೆಯುವವನು ಮುಸ್ಲಿಂ ಆಗಲು ಸಾಧ್ಯವಿಲ್ಲ ಎಂದು ಭಾರತ ಪರ ಬ್ಯಾಟ್ ಬೀಸಿದ್ದಾರೆ.
ಈ ಮುಗ್ಧ ಜನರು ತಮ್ಮ ರಜಾದಿನಗಳನ್ನು ಕಳೆಯಲು ಹೋಗಿದ್ದರು. ಎಂತಹ ಕಾಲ ಬಂದಿದೆ, ಜನರು ಎಷ್ಟರ ಮಟ್ಟಿಗೆ ಬದಲಾಗಿದ್ದಾರೆಂದರೆ, ತಮಗೂ ಒಂದು ಕುಟುಂಬವಿದೆ ಎಂದು ಅವರಿಗೆ ಅರಿವಿಲ್ಲ. ಇದನ್ನು ಯಾರೇ ಮಾಡಿದ್ದರೂ, ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ ಮತ್ತು ಪ್ರತಿ ನಮಾಜ್ನಲ್ಲಿಯೂ ಪ್ರಾರ್ಥಿಸುತ್ತೇನೆ. ಇದು ಅವನ ಕುಟುಂಬದಲ್ಲೂ ಆಗಬೇಕು. ಅದು ಯಾರೇ ಆಗಿರಲಿ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಬಾರದು. ಅವರನ್ನು ಸಾರ್ವಜನಿಕರ ಮುಂದೆ ಗುಂಡು ಹಾರಿಸಬೇಕು ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.