ಭಾರತಕ್ಕೆ ಅನುಕೂಲಕರ
ಭಾರತಕ್ಕೆ ಅನುಕೂಲಕರವಾದ ರೀತಿಯಲ್ಲಿ ಪಿಚ್ಗಳನ್ನು ಮಾಡಲಾಗುತ್ತಿದೆ ಎಂದು ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಆರೋಪಿಸಿರುವುದಾಗಿ ಲಂಡನ್ನ 'ಜಾಂಗ್' ಪತ್ರಿಕೆ ವರದಿ ಮಾಡಿದೆ.
ಭಾರತಕ್ಕೆ ಮಾತ್ರ ಯಾವಾಗಲೂ ಬ್ಯಾಟಿಂಗ್ ಸ್ನೇಹಿ ಮತ್ತು ಅವರ ಶಕ್ತಿಯಾದ ನಿಧಾನಗತಿಯ ಬೌಲರ್ಗಳಿಗೆ ಪೂರಕವಾಗುವಂತಹ ಪಿಚ್ಗಳೇ ಯಾವಾಗಲೂ ಸಿಗುತ್ತಿವೆ ಎಂದು ಅವರು ಅಳಲು ತೋಡಿಕೊಂಡಿರುವುದಾಗಿ ವರದಿಯಾಗಿದೆ.
ಟಾಂಟಾನ್ ಪಿಚ್ ಬಗ್ಗೆ ದೂರು
ಬುಧವಾರ ಆಸ್ಟ್ರೇಲಿಯಾ ವಿರುದ್ಧ ಟಾಂಟಾನ್ನಲ್ಲಿ ನಡೆದ ಪಂದ್ಯದ ಪಿಚ್ ಪರಿಶೀಲಿಸಿದ ಬಳಿಕ ಸರ್ಫರಾಜ್ ಅಸಮಾಧಾನ ವ್ಯಕ್ತಪಡಿಸಿದ್ದರು. ಪಿಚ್ ಹೆಚ್ಚರು ಹುಲ್ಲಿನಿಂದ ಕೂಡಿದ್ದು, ಬೌನ್ಸ್, ವೇಗ ಪಡೆದುಕೊಳ್ಳುವುದರಿಂದ ವೇಗದ ಬೌಲರ್ಗಳಿಗೆ ನೆರವಾಗುವುದು ಸ್ಪಷ್ಟ ಎಂದಿದ್ದರು. ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ಆಡುವ ಮಾದರಿಗೆ ಅನುಕೂಲಕರವಾದ ಪಿಚ್ಗಳು ಸಿಗುತ್ತಿಲ್ಲ ಎಂದು ಸರ್ಫರಾಜ್ ಹೇಳಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ವಾರ್ನರ್ ಮಾಡಿದ್ದೇನು ಗೊತ್ತೇ?
ನಮಗೆ ಮಾತ್ರ ಕಷ್ಟದ ಪಿಚ್
'ಭಾರತೀಯರು ಬ್ಯಾಟಿಂಗ್ಗೆ ಅನುಕೂಲಕರವಾದ ಮತ್ತು ಸ್ಪಿನ್ನರ್ಗಳಿಗೆ ಸೂಕ್ತವಾದ ಪಿಚ್ಗಳನ್ನು ಹೇಗೆ ಪಡೆಯುತ್ತಾರೆ ಎಂದು ಪಾಕಿಸ್ತಾನದ ನಾಯಕ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂತಹ ಪಿಚ್ಗಳು ಏಷ್ಯಾದ ತಂಡಗಳಿಗೆ ಪೂರಕವಾಗಿರುತ್ತವೆ. ಆದರೆ, ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡವು ಯಾವಾಗಲೂ ಟಾಂಟಾನ್ನಂತಹ ಸವಾಲಿನ ಹಾಗೂ ಕ್ಲಿಷ್ಟಕರ ಪಿಚ್ಗಳಲ್ಲಿಯೇ ಆಡುವಂತಾಗುತ್ತದೆ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ' ಎಂದು ಸರ್ಫರಾಜ್ ಅವರ ಆಪ್ತರ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿವೆ.
ಭಾರತ-ಪಾಕಿಸ್ತಾನ ಪಂದ್ಯ
ಪ್ರಸಕ್ತ ವಿಶ್ವಕಪ್ನಲ್ಲಿ ಪಾಕಿಸ್ತಾನ ನಾಲ್ಕು ಪಂದ್ಯಗಳನ್ನು ಆಡಿದ್ದು, ಮೂರು ಅಂಕಗಳೊಂದಿಗೆ ಎಂಟನೆಯ ಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯ ಕಾರಣ ರದ್ದುಗೊಂಡಿತ್ತು. ಪಾಕಿಸ್ತಾನವು ಜೂನ್ 16ರಂದು ನಡೆಯಲಿರುವ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ. ಸರ್ಫರಾಜ್ ಆರೋಪದ ನಡುವೆ ಈ ಹೈವೋಲ್ಟೇಜ್ ಪಂದ್ಯ ಎರಡೂ ತಂಡಗಳಿಗೆ ಪ್ರತಿಷ್ಠೆಯಾಗಿದೆ.
ಭಾರತ vs ನ್ಯೂಜಿಲ್ಯಾಂಡ್: ವಿಶ್ವದಾಖಲೆಗೆ ಕೊಹ್ಲಿಗೆ ಕೇವಲ 57 ರನ್ ಬೇಕು!