ಯಾಕೆ ದಿನೇಶ್ ಕಾರ್ತಿಕ್ಗೆ ಸ್ಥಾನ?
ಯಾಕೆ ದಿನೇಶ್ ಕಾರ್ತಿಕ್ಗೆ ಸ್ಥಾನ? ಪಂತ್ಗೆ ಯಾಕಿಲ್ಲ ಅಂತ ಪ್ರಶ್ನಿಸುವವರಿರಬಹುದು. ಆದರೆ ಇದಕ್ಕೆ ಕಾರಣಗಳಿವೆ. ಎಂಎಸ್ ಧೋನಿಗೀಗ 37ರ ಹರೆಯ. ಇನ್ನೂ ಧೋನಿ ಹಿಂದಿನ ಪ್ರಖರತೆ ಉಳಿಸಿಕೊಳ್ಳೋದು ದೂರದ ಮಾತು. ವಯೋಸಹಜವಾಗಿ ಧೋನಿ ಇನ್ನೂ ಬಹಳಷ್ಟು ಕಾಲ ಬೆಸ್ಟ್ ಫಿನಿಷರ್ ಆಗಿಯೇ ಉಳಿಯೋದೂ ಸಾಧ್ಯವಿಲ್ಲ.
ಬಿಸಿಸಿಐ ಬುದ್ಧಿವಂತಿಕೆ
ಜನಪ್ರಿಯ ಕ್ರೀಡೆಯಾದ ಕ್ರಿಕೆಟ್ಗೆ ಭಾರತ ತಂಡಕ್ಕೊಬ್ಬ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ನ ಅಗತ್ಯವಿದೆ. ಹೀಗಾಗಿಗೇ ಇತ್ತೀಚಿಗೆ ಏಕದಿನ ಪಂದ್ಯಗಳಲ್ಲಿ ತಂಡದಲ್ಲಿ ದಿನೇಶ್ ಕಾರ್ತಿಕ್ಗೆ ಸ್ಥಾನ ನೀಡಲಾಗುತ್ತಿದೆ. ಒಟ್ಟಿನಲ್ಲಿ ಬಿಸಿಸಿಐ ಈ ವಿಚಾರದಲ್ಲಿ ಬುದ್ಧಿವಂತಿಕೆಯನ್ನೂ ಪ್ರದರ್ಶಿಸುತ್ತಿದೆ.
ಪಂದ್ಯ ಗೆಲ್ಲಿಸಿದ್ದ ಕಾರ್ತಿಕ್
2018ರ ನಿದಹಾಸ್ ಟ್ರೋಫಿ ಫೈನಲ್ ಪಂದ್ಯದತ್ತ ಹೋಗೋಣ. ಅಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಿದ್ದವು. ಕೊನೆಕ್ಷಣದಲ್ಲಿ ಭಾರತಕ್ಕೆ ಗೆಲ್ಲಲು 12 ಎಸೆಗಳಲ್ಲಿ 34 ರನ್ಗಳ ಅಗತ್ಯವಿತ್ತು. ಈ ವೇಳೆ ದಿನೇಶ್ ಎಂಟ್ರಿಯಾಗಿತ್ತು. ತಂಡದ ಗೆಲುವಿನ ಪಣತೊಟ್ಟು ನಿಂತ ಕಾರ್ತಿಕ್ ಸಿಕ್ಸ್ ಬೌಂಡರಿಗಳನ್ನು ಬಾರಿಸಲಾರಂಭಿಸಿದರು. ಕೊನೆಯ ಎಸೆತಕ್ಕೆ ಭಾರತಕ್ಕೆ 5 ರನ್ಗಳ ಅಗತ್ಯವಿತ್ತು. ದಿನೇಶ್ ಸಿಕ್ಸ್ ಚಚ್ಚಿದ್ದರು!
ಅನುಭವಕ್ಕೆ ಮಣೆ
ಪ್ರಮುಖ ಪಂದ್ಯಗಳಿರುವಾಗ ಹೊಸತನ ಮತ್ತು ಪ್ರಯೋಗದ ಮೊರೆ ಹೋಗುವುದಕ್ಕಿಂತ ಅನುಭವಕ್ಕೆ ಬಿಸಿಸಿಐ ಮಾನ್ಯತೆ ನೀಡೋದೇ ಹೆಚ್ಚು. ಇವೆಲ್ಲದಕ್ಕಿಂತ ಮುಖ್ಯವಾಗಿ ಪಂತ್ಗೆ ಇನ್ನೂ 21ರ ಹರೆಯ. ಅವರಿಗೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ಈ ಬಾರಿ ವಿಶ್ವಕಪ್ ವೇಳೆ ದಿನೇಶ್ ಕಾರ್ತಿಕ್ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.