Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌: ಭಾರತ ತಂಡದಲ್ಲಿ ಈತನೊಬ್ಬನೇ ವಿಕೆಟ್-ಟೇಕಿಂಗ್ ಆಯ್ಕೆ; ಆಕಾಶ್ ಚೋಪ್ರಾ

Yuzvendra Chahal Is The Only Wicket-taking Spinner Option In T20 World Cup Says Aakash Chopra

ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2022ರಲ್ಲಿ ರೋಹಿತ್ ಶರ್ಮಾ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಅಕ್ಟೋಬರ್‌ನಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.

ಸೋಮವಾರ (ಸೆಪ್ಟೆಂಬರ್ 12)ದಂದು ಬಿಸಿಸಿಐ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯು ಟಿ20 ವಿಶ್ವಕಪ್ 2022ಗಾಗಿ 15 ಸದಸ್ಯರ ತಂಡವನ್ನು ಮತ್ತು 4 ಸ್ಟ್ಯಾಂಡ್‌ಬೈ ಆಟಗಾರರನ್ನು ಘೋಷಿಸಿದೆ. ಭಾರತ ತಂಡದ ಆಯ್ಕೆಯ ಬಗ್ಗೆ ಹಲವು ಮಾಜಿ ಆಟಗಾರರು ಹಲವು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ.

ಟಿ20 ವಿಶ್ವಕಪ್ 2022ಗಾಗಿ ಭಾರತದ 15 ಸದಸ್ಯರ ತಂಡದಲ್ಲಿ ಯುಜ್ವೇಂದ್ರ ಚಹಾಲ್ ಮಾತ್ರ ಅಸಲಿ ವಿಕೆಟ್ ಟೇಕಿಂಗ್ ಸ್ಪಿನ್ ಆಯ್ಕೆಯಾಗಿದೆ ಎಂದು ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ನಂಬಿದ್ದಾರೆ. ಭಾರತವು ಐಸಿಸಿ ಟೂರ್ನಮೆಂಟ್‌ಗಾಗಿ ತನ್ನ 15 ಸದಸ್ಯರ ತಂಡದಲ್ಲಿ ಯುಜ್ವೇಂದ್ರ ಚಹಾಲ್, ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಮೂವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದೆ.

ಏಷ್ಯಾ ಕಪ್ 2022ರಲ್ಲಿ ಬೌಲಿಂಗ್‌ನಲ್ಲಿ ಪ್ರಭಾವಶಾಲಿಯಾಗಿರಲಿಲ್ಲ

ಏಷ್ಯಾ ಕಪ್ 2022ರಲ್ಲಿ ಬೌಲಿಂಗ್‌ನಲ್ಲಿ ಪ್ರಭಾವಶಾಲಿಯಾಗಿರಲಿಲ್ಲ

ಆದಾಗ್ಯೂ, ಯುಜ್ವೇಂದ್ರ ಚಹಾಲ್ ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ 2022ರಲ್ಲಿ ಬೌಲಿಂಗ್‌ನಲ್ಲಿ ಪ್ರಭಾವಶಾಲಿಯಾಗಿರಲಿಲ್ಲ. ಚಹಾಲ್ ಪ್ರಭಾವಿಯಾಗಲು ವಿಫಲರಾದರು ಮತ್ತು 7.93ರ ಎಕಾನಮಿ ದರದಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು.

ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಇತ್ತೀಚಿನ ದಿನಗಳಲ್ಲಿ ಅವರ ದಾಖಲೆಯನ್ನು ನೋಡಿದರೆ ರಕ್ಷಣಾತ್ಮಕ ಆಯ್ಕೆಗಳು ಎಂದು ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಹೇಳಿದರು.

ಯುಜ್ವೇಂದ್ರ ಚಹಾಲ್ ಮಾತ್ರ ಅಸಲಿ ವಿಕೆಟ್ ತೆಗೆದುಕೊಳ್ಳುವ ಆಯ್ಕೆ

ಯುಜ್ವೇಂದ್ರ ಚಹಾಲ್ ಮಾತ್ರ ಅಸಲಿ ವಿಕೆಟ್ ತೆಗೆದುಕೊಳ್ಳುವ ಆಯ್ಕೆ

"ನೀವು ಮೂವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದ್ದೀರಿ, ಆಫ್‌ಸ್ಪಿನ್ನರ್, ಲೆಗ್‌ಸ್ಪಿನ್ನರ್ ಮತ್ತು ಎಡಗೈ ಸ್ಪಿನ್ನರ್. ಆದ್ದರಿಂದ ನೀವು ವಿಭಿನ್ನ ಆಯ್ಕೆಗಳನ್ನು ಆರಿಸಿದ್ದೀರಿ, ಆದರೆ ಟಿ20 ಕ್ರಿಕೆಟ್‌ನಲ್ಲಿ ಯುಜ್ವೇಂದ್ರ ಚಹಾಲ್ ಮಾತ್ರ ಅಸಲಿ ವಿಕೆಟ್ ತೆಗೆದುಕೊಳ್ಳುವ ಆಯ್ಕೆಯಾಗಿದ್ದಾರೆ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

"ಇತರರು ರಕ್ಷಣಾತ್ಮಕ ಆಯ್ಕೆಗಳು. ಯಾವುದೇ ತಪ್ಪು ಮಾಡಬೇಡಿ, ಅದು ಸತ್ಯ. ನೀವು ಕಳೆದ 12 ತಿಂಗಳುಗಳ ಅಂಕಿ-ಅಂಶಗಳನ್ನು ನೋಡಬಹುದು, ಕಳೆದ ಬಾರಿಯ ಐಪಿಎಲ್ ಅಕ್ಷರ್ ಮತ್ತು ರವಿಚಂದ್ರನ್ ಅಶ್ವಿನ್ ಅವರಿಬ್ಬರನ್ನೂ ಒಳಗೊಂಡಿತ್ತು," ಆಕಾಶ್ ಚೋಪ್ರಾ ತಿಳಿಸಿದರು.

ಭಾರತ ತಂಡದ ಆಯ್ಕೆಗಾರರು ರವಿ ಬಿಷ್ಣೋಯ್ ಅಥವಾ ಕುಲದೀಪ್ ಯಾದವ್ ಅವರನ್ನು ಟಿ20 ವಿಶ್ವಕಪ್ ತಂಡದಲ್ಲಿ ಆಯ್ಕೆ ಮಾಡಬಹುದಿತ್ತು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ತಂಡದಲ್ಲಿರುವ ಮೂವರು ಸ್ಪಿನ್ನರ್‌ಗಳು

ತಂಡದಲ್ಲಿರುವ ಮೂವರು ಸ್ಪಿನ್ನರ್‌ಗಳು

"ರವಿ ಬಿಷ್ಣೋಯ್ ನಿಮಗೆ ಪ್ರಚೋದನಗೊಳಿಸುವ ಆಯ್ಕೆಯಾಗಿದ್ದರು. ನೀವು ಕುಲದೀಪ್ ಬಗ್ಗೆಯೂ ಯೋಚಿಸುತ್ತಿಲ್ಲ, ಇದು ಸ್ವಲ್ಪ ನಿರಾಶಾದಾಯಕವಾಗಿದೆ. ಆದರೆ ಅವರು ವಿಕೆಟ್ ತೆಗೆಯುವ ಆಯ್ಕೆಯಾಗಿದ್ದರು, ಆದರೆ ನೀವು ಅವರಿಬ್ಬರ ಬಗ್ಗೆ ಯೋಚಿಸಲಿಲ್ಲ," ಎಂದರು.

"ತಂಡದಲ್ಲಿರುವ ಮೂವರು ಸ್ಪಿನ್ನರ್‌ಗಳಲ್ಲಿ ಇಬ್ಬರನ್ನು ನೀವು ಆಡಿಸಲು ಸಾಧ್ಯವಾಗುತ್ತದೆಯೇ ಎಂಬುದು ತುಂಬಾ ಆಸಕ್ತಿದಾಯಕವಾಗಿದೆ. ನೀವು ಚಹಾಲ್ ಜೊತೆಗೆ ಅಕ್ಷರ್ ಪಟೇಲ್ ಅಥವಾ ರವಿಚಂದ್ರನ್ ಅಶ್ವಿನ್ ಅವರಲ್ಲಿ ಯಾರನ್ನು ಆಡಿಸಲು ಸಾಧ್ಯವಾಗುತ್ತದೆ ಎಂಬುದು ದೊಡ್ಡ ವಿಷಯವಾಗಿದೆ," ಎಂದು ಆಕಾಶ್ ಚೋಪ್ರಾ ಹೇಳಿದರು.

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಪ್ರಕಟ

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಪ್ರಕಟ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ಅರ್ಶ್‌ದೀಪ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು; ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್ ಮತ್ತು ದೀಪಕ್ ಚಹಾರ್.

Story first published: Wednesday, September 14, 2022, 10:59 [IST]
Other articles published on Sep 14, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+