ಬಂಟ್ವಾಳ, ಅ.15: ಕ್ರಿಕೆಟರ್ ಯುವರಾಜ್ ಸಿಂಗ್, ನಟಿ ಹಜೇಲ್ ಕೀಚ್ ಅವರು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಶ್ರೀ ವನದುರ್ಗ ತಥಾ ಜಲಾಂತರ್ಗತ ನಾಗಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬಂಟ್ವಾಳದ ಮೊಡಂಕಾಪುವಿನಲ್ಲಿರುವ ಶ್ರೀ ವನದುರ್ಗ ತಥಾ ಜಲಾಂತರ್ಗತ ನಾಗಸನ್ನಿಧಿಗೆ ಯುವರಾಜ್ ಸಿಂಗ್ ಹಾಗೂ ಅವರ ಕುಟುಂಬದ ಸದಸ್ಯರು, ಸಲ್ಮಾನ್ ಖಾನ್ ಅಭಿನಯದ ಬಾಡಿಗಾರ್ಡ್ ಚಿತ್ರದ ನಟಿ ಹಜೇಲ್ ಕೀಚ್ ಹಾಗೂ ಬಂಧು ಮಿತ್ರರು ಭೇಟಿ ನೀಡಿದರು. ["ಧೋನಿ ರಾವಣ ಇದ್ದಂತೆ, ಅವನು ನಿರ್ಗತಿಕನಾಗಲಿ"]
ಯುವರಾಜ್ ಅವರ ಸ್ನೇಹಿತೆ ಶಾರಿನಿ ಅವರು ಈ ಕ್ಷೇತ್ರಕ್ಕೆ ಈ ಹಿಂದೆ ಬಂದು ಫಲ ಕಂಡಿದ್ದಾರಂತೆ. ಹೀಗಾಗಿ ಯುವರಾಜ್ ಸಿಂಗ್ ಅವರ ಪರಿವಾರ ಶ್ರೀಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿದೆ.
2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಅವರು ನಂತರ ಕ್ಯಾನ್ಸರ್ಗೆ ತುತ್ತಾಗಿದ್ದರು. ಈಗ ಗುಣಮುಖರಾಗಿದ್ದು, ರಣಜಿಯಲ್ಲಿ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ.