ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಲಾಂತರ್ಗತ ನಾಗಸನ್ನಿಧಿಯಲ್ಲಿ ಕ್ರಿಕೆಟರ್ ಯುವರಾಜ್ ಸಿಂಗ್

By Mahesh

ಬಂಟ್ವಾಳ, ಅ.15: ಕ್ರಿಕೆಟರ್ ಯುವರಾಜ್ ಸಿಂಗ್, ನಟಿ ಹಜೇಲ್ ಕೀಚ್ ಅವರು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಶ್ರೀ ವನದುರ್ಗ ತಥಾ ಜಲಾಂತರ್ಗತ ನಾಗಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬಂಟ್ವಾಳದ ಮೊಡಂಕಾಪುವಿನಲ್ಲಿರುವ ಶ್ರೀ ವನದುರ್ಗ ತಥಾ ಜಲಾಂತರ್ಗತ ನಾಗಸನ್ನಿಧಿಗೆ ಯುವರಾಜ್ ಸಿಂಗ್ ಹಾಗೂ ಅವರ ಕುಟುಂಬದ ಸದಸ್ಯರು, ಸಲ್ಮಾನ್ ಖಾನ್ ಅಭಿನಯದ ಬಾಡಿಗಾರ್ಡ್ ಚಿತ್ರದ ನಟಿ ಹಜೇಲ್ ಕೀಚ್ ಹಾಗೂ ಬಂಧು ಮಿತ್ರರು ಭೇಟಿ ನೀಡಿದರು. ["ಧೋನಿ ರಾವಣ ಇದ್ದಂತೆ, ಅವನು ನಿರ್ಗತಿಕನಾಗಲಿ"]

Yuvraj Singh along with Actress Hazel Keech visits Vanadurga Temple, Bantwal


ಯುವರಾಜ್ ಸಿಂಗ್ ಅವರ ತಾಯಿ ಶಬ್ನಮ್ ಸಿಂಗ್ ಅವರು ತಮ್ಮ ಪುತ್ರನ ಉತ್ತಮ ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಕ್ಷೇತ್ರದಲ್ಲಿ ತೀರ್ಥಸ್ನಾನ ಮಾಡಿ, ಮಧ್ಯಾಹ್ನದ ಪೂಜೆಯಲ್ಲಿ ಪಾಲ್ಗೊಂಡು ಭೋಜನ ಸೇವಿಸಿ ಸಂಜೆ ಬಜ್ಪೆಗೆ ಬಂದು ವಿಮಾನ ಏರಿ ದೆಹಲಿಗೆ ವಾಪಸ್ ಆಗಿದ್ದಾರೆ.

ಯುವರಾಜ್ ಅವರ ಸ್ನೇಹಿತೆ ಶಾರಿನಿ ಅವರು ಈ ಕ್ಷೇತ್ರಕ್ಕೆ ಈ ಹಿಂದೆ ಬಂದು ಫಲ ಕಂಡಿದ್ದಾರಂತೆ. ಹೀಗಾಗಿ ಯುವರಾಜ್ ಸಿಂಗ್ ಅವರ ಪರಿವಾರ ಶ್ರೀಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿದೆ.

Yuvraj Singh along with Actress Hazel Keech visits Vanadurga Temple, Bantwal

ಒಟ್ಟು ಐದು ಬಾರಿ ಇಲ್ಲಿ ತೀರ್ಥಸ್ನಾನ ಕೈಗೊಳ್ಳಬೇಕಾಗುತ್ತದೆ. ವನದುರ್ಗಾ ಕ್ಷೇತ್ರದ ಕೆರೆಯ ನೀರಿನ ಸ್ನಾನದಿಂದ ಸಕಲ ರೋಗ ನಿವಾರಣೆಯಾಗುತ್ತದೆ ಎಂದು ದೇವಳದ ಧರ್ಮದರ್ಶಿ ಗುರುದತ್ತ ಶೆಣೈ ತಿಳಿಸಿದರು.

2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಅವರು ನಂತರ ಕ್ಯಾನ್ಸರ್​ಗೆ ತುತ್ತಾಗಿದ್ದರು. ಈಗ ಗುಣಮುಖರಾಗಿದ್ದು, ರಣಜಿಯಲ್ಲಿ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X