ಭಾರತದ ಸ್ಟಾರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ 2023ರ ಐಪಿಎಲ್ ಋತುವಿನಲ್ಲಿ ಗಾಯದ ಹಿನ್ನಡೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಮುಂಬರುವ ಐಸಿಸಿ ಪಂದ್ಯಾವಳಿಗಳಿಗೆ ಭಾರತ ತಂಡಕ್ಕೆ ಹಿಂದಿರುಗುವ ಮುನ್ಸೂಚನೆ ನೀಡಿದ್ದಾರೆ.
ಸದ್ಯ ಕೆಎಲ್ ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಅವರು ಪುನರ್ವಸತಿಗೆ ಒಳಗಾಗಿದ್ದಾರೆ. ಕ್ರಿಕೆಟ್ ಮೈದಾನಕ್ಕೆ ರಾಹುಲ್ ಅವರ ಬಹುನಿರೀಕ್ಷಿತ ವಾಪಸಾತಿಯನ್ನು ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಸದ್ಯ ಕೆಎಲ್ ರಾಹುಲ್ ಅವರ ಪುನರಾಗಮನ ತೂಗುಯ್ಯಾಲೆಯಲ್ಲಿರುವಂತೆ ಕಾಣುತ್ತಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ನಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಗೆ ಯಾವುದೇ ಔಪಚಾರಿಕ ಅನುಮತಿಯಿಲ್ಲದಿದ್ದರೂ, ಅವರು ಸ್ಪರ್ಧಾತ್ಮಕ ಕ್ರಿಕೆಟ್ಗೆ ಸನ್ನದ್ಧರಾಗಿರುವ ಬಗ್ಗೆ ಅನುಮಾನಗಳು ಹರಿದಾಡುತ್ತಿವೆ.

ಈ ವಾರಾಂತ್ಯ ಅಥವಾ ಮುಂದಿನ ವಾರದ ಆರಂಭದಲ್ಲಿ ಬೆಂಗಳೂರಿನಲ್ಲಿ ಆಡಲಿರುವ ಅಭ್ಯಾಸ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪುನರಾಗಮನ ಮಾಡಲಿರುವ ಬಗ್ಗೆ ನಿರ್ಧಾರವಾಗಲಿದೆ.
ಇನ್ನು ಕಳೆದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿರುವ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಅವರ ಫಿಟ್ನೆಸ್ ಪರೀಕ್ಷೆ ನಿರ್ಣಾಯಕ ನಿರ್ಧಾರವಾಗಿದೆ.
ಮುಂಬರುವ ಏಷ್ಯಾ ಕಪ್ ಮತ್ತು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಎರಡನ್ನೂ ನಿಭಾಯಿಸುವ ಕೆಎಲ್ ರಾಹುಲ್ ಅವರ ಸಾಮರ್ಥ್ಯ ಭಾರತ ತಂಡಕ್ಕೆ ಬಹಳ ನಿರ್ಣಾಯಕವಾಗಿದೆ.

ಎನ್ಸಿಎನಲ್ಲಿ ನಡೆಯುತ್ತಿರುವ 3 ಹಂತದ ತರಬೇತಿ ಅವಧಿಗಳಲ್ಲಿ ಅವರೊಂದಿಗೆ ಸಂವಹನ ನಡೆಸಿದ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳು ಕೆಎಲ್ ರಾಹುಲ್ ಅವರ ಸುಧಾರಿತ ಫಿಟ್ನೆಸ್ ಬಗ್ಗೆ ಸಮರ್ಥಿಸಿದ್ದಾರೆ.
ಕೆಎಲ್ ರಾಹುಲ್ ಅವರು ತಮ್ಮ ಸಂಪೂರ್ಣ ಚೇತರಿಕೆಗೆ ಅಗತ್ಯವಿರುವ ಶೇ.85ರಷ್ಟು ಕೆಲಸದ ಹೊರೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಬಿಸಿಸಿಐ ಮೂಲಗಳು ಬಹಿರಂಗಪಡಿಸಿವೆ.
ಈ ಶೇಕಡಾವಾರು ಪ್ರಾಮುಖ್ಯತೆ ಹೊಂದಿದ್ದು, ಎನ್ಸಿಎನಲ್ಲಿ ಪುನರ್ವಸತಿ ಹೊಂದಿರುವ ಆಟಗಾರರು ಶೇಕಡಾ 85 ಮಾರ್ಕ್ ತಲುಪಿದ ನಂತರ ಮಾತ್ರ, ಅಭ್ಯಾಸ ಆಟಗಳಲ್ಲಿ ಭಾಗವಹಿಸಲು ಸಾಂಪ್ರದಾಯಿಕವಾಗಿ ಅನುಮತಿಸಲಾಗುತ್ತದೆ.
ಆದರೆ, ನಿಜವಾದ ಪಂದ್ಯದ ಸಮಯದಲ್ಲಿ ಈ ಪ್ರಗತಿಯನ್ನು ಪ್ರದರ್ಶಿಸುವುದು ಅಗತ್ಯವಾಗಿದೆ. ಅಲ್ಲಿ ಆಟಗಾರನು ಯಾವುದೇ ಹಿನ್ನಡೆಗೆ ಒಳಗಾಗದೆ ತನ್ನ ಅತ್ಯುತ್ತಮ ಪ್ರದರ್ಶನ ತೋರಿಸಬೇಕಾಗಿದೆ.
ಭಾರತೀಯ ಕ್ರಿಕೆಟ್ ತಂಡದ ಇತ್ತೀಚಿನ ವೈಟ್-ಬಾಲ್ ಬ್ಯಾಟಿಂಗ್ ಪ್ರದರ್ಶನಗಳ ಬಗ್ಗೆ ತಿಳಿದಿರುವ ಆಯ್ಕೆದಾರರು, ಕೆಎಲ್ ರಾಹುಲ್ ಅವರ ಅನುಭವವನ್ನು ಪ್ರಮುಖವಾಗಿ ನೋಡಲಿದ್ದಾರೆ. ಸುಮಾರು ಒಂದು ದಶಕದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಅನುಭವ ಹೊಂದಿದ್ದು, ಭಾರತ ತಂಡ ಮುಂಬರುವ ಏಷ್ಯಾ ಕಪ್ ಮತ್ತು ನಂತರದ ವಿಶ್ವಕಪ್ಗಾಗಿ ಕೆಎಲ್ ರಾಹುಲ್ ಮೇಲೆ ಕಣ್ಣಿಟ್ಟಿದ್ದಾರೆ.
ಆದರೂ, ಕೆಎಲ್ ರಾಹುಲ್ ಭಾರತ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಏಕದಿನ ಕ್ರಿಕೆಟ್ ಆಟದ ಮೂಲಕ ಬ್ಯಾಟಿಂಗ್ ಮತ್ತು ವಿಕೆಟ್-ಕೀಪಿಂಗ್ ಎರಡರಲ್ಲೂ ತನ್ನ ಸಂಪೂರ್ಣ ಫಿಟ್ನೆಸ್ ಸಾಬೀತುಪಡಿಸಬೇಕಿದೆ.