
'ವೈಡ್ ಬಾಲ್' ವಿವಾದಕ್ಕೆ ಸಂಬಂಧಿಸಿದಂತೆ ಟೀಕೆಗೆ ಗುರಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಅವರಿಗೆ ಭಾರತೀಯ ಕ್ರಿಕೆಟ್ ಲೆಜೆಂಡ್ ಲಿಟಲ್ ಮಾಸ್ಟರ್ ಖ್ಯಾತಿಯ ಸುನಿಲ್ ಗವಾಸ್ಕರ್ ಬೆಂಬಲ ಸೂಚಿಸಿದ್ದಾರೆ.
2020ರ ಐಪಿಎಲ್ನ ಕಾಮೆಂಟರಿ ಪ್ಯಾನೆಲ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುನೀಲ್ ಗವಾಸ್ಕರ್ ವಿವಾದದ ಕುರಿತು ಮಾತನಾಡಿ ಧೋನಿ ಗಲಾಟೆ ಮಾಡಲಿಲ್ಲ. ಕಳೆದ ಓವರ್ನಲ್ಲಿ ಕರಣ್ ಶರ್ಮಾ ಬೌಂಡರಿ ಬಿಟ್ಟುಕೊಟ್ಟ ನಂತರ ಧೋನಿ ಗಲಾಟೆ ಮಾಡಿಲ್ಲ ಆದರೆ ಸ್ವಲ್ಪ ಕಳವಳ ಹೊಂದಿದ್ದರು ಎಂದು ಗವಾಸ್ಕರ್ ಹೇಳಿದ್ದಾರೆ. ಬ್ಯಾಟ್ಸ್ಮನ್ ಚೆಂಡಿನ ಕಡೆಗೆ ಚಲಿಸಿದ ಸ್ಥಳದ ಬಗ್ಗೆ ಶಾರ್ದೂಲ್ ಠಾಕೂರ್ ಅವರೊಂದಿಗೆ ಅದು ಅನುಸರಿಸಿತು ಎಂದು ಅವರು ತಿಳಿಸಿದರು.
"ಅವರು(ಧೋನಿ) ಗಲಾಟೆ ಮಾಡಿದ್ದಾರೆಂದು ನಾನು ಭಾವಿಸುವುದಿಲ್ಲ ಆದರೆ, ಕರಣ್ ಶರ್ಮಾ ಅವರ ಕೊನೆಯ ಎಸೆತದಲ್ಲಿ ಏನಾಯಿತು ಎಂಬುದರ ಬಗ್ಗೆ ಅವರು ಸ್ವಲ್ಪ ಕಳವಳಗೊಂಡಿದ್ದರು. ಅದು ಬೌಂಡರಿ ಹೋಯಿತು, ಏಕೆಂದರೆ ಅವರು ಆ ಎಸೆತವನ್ನು ಬೌಲ್ ಮಾಡುತ್ತಾರೆಂದು ಅವರು ನಿರೀಕ್ಷಿಸಿರಲಿಲ್ಲ" ಎಂದು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಸುನಿಲ್ ಗವಾಸ್ಕರ್ ಹೇಳಿದರು.
"ಮತ್ತೆ ಅದೇ ಎಸೆತವನ್ನು ನಾವು ನೋಡಬೇಕಾಯಿತು. ವೈಡ್ ಎಂದು ಕರೆದ ಆ ಎಸೆತದ ಬಳಿ ಬ್ಯಾಟ್ಸ್ಮನ್ ಸ್ಥಳಾಂತರಗೊಂಡಿದ್ದಾರೆ ಅಥವಾ ಬ್ಯಾಟ್ಸ್ಮನ್ಗೆ ಸ್ವಲ್ಪ ಸಿಕ್ಕಿರಬಹುದು. ಅದು ಏನೇ ಇರಲಿ, ಕೊನೆಯ ಎರಡು ಓವರ್ಗಳು ನೋಡಲು ರೋಮಾಂಚನಕಾರಿಯಾಗಿತ್ತು. ಟಿ 20 ಎಲ್ಲದರ ಬಗ್ಗೆಯೂ ಇದೆ, ಐಪಿಎಲ್ ಎಲ್ಲದರ ಬಗ್ಗೆಯೂ ಇದೆ," ಎಂದು ಸುನೀಲ್ ಗವಾಸ್ಕರ್ ತಿಳಿಸಿದರು.
ಸನ್ರೈಸರ್ಸ್ ಹೈದರಾಬಾದ್ ಇನಿಂಗ್ಸ್ನ 19ನೇ ಓವರ್ನಲ್ಲಿ ಎಂಎಸ್ ಧೋನಿ ಹಾಗೂ ಅಂಪೈರ್ ನಡುವೆ ಈ ಘಟನೆ ನಡೆದಿತ್ತು. 18ನೇ ಓವರ್ನಲ್ಲಿ 19 ರನ್ಗಳನ್ನು ಗಳಿಸಿದ್ದ ಎಸ್ಆರ್ಎಚ್, ಕೊನೆಯ ಎರಡು ಓವರ್ಗಳಲ್ಲಿ 27 ರನ್ಗಳ ಅಗತ್ಯವಿತ್ತು, 19ನೇ ಓವರ್ನ ಮೊದಲನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಎರಡು ರನ್ಗಳನ್ನು ನೀಡಿದರು.
ಬಳಿಕ ಎರಡನೇ ಎಸೆತ ವೈಡ್ ಆಯಿತು. ನಂತರದ ಎಸೆತ ಕೂಡ ಲೈನ್ನಿಂದ ಹೊರಗಡೆ ಹೋಗುತ್ತಿತ್ತು, ಅದರಂತೆ ಅಂಪೈರ್ ರೀಫೆಲ್, ವೈಡ್ ನೀಡಲು ತನ್ನ ಎರಡೂ ಕೈಗಳನ್ನು ಅರ್ಧಕ್ಕೆ ಎತ್ತುವ ವೇಳೆ ಎಂಎಸ್ ಧೋನಿಯ ಕೋಪಗೊಂಡಿದ್ದ ಮುಖವನ್ನು ನೋಡಿ, ತಮ್ಮ ನಿರ್ಧಾರವನ್ನು ಬದಲಿಸಿದರು.