ಗುಜರಾರ್ ಟೈಟನ್ಸ್ ಐಪಿಎಲ್ಗೆ ಎಂಟ್ರಿ ನೀಡಿ ಕಮಾಲ್ ಪ್ರದರ್ಶನ ನೀಡಿದ ತಂಡ. ಆಟಗಾರರ ಪೊಟೆಂಶಿಯಲ್ ನೋಡಿಕೊಂಡು ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಇದರ ಪರಿಣಾಮವೇ ತಂಡದ ಮೊದಲ ಸೀಸನ್ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಗುಜರಾತ್ ತಂಡದ ಯಶಸ್ಸಿನ ಹಿಂದೆ ಕೋಚ್ ಆಶೀಶ್ ನೆಹ್ರಾ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಅವರ ಪಾತ್ರ ಬಹು ಮುಖ್ಯ. ಈ ಇಬ್ಬರು ಸಮರ್ಥವಾಗಿ ತಂಡವನ್ನು ಮುನ್ನಡೆಸಿದರು. ಆದರೆ ಈಗ ಈ ತಂಡದ ಚಾಂಪಿಯನ್ ನಾಯಕ, ತಂಡದಿಂದ ಹೊರ ನಡೆದಿದ್ದಾನೆ. ಹೀಗಾಗಿ ತಂಡದ ಸಮತೋಲನ ಕಳೆದುಕೊಂಡಿದೆ. ಇದನ್ನು ಸರಿಗೂಗಿಸಲು ಗುಜರಾತ್ ಹರಾಜಿನಲ್ಲಿ ಕೆಲವು ಒಳ್ಳೆಯ ಆಟಗಾರರನ್ನು ಪಿಕ್ ಮಾಡಿದೆ.

ಗುಜರಾತ್ ಟೈಟಾನ್ಸ್ ಸತತ ಎರಡು ಸೀಸನ್ಗಳಲ್ಲಿ ಫೈನಲ್ಗೆ ತಲುಪಿತು, ಆದರೆ ಈಗ ಈ ಆಲ್ರೌಂಡರ್ ತನ್ನ ಹಳೆಯ ತಂಡ ಮುಂಬೈ ಇಂಡಿಯನ್ಸ್ನ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದಾಗ್ಯೂ, ಗುಜರಾತ್ ಟೈಟಾನ್ಸ್ ಐಪಿಎಲ್ ಹರಾಜಿನಲ್ಲಿ ಹಾರ್ದಿಕ್ ಪಾಂಡ್ಯಗೆ ಬದಲಿ ಆಟಗಾರನನ್ನು ಹುಡುಕಲು ಪ್ರಯತ್ನಿಸಿತು, ಆದರೆ ಈ ತಂಡವು ಎಷ್ಟು ಯಶಸ್ಸನ್ನು ಸಾಧಿಸಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಇತ್ತೀಚೆಗಷ್ಟೇ ವಿಶ್ವಕಪ್ನಲ್ಲಿ ತನ್ನ ಛಾಪು ಮೂಡಿಸಿದ್ದ ಅಫ್ಘಾನಿಸ್ತಾನದ ಆಲ್ರೌಂಡರ್ ಅಜ್ಮತುಲ್ಲಾ ಒಮರ್ಜಾಯ್ ಅವರನ್ನು ಗುಜರಾತ್ ಟೈಟಾನ್ಸ್ 50 ಲಕ್ಷ ರೂ.ಗೆ ಖರೀದಿಸಿತ್ತು. ಭಾರತದ ಶಾರುಖ್ ಖಾನ್ಗಾಗಿ 7.40 ಕೋಟಿ ಖರ್ಚು ಮಾಡಿತು. ಅಜ್ಮತುಲ್ಲಾ ಒಮರ್ಜಾಯ್ ಮತ್ತು ಶಾರುಖ್ ಖಾನ್ ಒಟ್ಟಾಗಿ ಹಾರ್ದಿಕ್ ಪಾಂಡ್ಯ ಅವರ ಸ್ಥಾನ ತುಂಬಲು ಸಾಧ್ಯವೇ ಎಂಬ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಕಾಲವೇ ಉತ್ತರ ನೀಡಲಿದೆ.
ಗುಜರಾತ್ ಟೈಟಾನ್ಸ್ ಯಶ್ ದಯಾಳ್ ಮತ್ತು ಅಲ್ಜಾರಿ ಜೋಸೆಫ್ ಅವರನ್ನು ಬಿಡುಗಡೆ ಮಾಡಿತ್ತು. ಆದರೆ ಸ್ಪೆನ್ಸರ್ ಜಾನ್ಸನ್ ಮತ್ತು ಉಮೇಶ್ ಯಾದವ್ ಅವರನ್ನು ಹರಾಜಿನಲ್ಲಿ ಖರೀದಿಸಿತು. ಮೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಜೋಶ್ ಲಿಟಲ್ ಮತ್ತು ಸ್ಪೆನ್ಸರ್ ಜಾನ್ಸನ್ ಅವರಂತಹ ಬೌಲರ್ಗಳು ಈ ತಂಡದಲ್ಲಿದ್ದಾರೆ. ಅದೇ ಸಮಯದಲ್ಲಿ, ಸ್ಪಿನ್ನರ್ ಆಗಿ ರಶೀದ್ ಖಾನ್ ಇದ್ದಾರೆ. ಅಂದರೆ, ಬೌಲಿಂಗ್ ವಿಭಾಗ ಖಂಡಿತವಾಗಿಯೂ ಉತ್ತಮವಾಗಿದೆ.

ಅಜ್ಮತುಲ್ಲಾ ಒಮರ್ಜಾಯ್ (50 ಲಕ್ಷ), ಉಮೇಶ್ ಯಾದವ್ (5.80 ಕೋಟಿ), ಶಾರುಖ್ ಖಾನ್ (7.4 ಕೋಟಿ), ಸುಶಾಂತ್ ಮಿಶ್ರಾ (2.2 ಕೋಟಿ), ಕಾರ್ತಿಕ್ ತ್ಯಾಗಿ (60 ಲಕ್ಷ), ಮಾನವ್ ಸುತಾರ್ (20 ಲಕ್ಷ), ಸ್ಪೆನ್ಸರ್ ಜಾನ್ಸನ್. (ರೂ. 10 ಕೋಟಿ) ಮತ್ತು ರಾಬಿನ್ ಮಿಂಜ್ (ರೂ. 3.6 ಕೋಟಿ)