
ಉತ್ತಮ ಬದಲಾವಣೆಯೇ ಅಯಿತು
ಲೊಬೆರಾ ಅವರು ಆಟಗಾರರನ್ನು ಆಗಾಗ ಬದಲಾಯಿಸುತ್ತಿರುವುದು ತಂಡದ ಮೇಲೆ ಉತ್ತಮ ಬದಲಾವಣೆಯೇ ಅಯಿತು. ಅಹಮದ್ ಜಹೊವ್, ಹ್ಯೂಗೊ ಬೌಮೌಸ್, ರೌಲಿನ್ ಬೋರ್ಗಸ್ ಮತ್ತು ಆಡಂ ಲೇ ಫಾಂಡ್ರೆ ಡೆಫೆನ್ಸ್ ವಿಭಾಗದಲ್ಲಿ ಉತ್ತಮವಾಗಿ ಕಾರ್ಯವನಿರ್ವಹಿಸಿದ್ದು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಗೋಲ್ ಕೀಪರ್ ಅಮ್ರಿಂದರ್ ಸಿಂಗ್ ಕೂಡ ತಂಡದ ಯಶಸ್ಸಿಗೆ ಕಾರಣರಾಗಿದ್ದಾರೆ. ಮುಂಬಯ ಸಿಟಿ ಇದುವರೆಗೂ ಎದುರಾಳಿ ತಂಡಕ್ಕೆ ಕೇವಲ ಒಂದು ಗೋಲು ಗಳಿಸಲು ಅವಕಾಶ ನೀಡಿದ್ದು, ಮೂರು ಕ್ಲೀನ್ ಶೀಟ್ ಸಾಧನೆ ಮಾಡಿದೆ.

ಗಮನಿಸಿದರೆ ಅದು ತಪ್ಪಾಗುತ್ತದೆ
"ಆಟದ ಕಡೆಗೆನೇ ನಮ್ಮ ಏಕಾಗ್ರತೆ ಮುಂದುವರಿಯಲಿದೆ," ಎಂದು ಲೊಬೆರಾ ಹೇಳಿದ್ದು, "ನಾವು ಈ ಹಂತದಲ್ಲಿ ಅಂಕಪಟ್ಟಿಯನ್ನು ಗಮನಿಸಿದರೆ ಅದು ತಪ್ಪಾಗುತ್ತದೆ, ನಾವು ಮತ್ತಷ್ಟು ಪಂದ್ಯಗಳನ್ನು ಗೆಲ್ಲಬೇಕು. ನಾವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದೇವೆ, ಈ ಹಂತದಲ್ಲಿ ಅದು ಖುಷಿಕೊಡುತ್ತದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮುಂದಿನ ಪಂದ್ಯಗಳನ್ನು ಗೆಲ್ಲುವ ಕಡೆಗೆ ಗಮನಹರಿಸುವುದು, ಹೊರತಾಗಿ ನಾವು ಎಲ್ಲಿ ನಿಲ್ಲಬೇಕು ಎಂಬುದರ ಬಗ್ಗೆಯಲ್ಲ, ಪಂದ್ಯದ ನಂತರ ಪಂದ್ಯವನ್ನು ಆಡುತ್ತ ಸಾಗಬೇಕು. ಕೊನೆಯಲ್ಲಿ ಅಂಕಪಟ್ಟಿ ನೋಡಬೇಕು," ಎಂದರು.

ಕ್ಲಿಷ್ಟವಾದ ಸ್ಥಿತಿ ತಲುಪಿದೆ
ಇದೇ ವೇಳೆ ಚೆನ್ನೈಯಿನ್ ತಂಡ ಕ್ಲಿಷ್ಟವಾದ ಸ್ಥಿತಿ ತಲುಪಿದೆ. ಎರಡು ಬಾರಿ ಚಾಂಪಿಯನ್ ತಂಡ ಮೊದಲ ಪಂದ್ಯದಲ್ಲಿ 2-1 ಗೋಲಿನಿಂದ ಜಯ ಗಳಿಸಿತ್ತು, ಆದರೆ ನಂತರದ ಎರಡು ಪಂದ್ಯಗಳಲ್ಲಿ ಜಯ ಗಳಿಸುವಲ್ಲಿ ವಿಫಲವಾಗಿತ್ತು, ಮಾತ್ರವಲ್ಲ ಗೋಲನ್ನೂ ಗಳಿಸಿರಲಿಲ್ಲ. ಸಾಬಾ ಲಾಜ್ಲೋ ಪಡೆ, ಅಟ್ಯಾಕ್ ವಿಭಾಗದಲ್ಲಿ ಉತ್ತಮ ಆಟಗಾರರಿಂದ ಕೂಡಿದ್ದು, ಅವಕಾಶಗಳನ್ನು ಗೋಲಾಗಿಸುವಲ್ಲಿ ವಿಫಲವಾಗಿದೆ. ಇದುವರೆಗೂ ಓಪನ್ ಫೀಲ್ಡ್ ನಲ್ಲಿ ಎದುರಾಳಿ ತಂಡಕ್ಕೆ ಗೋಲು ನೀಡದಿರುವ ಮುಂಬೈ ವಿರುದ್ಧ ಚೆನ್ನೈಯಿನ್ ಗೋಲು ಗಳಿಸುವ ಗುರಿ ಹೊಂದಿದೆ. ಗಾಯಗೊಂಡಿರುವ ಅನಿರುದ್ಧ್ ಥಾಪಾ ಅವರು ನಾಳೆಯ ಪಂದ್ಯದಿಂದ ವಂಚಿತರಾಗುತ್ತಿದ್ದು, ರಫಾಯಲ್ ಕ್ರಿವೆಲ್ಲೆರೋ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ.


Click it and Unblock the Notifications














