ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ. ಅಕ್ಟೋಬರ್ 5 ಗುರುವಾರದಂದು ಭಾರತದ ಮಹಿಳಾ ಕಾಂಪೌಡ್ ಆರ್ಚರಿ ತಂಡ ಚೈನೀಸ್ ತೈಪೆ ತಂಡವನ್ನು ಮಣಿಸಿದ್ದು ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಫೈನಲ್ ಸೆಣೆಸಾಟದಲ್ಲಿ ಭಾರತ ತಂಡ ಎದುರಾಳಿ ವಿರುದ್ಧ 230-229 ಅಂತರದಿಂದ ಗೆಲುವು ಸಾಧಿಸಿದ್ದು ಭಾರತದ ಆರ್ಚರ್ಗಳಾದ ಜ್ಯೋತಿ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರನ್ನು ಒಳಗೊಂಡ ತಂಡ ಈ ಸಾಧನೆ ಮಾಡಿದೆ.
ನಿರ್ಣಾಯಕ ಹಂತದ ಆರಂಭದಲ್ಲಿ ಎರಡು ತಂಡಗಳ ಅಂಕಗಳು ಸಮವಾಗಿದ್ದವು. ಭಾರತಕ್ಕೆ ಮೊದಲ ಗುರಿಯ ಅವಕಾಶವಿತ್ತು ಹೀಗಾಗಿ 230 ಅಂಕಗಳನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಚೈನೀಸ್ ತೈಪೆಗೆ ತಮ್ಮ ಅಂತಿಮ ಮೂರು ಶಾಟ್ಗಳಲ್ಲಿ ಸಂಪೂರ್ಣ 30 ಅಂಕಗಳ ಅಗತ್ಯವಿತ್ತು. ಆರೆ 29 ಅಂಕಗಳನ್ನು ಮಾತ್ರವೇ ಅದು ಯಶಸ್ವಿಯಾಯಿತು.

ಭಾರತ ಅದ್ಭುತವಾದ ಆರಂಭವನ್ನು ಪಡೆದುಕೊಂಡಿತ್ತು. ಮೊದಲ ಮೂರು ಹೊಡೆತಗಳ ಬಳಿಕ 28-27 ಅಂತರದಿಂದ ಭಾರತ ಮುನ್ನಡೆ ಗಳಿಸಿತ್ತು. ಆದರೆ ನಂತರ ಚೈನೀಸ್ ತೈಪೆ ಕಮ್ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಸೆಟ್ ಹೊಡೆತಗಳ ನಂತರ 56-54 ಮುನ್ನಡೆ ಸಾಧಿಸಿತ್ತು ಚೈನೀಸ್ ತೈಪೆ.
ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಎರಡನೇ ಸೆಟ್ ಶಾಟ್ಗಳಲ್ಲಿ ಒಂಬತ್ತು-ಪಾಯಿಂಟರ್ಗಳನ್ನು ಮಾತ್ರ ಗಳಿಸಿದರು. ಇದು ತೈಪೆ ತಮ್ಮ ಮುನ್ನಡೆಯನ್ನು ವಿಸ್ತರಿಸಲು ಅವಕಾಶ ಮಾಡಿಕೊಟ್ಟಿತು. ತೈಪೆಯ ಆರ್ಚರ್ ಏಳು-ಪಾಯಿಂಟ್ ಹೊಡೆತ ಮೊದಲಾರ್ಧದ ಹಂತದಲ್ಲಿ ಭಾರತವನ್ನು 112-111 ರಿಂದ ಮುನ್ನಡೆಸಲು ಅವಕಾಶ ಮಾಡಿಕೊಟ್ಟಿತು.
ಮೂರನೇ ಸೆಟ್ನಲ್ಲಿ ತೈಪೆ ಆರು 10-ಪಾಯಿಂಟರ್ಗಳನ್ನು ಗಳಿಸಿ ಅಂತರವನ್ನು ಕಡಿಮೆ ಮಾಡಿಕೊಂಡಿತು. ಭಾರತವು ಕೇವಲ ಐದು 10 ಅಂಕಗಳನ್ನು ಮಾತ್ರವೇ ಗಳಿಸಿತ್ತು ಹಾಗೂ ಒಂದು ಒಂಬತ್ತು ಅಂಕಗಳನ್ನು ಪಡೆದುಕೊಂಡಿತ್ತು. ಇದರ ಪರಿಣಾಮವಾಗಿ 171 ಅಂಕಗಳ ಸಮಬಲದ ಸ್ಕೋರ್ ಅಂತಿಮ ಅಂತ್ಯಕ್ಕೆ ಹೋಯಿತು. ನಿರ್ಣಾಯಕ ಕದನದಲ್ಲಿ ಭಾರತದ ಆರ್ಚರ್ಗಳು ಭರ್ಜರಿ ಹೋರಾಟ ಪ್ರದರ್ಶಿಸಿ ಚಿನ್ನದ ಪದಕ ಗೆಲ್ಲಲು ಕಾರಣವಾದರು.