ಅಕ್ಟೋಬರ್ 14ರಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯದ ವೇಳೆ ಪಾಕಿಸ್ತಾನ ತಂಡವನ್ನು ಗುರಿಯಾಗಿಸಿಕೊಂಡು ಅನುಚಿತ ವರ್ತನೆಯ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧಿಕೃತ ದೂರು ಸಲ್ಲಿಸಿದೆ ಎಂದು ಹೇಳಿದೆ.
ಮಂಗಳವಾರ ಸಂಜೆ ತನ್ನ ಅಧಿಕೃತ ಎಕ್ಸ್ (ಟ್ವಿಟ್ಟರ್) ಹ್ಯಾಂಡಲ್ನ ಪೋಸ್ಟ್ನಲ್ಲಿ 2023ರ ಏಕದಿನ ವಿಶ್ವಕಪ್ ಪಂದ್ಯದ ಬಗ್ಗೆ ಅಸಮಾಧಾನಗೊಂಡ ಘಟನೆಯ ನಿಖರ ಸ್ವರೂಪದ ಬಗ್ಗೆ ಪಿಸಿಬಿ ನಿರ್ದಿಷ್ಟಪಡಿಸಿಲ್ಲ.

ಕಳೆದ ಶನಿವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1.20 ಲಕ್ಷಕ್ಕೂ ಪ್ರೇಕ್ಷಕರ ಮಧ್ಯೆ ನಡೆದ ಹಣಾಹಣಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು 7 ವಿಕೆಟ್ಗಳಿಂದ ಸೋಲಿಸಿತ್ತು.
2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ವರದಿ ಮಾಡಲು ಬಯಸುವ ಪಾಕಿಸ್ತಾನದ ಪತ್ರಕರ್ತರಿಗೆ ವೀಸಾ ವಿಳಂಬದ ಬಗ್ಗೆಯೂ 'ಔಪಚಾರಿಕ ಪ್ರತಿಭಟನೆ' ನಡೆಸುತ್ತಿದೆ ಎಂದು ಪಿಸಿಬಿ ಹೇಳಿದೆ.
"ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಪಾಕಿಸ್ತಾನದ ಪತ್ರಕರ್ತರಿಗೆ ವೀಸಾ ವಿಳಂಬ ಮತ್ತು 2023ರ ವಿಶ್ವಕಪ್ಗಾಗಿ ತನ್ನ ಅಭಿಮಾನಿಗಳಿಗೆ ವೀಸಾ ನಿರಾಕರಣೆ ನೀತಿಯ ಬಗ್ಗೆ ಐಸಿಸಿಗೆ ಮತ್ತೊಂದು ಔಪಚಾರಿಕ ಪ್ರತಿಭಟನೆಯನ್ನು ಸಲ್ಲಿಸಿದೆ," ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಅಧಿಕೃತ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಿದೆ.

"ಅಕ್ಟೋಬರ್ 14ರಂದು ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನ ತಂಡವನ್ನು ಗುರಿಯಾಗಿಸಿಕೊಂಡು ಅನುಚಿತ ವರ್ತನೆಯ ಬಗ್ಗೆಯೂ ಪಿಸಿಬಿ ತನ್ನ ದೂರು ದಾಖಲಿಸಿದೆ," ಎಂದು ಬರೆದುಕೊಂಡಿದೆ.
ಪಿಟಿಐ ವರದಿಯ ಪ್ರಕಾರ, ಅಹಮದಾಬಾದ್ನಲ್ಲಿ ಆತಿಥೇಯರ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ 'ಕೆಲವು ಘಟನೆಗಳ' ಕುರಿತು ಐಸಿಸಿಗೆ ಪ್ರತಿಭಟನೆಯನ್ನು ಸಲ್ಲಿಸಲು ಪಿಸಿಬಿ ಪರಿಗಣಿಸುತ್ತಿದೆ ಎಂಬ ಅನುಮಾನಗಳ ಮಧ್ಯೆ ಪಿಸಿಬಿ ಕ್ರಿಕೆಟ್ ಆಡಳಿತ ಸಮಿತಿ ಅಧ್ಯಕ್ಷ ಝಾಕಾ ಅಶ್ರಫ್ ಪ್ರತಿಕ್ರಿಯಿಸಿದ್ದಾರೆ.
ಝಾಕಾ ಅಶ್ರಫ್ ಅವರು ಸೋಮವಾರ ಪಾಕಿಸ್ತಾನಕ್ಕೆ ಹಿಂದಿರುಗಿದ್ದಾರೆ ಮತ್ತು ಅವರ ಭಾರತ ಪ್ರವಾಸದ ಕುರಿತು ಚರ್ಚಿಸಲು ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

"ಝಾಕಾ ಅಶ್ರಫ್ ಅವರು ಭಾರತದ ವಿರುದ್ಧದ ಪಂದ್ಯದ ವೇಳೆ ಅಹಮದಾಬಾದ್ನಲ್ಲಿ ಸ್ವತಃ ಹಾಜರಿದ್ದರು ಮತ್ತು ಅವರು ಅಲ್ಲಿ ತಂಗಿದ್ದ ಸಮಯದಲ್ಲಿ ಭಾರತೀಯ ಕ್ರಿಕೆಟ್ ಅಧಿಕಾರಿಗಳ ಆತಿಥ್ಯದ ಹೊರತಾಗಿಯೂ ಅವರನ್ನು ಅಸಮಾಧಾನಗೊಳಿಸಿರುವ ಕೆಲವು ಘಟನೆಗಳಿಗೆ ಸಾಕ್ಷಿಯಾಗಿದ್ದಾರೆ," ಎಂದು ಪಿಸಿಬಿ ಮೂಲಗಳು ಹೇಳಿವೆ.
ಪಿಸಿಬಿ ಕ್ರಿಕೆಟ್ ಆಡಳಿತ ಸಮಿತಿ ಅಧ್ಯಕ್ಷರು ಪ್ರಸ್ತುತ ತಮ್ಮ ಭಾರತ ಭೇಟಿಯನ್ನು ತಮ್ಮ ಹಿರಿಯ ಸಹಾಯಕರೊಂದಿಗೆ ಮಾತ್ರ ಚರ್ಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ತಂಡದ ನಿರ್ದೇಶಕ ಮತ್ತು ಮುಖ್ಯ ಕೋಚ್ ಮಿಕ್ಕಿ ಆರ್ಥರ್, ಭಾರತ ವಿರುದ್ಧ ಸೋಲಿನ ನಂತರ ಪ್ರೇಕ್ಷಕರ ವರ್ತನೆ ಮತ್ತು ಅವರ ತಂಡದ ಮೇಲೆ ಅದರ ಪ್ರಭಾವದ ಬಗ್ಗೆ ಮಾತನಾಡಿದರು.
ವಿಶ್ವಕಪ್ ಪಂದ್ಯಾವಳಿಯನ್ನು ಯಶಸ್ವಿ ಕಾರ್ಯಕ್ರಮವನ್ನಾಗಿ ಮಾಡಲು ಐಸಿಸಿ ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಪ್ರತಿಕ್ರಿಯಿಸಿದ್ದಾರೆ.
ಭಾರತದ ವಿರುದ್ಧ ಪಾಕಿಸ್ತಾನ ಆಟಗಾರರ ಪ್ರದರ್ಶನದಿಂದ ಝಾಕಾ ಅಶ್ರಫ್ ತೀವ್ರ ನಿರಾಶೆಗೊಂಡಿದ್ದಾರೆ ಮತ್ತು ಪಾಕಿಸ್ತಾನಕ್ಕೆ ಹಿಂದಿರುಗುವ ಮೊದಲು ಅಹಮದಾಬಾದ್ ಸೋಲನ್ನು ಮರೆತು ತಮ್ಮ ಉಳಿದ ಪಂದ್ಯಗಳನ್ನು ಎದುರುನೋಡಬೇಕೆಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.