ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಬದ್ಧ ಎದುರಾಳಿಗಳಿಗಳಾದ ಚೆನ್ನೈ, ಕೇರಳಕ್ಕೆ ಗೆದ್ದೇ ಗೆಲ್ಲುವ ಛಲ

By Isl Media
Lots at stake as Chennaiyin, Kerala Blasters look to iron out final minute blushes

ಚೆನ್ನೈ ಡಿಸೆಂಬರ್ 20: ಚೆನ್ನೈಯಿನ್ ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ಎಫ್ ಸಿ ತಂಡಗಳಲ್ಲಿ ತಾವಿಬ್ಬರು ಬದ್ಧ ಎದುರಾಳಿಗಳೆಂಬ ನಿಲುವು ಮನದಲ್ಲಿದೆ, ಆದರೆ ಈಗ ಸಮಯದ ಕೊರತೆ ಇತ್ತಂಡಗಳಲ್ಲಿ ಕಾಣುತ್ತಿದೆ. ಇತ್ತಂಡಗಳು ಇದುವರೆಗೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿವೆ. ಆದರೆ ಮತ್ತೊಮ್ಮೆ ತಮ್ಮ ಪ್ರಭುತ್ವವನ್ನು ಸಾಧಿಸಿ, ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜಯ ಗಳಿಸುವ ಗುರಿ ಹೊಂದಿವೆ.

ಎರಡೂ ತಂಡಗಳು ಅಂಕ ಪಟ್ಟಿಯಲ್ಲಿ ವಿರುದ್ಧ ದಿಕ್ಕಿನಲ್ಲಿದ್ದು, ಆರು ಅಂಕಗಳನ್ನು ಗಳಿಸಿರುವ ಚೆನ್ನೈಯಿನ್ ತಂಡ ಒಂಬತ್ತನೇ ಸ್ಥಾನದಲ್ಲಿದ್ದರೆ, ಏಳು ಅಂಕಗಳನ್ನು ಗಳಿಸಿರುವ ಕೇರಳ ಒಂದು ಸ್ಥಾನ ಮೇಲಿದೆ.

''ಉತ್ತಮ ತಂಡವೊಂದರ ವಿರುದ್ಧ ನಡೆಯಲಿರುವ ಮನೆಯಂಗಣದ ಪದ್ಯ ಸಾಕಷ್ಟು ಕುತೂಹಲ ಎನಿಸಿದೆ. ಆಟಗಾರರು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿದ್ದಾರೆ. ನಮ್ಮದು ಉತ್ತಮ ಗುಣಮಟ್ಟದ ತಂಡ, ಕೇರಳ ಕೂಡ ಉತ್ತಮ ತಂಡ. ಅವರದ್ದು ಉತ್ತಮ ರೀತಿಯಲ್ಲಿ ಸಜ್ಜಾಗಿರುವ ತಂಡವಾಗಿ ಕಾಣುತ್ತಿದೆ. ನಾವು ಅವರಿಗೆ ಗೌರವ ನೀಡುತ್ತೇವೆ, ಆದರೆ ಯಾವುದೇ ತಂಡಕ್ಕೆ ಹೆದರುವುದಿಲ್ಲ,'' ಎಂದು ಚೆನ್ನೈ ತಂಡದ ಕೋಚ್ ಓವನ್ ಕೊಯ್ಲ್ ಹೇಳಿದ್ದಾರೆ.

Lots at stake as Chennaiyin, Kerala Blasters look to iron out final minute blushes

ಚೆನ್ನೈಯಿನ್ ತಂಡ ದಾಳಿ ವಿಭಾಗದಲ್ಲಿ ದುರ್ಬಲವಾಗಿದ್ದು, ಕಳಪೆ ದಾಖಲೆಯನ್ನು ಹೊಂದಿದೆ. ನಿಧಾನ ಗತಿಯ ಆರಂಭ ಕಾಣುವ ಈ ತಂಡ ಆಡಿರುವ ಏಳು ಪಂದ್ಯಗಳ ಪ್ರಥಮಾರ್ಧದಲ್ಲಿ ಗಳಿಸಿದ್ದು ಕೇವಲ ಒಂದು ಗೋಲು. ಅದೇ ರೀತಿಯಲ್ಲಿ ಹಲವು ಅವಕಾಶಗಳನ್ನು ಕೈ ಚೆಲ್ಲಿತ್ತು. ಗೋಲು ಗಳಿಸಲು ತಂಡಕ್ಕೆ ಈಗ ಉತ್ತಮ ರೀತಿಯ ಬೆಂಬಲ ಬೇಕಾಗಿದೆ. ತಂಡ ಗಳಿಸಿರುವ ಐದು ಗೋಲುಗಳಲ್ಲಿ ನಾಲ್ಕು ಗೋಲುಗಳನ್ನು ಲಿಥುವೇನಿಯಾದ ನೆರಿಜುಸ್ ವಾಲ್ಸ್ಕಿಸ್ ಗಳಿಸಿದ್ದಾರೆ.

ಲೀಗ್ ನಿಂದ ಬೇಗನೇ ನಿರ್ಗಮಿಸಿದರೆ ಮಾಜಿ ಚಾಂಪಿಯನ್ ತಂಡಕ್ಕೆ ಆಘಾತವಾಗುವುದು ಸಹಜ. ಕಳೆದ ಮೂರು ಪಂದ್ಯಗಳಲ್ಲಿ ಕೊನೆಯ ಕ್ಷಣದಲ್ಲಿ ಗೋಲು ನೀಡಿದ ತಂಡ ಜಯದಿಂದ ವಂಚಿತವಾಗಿತ್ತು. ಜೆಮ್ಶೆಡ್ಪುರ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ವನಮಲಸ್ವಾಮ ಕೊನೆಯ ಕ್ಷಣದಲ್ಲಿ ಗೋಲು ಗಳಿಸಿದ ಕಾರಣ ಪಂದ್ಯ ಡ್ರಾ ಗೊಂಡಿತ್ತು.

ಕೇರಳ ತಂಡಕ್ಕೂ ಈ ಋತು ನೆನಪಿನಲ್ಲಿ ಇಟ್ಟುಕೊಳ್ಳುವಂತದ್ದಲ್ಲ. ತಂಡ ಆಡಿರುವ ಏಳು ಪಂದ್ಯಗಳಲ್ಲಿ ಜಯ ಕಂಡಿಲ್ಲ. ಕೂಡಲೇ ಅಂಕಪಟ್ಟಿಯಲ್ಲಿ ತಂಡ ಮೇಲಕ್ಕೇರಬೇಕಿದೆ.
''ನಾವು ಈಗ ಆಡುತ್ತಿರುವ ಫುಟ್ಬಾಲ್ ಮಾದರಿ ಭಿನ್ನವಾದುದು. ನಾವು ಪ್ರತಿಯೊಂದು ಪಂದ್ಯದಲ್ಲಿಯೂ ಪ್ರಭುತ್ವ ಸಾಧಿಸಿದ್ದೆವು. ಆದರೆ ಸಾಕಷ್ಟು ತಪ್ಪುಗಳಿವೆ. ಅದು ಏಕಾಗೃತೆಯ ಕೊರತೆಯಿಂದ ಆಗಿದೆ. ಗಾಯದ ಸಮಸ್ಯೆಗಳ ನಡುವೆಯೂ ನಮ್ಮ ಆಟಗಾರರು ಉತ್ತಮ ರೀತಿಯಲ್ಲಿ ಆಡಿದ್ದಾರೆ. ಬೆಂಗಳೂರು, ಗೋವಾ ಇತ್ಯಾದಿ ತಂಡಗಳ ವಿರುದ್ಧ ನಾವು ಮೇಲುಗೈ ಸಾಧಿಸಿದ್ದೆವು. ನಾವು ವೈಯಕ್ತಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹೈರಿಸಿದ್ದೇವೆ, ನಾವು ಇದರಿಂದ ಸುಧಾರಣೆ ಕಾಣುತ್ತೇವೆ ಎಂಬ ನಂಬಿಕೆ ಇದೆ,'' ಎಂದು ಕೇರಳ ಬ್ಲಾಸ್ಟರ್ಸ್ ತಂಡದ ಸಹಾಯಕ ಕೋಚ್ ಇಷ್ಫಾಕ್ ಅಹಮದ್ ಹೇಳಿದ್ದಾರೆ.

ಕಳೆದ ಮೂರು ಪಂದ್ಯಗಳಲ್ಲಿ ರಫಾಯೆಲ್ ಮೆಸ್ಸಿ ಬೌಲಿ ಆಟದಲ್ಲಿ ಲಯ ಕಂಡುಕೊಂಡಿದ್ದು, ಆಡಿರುವ ಮೂರು ಪಂದ್ಯಗಳಿಂದ ನಾಲ್ಕು ಗೋಲು ಗಳಿಸಿದ್ದಾರೆ. ಕೇರಳದ ಅಟ್ಟ್ಯಾಕ್ ವಿಭಾಗ ಉತ್ತಮಗೊಂಡಿದ್ದು, ಇಲ್ಲಿಂದ ತಂಡದ ಅದೃಷ್ಟ ಸರಿಯಾದ ದಾರಿಯಲ್ಲಿ ಸಾಗಲಿದೆ ಎಂದು ಕೋಚ್ ಎಲ್ಕೋ ಶೆಟ್ಟೋರಿ ಊಹಿಸಿದ್ದಾರೆ. ಬಾರ್ತಲೋಮಿಯೋ ಓಗ್ಬ್ಯಾಚೆ ಅವರು ತಂಡಕ್ಕೆ ಮರಳುವ ಸಾಧ್ಯತೆ ಇದ್ದು, ಇದರಿಂದ ತಂಡದ ಶಕ್ತಿ ಹೆಚ್ಚಲಿದೆ. ಮಿಡ್ ಫೀಲ್ಡ್ ನಲ್ಲಿ ಮಾರಿಯೋ ಆರ್ಕ್ಯೂಸ್ ಮತ್ತು ಜಕ್ಸೋನ್ ಸಿಂಗ್ ಉತ್ತಮ ರೀತಿಯಲ್ಲಿ ಬೆಂಬಲ ನೀಡುತ್ತಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಚೆನ್ನೈಯಿನ್ ತಂಡದ ನೂತನ ಕೋಚ್ ಕೊಯ್ಲ್ ಅವರಿಗೆ ಮನೆಯಂಗಣದಲ್ಲಿ ಮೊದಲ ಪಂದ್ಯ, ಇದು ತಂಡದ ಆಟಗಾರರಲ್ಲಿ ಹೊಸ ಉಲ್ಲಾಸವನ್ನು ಉಂಟುಮಾಡಿದೆ.

Story first published: Thursday, December 19, 2019, 22:36 [IST]
Other articles published on Dec 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X