ಐಪಿಎಲ್ನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್ಗೆ 15ನೇ ಆವೃತ್ತಿಯಲ್ಲಿ ತನ್ನ ಆರಂಭಿಕ ಐದು ಪಂದ್ಯಗಳಲ್ಲಿ ಸೋಲನ್ನ ಅನುಭವಿಸುವ ಮೂಲಕ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸೋಲಿನ ಸರಣಿಯಿಂದ ಹೊರಬರಲು ಭಗೀರತ ಪ್ರಯತ್ನ ನಡೆಸುತ್ತಿದ್ದು, ಮುಂಬೈ ಶನಿವಾರದಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಗಳಾಗಿದ್ದು, ಆಲ್ ರೌಂಡರ್ ಅರ್ಜುನ ತೆಂಡೊಲ್ಕರ್ ಪಾದಾರ್ಪಣೆ ಮಾಡುದ ಸಾಧ್ಯತೆಗಳಿವೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ದಂತಕತೆ ಸಚಿನ್ ತೆಂಡೊಲ್ಕರ ಅವರ ಮಗ ಅರ್ಜುನ್ ತೆಂಡೊಲ್ಕರ ಅವರು ಮುಂಬೈ ತಂಡದ ಬೌಲಿಂಗ್ ವಿಭಾಗದಲ್ಲಿ ಚೊಚ್ಚಲ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂದು ಕಾದುನೋಡಬೇಕಿದೆ.
ಎಡಗೈ ವೇಗಿ 2021 ರಲ್ಲಿ ಹರಿಯಾಣ ವಿರುದ್ಧ ಮುಂಬೈ ಪರವಾಗಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ್ದರು. ಉತ್ತಮವಾಗಿ ಔಟ್ಸ್ವಿಂಗರ್ನೊಂದಿಗೆ, ಬೌಲಿಂಗ್ ಮಾಡಲು ಸಮರ್ಥರಾಗಿದ್ದಾರೆ. ಉತ್ತಮ ಆಲ್ರೌಂಡರ್ ಆಗಿರುವ ಅರ್ಜುನ್ ಅನ್ನು ಮುಂಬೈ ಇಂಡಿಯನ್ಸ್ 2021 ರ ಹರಾಜಿನಲ್ಲಿ 20 ಲಕ್ಷದ ಮೂಲ ಬೆಲೆಗೆ ಖರೀದಿಸಿತ್ತು. ನಂತರದ 15 ನೇ ಆವೃತ್ತಿಯಲ್ಲಿ ಮತ್ತೊಮ್ಮೆ ಮುಂಬೈ ತಂಡ 30 ಲಕ್ಷಕ್ಕೆ ಖರೀದಿಸಿದೆ.
ಮುಂಬೈ ತಂಡದ ಬ್ಯಾಟಿಂಗ್ ವಿಭಾಗ ಉತ್ತಮವಾದ ಪ್ರದರ್ಶವೇನೋ ನೀಡುತ್ತಿದೆ ಆದ್ರೆ, ಜಸ್ಪ್ರೀತ್ ಬುಮ್ರಾ ಹೊರತಾಗಿ ತಂಡದಲ್ಲಿ ವಿಕೆಟ್ ಟೇಕಿಂಗ್ ಬೌಲರ್ಗಳು ಇಲ್ಲವಾಗಿದ್ದಾರೆ. ಆಲ್ರೌಂಡರ್ ಆಗಿರುವ ಅರ್ಜುನ್ ತೆಂಡೂಲ್ಕರ್, ಎಡಗೈ ವೇಗಿ ಜೊತೆಗೆ ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ತಂಡದಲ್ಲಿ ಕೊಂಚ ಬದಲಾವಣೆಗಳನ್ನು ಮಾಡುವ ಮೂಲಕ ಲಖನೌ ಎದುರು ಅರ್ಜುನ್ ತೆಂಡೂಲ್ಕರ್ಗೆ ಆಡುವ ಅವಕಾಶ ನೀಡಿದ್ರೆ ಅಚ್ಚರಿಯೇನಿಲ್ಲ.
ಮುಂಬೈನ ಪ್ಲೇಯಿಂಗ್ ಇಲೆವೆನ್ನಲ್ಲಿ ನಲ್ಲಿ ಇಶಾನ್ ಕಿಶನ್, ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ತೆರೆಯಲಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಒಂದರ ಹಿಂದೆ ಒಂದರಂತೆ ಅರ್ಧ ಶತಕ ಸಿಡಿಸಿದ್ದ ಇಶಾನ್ ಬಳಿಕ ಬೇಗನೆ ಔಟಾದರು. ಇನ್ನುಳಿದಂತೆ ತಂಡದಲ್ಲಿ ಉತ್ತಮ ಪ್ರದರ್ಶನ ನೀಡದ ಬೌಲರ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆಗಳಿವೆ. ಇಂದು ರೋಹಿತ್ ಶರ್ಮಾ ನೇತೃತ್ವದ ತಂಡವು ಆರನೇ ಪಂದ್ಯವನ್ನು ಆಡಲು ಸಿದ್ದವಾಗಿದೆ.