
ಬೆಂಗಾಲ್ ತಂಡದ ಅದೃಷ್ಟವೇ ಬದಲಾಯಿತು
ಎನೋ ಬಾಖರೆ ಅವರ ಆಗಮನದಿಂದ ಈಸ್ಟ್ ಬೆಂಗಾಲ್ ತಂಡದ ಅದೃಷ್ಟವೇ ಬದಲಾಯಿತು. ತಂಡದ ಡಿಫೆನ್ಸ್ ವಿಭಾಗದ ಸಮಸ್ಯೆಯೇ ಇಲ್ಲವೆನ್ನುವಷ್ಟು ತಂಡ ಸುಧಾರಣೆ ಕಂಡಿತು. ತಂಡ 13 ಗೋಲುಗಳನ್ನು ನೀಡಿದ್ದು ಬೇರೆ ಯಾವುದೇ ತಂಡ ಈ ರೀತಿಯಲ್ಲಿ ಗೋಲು ನೀಡಿರಲಿಲ್ಲ. ಇದರಿಂದಾಗಿ ಗೋಲ್ ಕೀಪರ್ ದೇಬಜಿತ್ ಮಜುಂದಾರ್ ಹೆಚ್ಚು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ.
ದ್ವಿತಿಯಾರ್ಧದಲ್ಲಿ ಬೆಂಗಾಲ್ ತಂಡ ಗೋಲನ್ನು ನಿಯಂತ್ರಿಸುವಲ್ಲಿ ನಿಸ್ಸೀಮವಾಗಿದ್ದರೆ ಸರ್ಗಿಯೊ ಲೊಬೆರಾ ಅವರ ಮುಂಬೈ ತಂಡ ಪ್ರಥಮಾರ್ಧದಲ್ಲಿ ಗೋಲು ಗಳಿಸುವ ತಂಡವಾಗಿದೆ. ಮುಂಬೈ ತಂಡ ಪ್ರಥಮಾರ್ಧದಲ್ಲಿ ಗಳಿಸಿರುವಷ್ಟು ಗೋಲುಗಳನ್ನು ಬೇರೆ ಯಾವುದೇ ತಂಡ ಗಳಿಸಿರಲಿಲ್ಲ. ಮುಂಬೈ ಕೂಡ 10 ಪಂದ್ಯಗಳಲ್ಲಿ ಸೋಲು ಕಾಣದೆ ಮುನ್ನಡೆದಿದೆ. ಇನ್ನು ಮೂರು ಪಂದ್ಯಗಳಲ್ಲಿ ಸೋಲು ಕಾಣದಿದ್ದರೆ ಮುಂಬೈ ತಂಡ ಐಎಸ್ ಎಲ್ ಇಲಿಹಾಸದಲ್ಲೇ ಹೊಸ ದಾಖಲೆಯನ್ನು ಬರೆಯಲಿದೆ. ಗೋವಾ ತಂಡ ಇದುವರೆಗೂ 12 ಬಾರಿ ಅಜೇಯವಾಗಿದ್ದು ದಾಖಲೆಯಾಗಿತ್ತು.

ಗೆಲ್ಲುವುದು ಅತ್ಯಂತ ಪ್ರಮುಖವಾದುದಾಗಿದೆ
"ಟ್ರೋಫಿಯನ್ನು ಗೆಲ್ಲುವುದು ಅತ್ಯಂತ ಪ್ರಮುಖವಾದುದಾಗಿದೆ," ಎಂದು ಲೊಬೆರಾ ಹೇಳಿದ್ದಾರೆ, "ಅದಕ್ಕಾಗಿ ಹಲವಾರು ಅಂಶಗಳಲ್ಲಿ ನಾವು ಎಚ್ಚರಿಕೆ ವಹಿಸಬೇಕಾಗಿದೆ. ತೋದರೆಗಳನ್ನೂ ಎದುರಿಬೇಕಾಗುತ್ತದೆ. ನಮ್ಮಲ್ಲಿ ಈಗ ಸಾಕಷ್ಟು ಗೋಲುಗಳನ್ನು ಗಳಿಸಿದ್ದಾರೆ, ಸಾಕಷ್ಟು ಕ್ಲೀನ್ ಶೀಟ್ ಗಳಿವೆ. ಚೆಂಡನ್ನು ಹೆಚ್ಚು ಕಾಲ ನಿಯಂತ್ರಿಸುವಲ್ಲಿಯೂ ನಾವು ಅಗ್ರಸ್ಥಾನದಲ್ಲಿದ್ದೇವೆ, ಇದು ಟ್ರೋಫಿ ಗೆಲ್ಲಲು ಬೇಕಾಗಿರುವ ಮುಖ್ಯ ಅರ್ಹತೆ. ಪ್ರಶಸ್ತಿ ಗೆಲ್ಲುವುದಕ್ಕಾಗಿ ನಾನು ಈ ಎಲ್ಲ ದಾಖಲೆಗಳನ್ನು ಪರಿಗಣಿಸಬೇಕಾಗುತ್ತದೆ, ಏಕೆಂದರೆ ಇದು ಅತ್ಯಂತ ಉತ್ತಮ ದಾಖಲೆಯಾಗಿದೆ," ಎಂದು ಹೇಳಿದರು.

ಸವಾಲುಗಳ ಬಗ್ಗೆ ಹೆಚ್ಚಾಗಿ ಯೋಚಿಸಿಲ್ಲ
ಲೊಬೆರಾ ಅವರಿಗೆ ಶುಕ್ರವಾರ ಎದುರಾಗುವ ಸವಾಲುಗಳ ಬಗ್ಗೆ ಹೆಚ್ಚಾಗಿ ಯೋಚಿಸಿಲ್ಲ. " ಹಿಂದಿನ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಆಡಿದರೆ ನಾವು ದೊಡ್ಡ ತಪ್ಪ ಮಾಡಿದಂತಾಆಗುತ್ತದೆ. ಈಗ ಎದುರಾಳಿ ತಂಡ ಸಂಪೂರ್ಣ ಭಿನ್ನವಾಗಿದೆ, ಅವರು ವೃತ್ತಿಪರವಾಗಿ ಸಾಕಷ್ಟು ಬದಲಾಗಿದ್ದಾರೆ," ಎಂದರು.


Click it and Unblock the Notifications














