ಬೆಂಗಳೂರು, ಮಾ. 26: ಹೌದು... ನಾವು ವಿಶ್ವಕಪ್ ಪಂದ್ಯಾವಳಿಯಿಂದ ಹೊರಕ್ಕೆ ಬಿದ್ದಿದ್ದೇವೆ. ಹೊರಕ್ಕೆ ಬಿದ್ದ ಮಾತ್ರಕ್ಕೆ ಆಟಗಾರನ್ನು ತೆಗಳುತ್ತ ಅವರ ಮನೆ, ಆಸ್ತಿಯ ಮೇಲೆ ದಾಳಿ ಮಾಡಲು ಮುಂದಾಗುತ್ತಿದ್ದೇವಲ್ಲಾ! ನಮ್ಮಂಥ ಮೂರ್ಖರು ಮತ್ಯಾರಾದಾರೂ ಇದ್ದಾರೆಯೇ?
ಜನರು ಸುಮ್ಮನಿರುತ್ತಿದ್ದರೋ, ಏನೋ? ಮಾಧ್ಯಮಗಳು ಬಿಡಬೇಕಲ್ಲ. ಕೆಲ ಮಾಧ್ಯಮಗಳೆಂತೂ ಪಂದ್ಯ ಸೋತಲ್ಲಿಂದ ಆಟಗಾರರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡು ತಾವೇ ನಿರ್ಣಯವನ್ನು ಕೊಟ್ಟುಬಿಡುತ್ತಿವೆ. ಅಷ್ಟಕ್ಕೂ ಇಲ್ಲಿ ಕೇವಲ ಆಟಗಾರರೊಂದೇ ಅಲ್ಲ ಅವರ ಪ್ರೇಯಸಿಯರೂ ಟೀಕೆಗೆ ಒಳಗಾಗುತ್ತಿದ್ದಾರೆ. ಇದರಲ್ಲಿ ಎಷ್ಟು ಹುರುಳಿದೆ? ಯಾವುದು ಅರ್ಥಗರ್ಭಿತ, ಮಾತಾಡುವವರಿಗೂ ಗೊತ್ತಿಲ್ಲ.[ಸೋಲಿನ ಶಾಕ್: ಪ್ರತಿಭಟನೆ ಬಿಸಿ, ಧೋನಿ ಮನೆಗೆ ರಕ್ಷಣೆ]

ಸೆಮಿ ಫೈನಲ್ ವರೆಗೆ ಸತತ ಏಳು ಮ್ಯಾಚು ಗೆದ್ದಾಗ ಇಲ್ಲದ್ದು, ಸೆಮಿ ಫೈನಲ್ ನಲ್ಲಿ ಸೋತಾಗ 'ಯುವರಾಜ್ ಸಿಂಗ್ ತಂಡದಲ್ಲಿ ಇರಬೇಕಿತ್ತು' ಎಂಬ ವಿಷಯದ ಬ...
Posted by Prasad Naik on 26 March 2015