ಭಾರತದಲ್ಲೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಕ್ಟೋಬರ್ 5ರಿಂದ ಪ್ರಾರಂಭವಾಗಲಿರುವ ವಿಶ್ವ ಕ್ರಿಕೆಟ್ ಹಬ್ಬಕ್ಕೆ ಜಗತ್ತಿನಾದ್ಯಂತ ಕ್ರಿಕೆಟ್ ಪ್ರೇಮಿಗಳು ಕಾತರರಾಗಿದ್ದಾರೆ.
ತಮ್ಮ ನೆಚ್ಚಿನ ಕ್ರಿಕೆಟಿಗರು ಮೈದಾನದಲ್ಲಿ ಅದ್ಭುತ ಪ್ರದರ್ಶನಗಳೊಂದಿಗೆ ಪಂದ್ಯಾವಳಿಯನ್ನು ಝಗಮಗಿಸುತ್ತಾರೆ ಎಂಬ ನಿರೀಕ್ಷೆಯನ್ನು ಅಭಿಮಾನಿಗಳು ಹೊಂದಿದ್ದು, ಅದರಲ್ಲೂ ಭಾರತದಲ್ಲಿ ನಡೆಯುತ್ತಿರುವ ಕಾರಣ ಕನಿಷ್ಠ ಒಂದೂವರೆ ತಿಂಗಳು ಕ್ರಿಕೆಟ್ ಸಂಭ್ರಮ ಮನೆಮಾಡಲಿದೆ.

ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಐಸಿಸಿ ಪಂದ್ಯಾವಳಿಗೆ ಮುಂಚಿತವಾಗಿ, ಆತಿಥೇಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವಕಪ್ ವೀಕ್ಷಣೆಯ ಅನುಭವವನ್ನು ಸ್ಮರಣೀಯವಾಗಿಸಲು ದೇಶದ ಹಲವು ಗಣ್ಯ ವ್ಯಕ್ತಿಗಳಿಗೆ 'ಗೋಲ್ಡನ್ ಟಿಕೆಟ್'ಗಳನ್ನು ನೀಡಲಾಗುತ್ತಿದೆ.
ಈವರೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಭಾರತದ ದಿಗ್ಗಜ ನಟರಾದ ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಅವರಿಗೆ ಗೋಲ್ಡನ್ ಟಿಕೆಟ್ ನೀಡುವ ಮೂಲಕ ಅತಿಥಿಗಳನ್ನಾಗಿಸಿದೆ.

ಚಿತ್ರರಂಗದ ಡೈನಾಮಿಕ್ ಜೋಡಿಯ ಹೊರತಾಗಿ, ಭಾರತ ಕ್ರಿಕೆಟ್ನ ಲೆಜೆಂಡರಿ ಆಟಗಾರ ಮತ್ತು 2011ರ ವಿಶ್ವಕಪ್ ವಿಜೇತ ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರಿಗೂ ಗೋಲ್ಡನ್ ಟಿಕೆಟ್ ನೀಡಿ ಅಹ್ವಾನಿಸಲಾಗಿದೆ.
ಆದರೆ, ಕ್ರಿಕೆಟ್ ಅಭಿಮಾನಿಗಳು 'ಗೋಲ್ಡನ್ ಟಿಕೆಟ್' ಎಂದರೇನು ಮತ್ತು ಟಿಕೆಟ್ ಹೊಂದಿರುವವರಿಗೆ ಯಾವ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇದೆ.
2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯ ಕುತೂಹಲ ಹೆಚ್ಚಿಸಲು 'ಗೋಲ್ಡನ್ ಟಿಕೆಟ್ ಫಾರ್ ಗೋಲ್ಡನ್ ಐಕಾನ್ಸ್' ಕಾರ್ಯಕ್ರಮದ ಅಡಿಯಲ್ಲಿ ಬಿಸಿಸಿಐ ರಾಷ್ಟ್ರೀಯ ಐಕಾನ್ಗಳಿಗೆ ಗೋಲ್ಡನ್ ಟಿಕೆಟ್ ಅನ್ನು ನೀಡಲಾಗುತ್ತಿದೆ.
ವಿಶ್ವಕಪ್ ಪಂದ್ಯಾವಳಿಯ ಎಲ್ಲಾ 48 ಪಂದ್ಯಗಳಿಗೆ ಮತ್ತು ಎಲ್ಲಾ ಮೈದಾನಗಳಿಗೆ ಈ ಗೋಲ್ಡನ್ ಟಿಕೆಟ್ ಹೊಂದಿರುವವರಿಗೆ ಪ್ರವೇಶವನ್ನು ನೀಡುತ್ತದೆ ಎಂದು ವರದಿಯಾಗಿದೆ.
ಬಿಸಿಸಿಐನಿಂದ ಮಾನ್ಯತೆ ಪಡೆದ ಕಾರ್ಡ್ ಮತ್ತು ಟಿಕೆಟ್ನಲ್ಲಿ ಆ ವ್ಯಕ್ತಿಯು ಬಿಸಿಸಿಐನ ಅತಿಥಿ ಎಂದು ನಮೂದಿಸಲಾಗಿದೆ ಮತ್ತು ಎಲ್ಲ ಕ್ರೀಡಾಂಗಣದಲ್ಲಿ ವಿಐಪಿ ಸತ್ಕಾರ ಪಡೆಯುತ್ತಾನೆ. ಎಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು.
ಗಮನಾರ್ಹವಾಗಿ, 2023ರ ವಿಶ್ವಕಪ್ನ ವೇಳಾಪಟ್ಟಿಯನ್ನು ತಡವಾಗಿ ಪ್ರಕಟಿಸಿದ ಕಾರಣ ಮತ್ತು ಅದರಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಿದ್ದರಿಂದ ಬಿಸಿಸಿಐ ಅಭಿಮಾನಿಗಳಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿತು.
ಟಿಕೆಟ್ ಬುಕ್ಕಿಂಗ್ ಅನುಭವವು ಅಭಿಮಾನಿಗಳಿಗೆ ಉತ್ತಮವಾಗಿರಲಿಲ್ಲ. ಏಕೆಂದರೆ ಅವರು ಬುಕ್ಕಿಂಗ್ ಸೈಟ್ನಲ್ಲಿ ಹಲವಾರು ದೋಷಗಳು ಕಂಡುಬಂದವು ಮತ್ತು ವರ್ಚುವಲ್ ಸರತಿಯಲ್ಲಿ ಗಂಟೆಗಟ್ಟಲೆ ಕಾಯಬೇಕಾಯಿತು.
ಹೀಗಾಗಿ, ದೇಶದ ಹೆಸರಾಂತ ವ್ಯಕ್ತಿಗಳಿಗೆ ಚಿನ್ನದ ಟಿಕೆಟ್ ನೀಡಿ ಗೌರವಿಸುವ ಮೂಲಕ ಪಂದ್ಯಾವಳಿಯನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲು ಭಾರತೀಯ ಕ್ರಿಕೆಟ್ ಮಂಡಳಿಯು ಯಾವುದೇ ಅವಕಾಶವನ್ನು ಬಿಡುತ್ತಿಲ್ಲ.
ಆ ಬಳಿಕ ಬುಧವಾರ, ಸೆಪ್ಟೆಂಬರ್ 20ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2023ರ ವಿಶ್ವಕಪ್ ಪಂದ್ಯಾವಳಿಯ ಅಧಿಕೃತ ಗೀತೆಯನ್ನು ಅನಾವರಣಗೊಳಿಸಿತು.
'ದಿಲ್ ಜಶ್ನ್ ಬೋಲೆ' ಎಂಬ ಎಂಬ ಶೀರ್ಷಿಕೆಯ ಈ ಗೀತೆಯನ್ನು ಪ್ರೀತಮ್ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ನಟ ರಣವೀರ್ ಸಿಂಗ್, ಧನಶ್ರೀ ವರ್ಮಾ, ಗೌರವ್ ತನೇಜಾ, ಬಿ ಯೂನಿಕ್ ಮತ್ತು ಹಲವಾರು ಇತರ ಜನಪ್ರಿಯ ವ್ಯಕ್ತಿಗಳನ್ನು ಒಳಗೊಂಡಿದೆ.
ಈ ಎನರ್ಜಿಟಿಕ್ ಗೀತೆ ಭಾರತದಲ್ಲಿ ನಡೆಯುವ ವಿಶ್ವಕಪ್ನ ಸಂಭ್ರಮವನ್ನು ಅಭಿಮಾನಿಗಳಿಗೆ ಹಬ್ಬ ಎಂದು ಕರೆಯಲಾಗುತ್ತದೆ.