ಭಾರತೀಯರಿಂದ ಶುಭಾಶಯ
ಫೈನಲ್ನಲ್ಲಿ ರೋಮಾಂಚಕಾರಿ ಓಟದ ಸ್ಪರ್ಧೆಯಲ್ಲಿ ವಿಶ್ವದ ಓಟಗಾರ್ತಿಯರನ್ನ ಸರಿಗಟ್ಟಿ ಚಿನ್ನಕ್ಕೆ ಕೊರಳೊಡ್ಡಿದ್ದ ದಾಸ್ಗೆ ಭಾರತೀಯರಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ. ಭಾನುವಾರ, ಭಾರತದ ಪ್ರಧಾನಿ ಮೋದಿ ಮತ್ತು ಸಚಿನ್ ತೆಂಡೂಲ್ಕರ್ ಕೂಡ ಟ್ವಿಟರ್ ಮೂಲಕ ದಾಸ್ಳ ಬೆನ್ನು ತಟ್ಟಿದ್ದಾರೆ (400 ಮೀಟರ್ ನಲ್ಲಿ ಬಂಗಾರ ಗೆದ್ದ ಹಿಮಾಳ ರೋಮಾಂಚಕಾರಿ ಓಟದ ವಿಡಿಯೋ ಮೇಲಿದೆ).

ಭಾರತಕ್ಕೆ ಹೆಮ್ಮೆ
'ಕಳೆದ ಕೆಲವು ದಿನಗಳಿಂದ ಅಸಾಧಾರಣ ಸಾಧನೆ ತೋರುತ್ತಿರುವ ಹಿಮಾ ದಾಸ್ಳ ಬಗ್ಗೆ ಭಾರತ ಹೆಮ್ಮೆ ಪಡುತ್ತಿದೆ. ಬೇರೆ ಬೇರೆ ಕ್ರೀಡಾಟೂಟಗಳಲ್ಲಿ ಭಾರತಕ್ಕೆ ಐದು ಬಂಗಾರದ ಪದಕಗಳನ್ನು ತಂದಿರುವ ದಾಸ್ಳ ಸಾಧನೆ ಪ್ರತಿಯೊಬ್ಬರಿಗೂ ಹರ್ಷ ತಂದಿದೆ. ಮುಂದಿನ ಸ್ಪರ್ಧೆಗಳಿಗೂ ಹಿಮಾಳಿಗೆ ಶುಭಾಶಯಗಳು,' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಯುವ ಜನತೆಗೆ ಸ್ಫೂರ್ತಿ ನೀನು
'ಕಳೆದ 19 ದಿನಗಳಲ್ಲಿ ಯುರೋಪಿನಂಗಳದಲ್ಲಿ ನೀನು ಓಡಿದ ಪರಿ ಮೆಚ್ಚುಗೆಯಾಗಿದೆ. ಗೆಲ್ಲಬೇಕೆಂಬ ನಿನ್ನ ಹಸಿವು, ಹಂಬಲ ಯುವ ಜನತೆಗೆ ಸ್ಫೂರ್ತಿಯಾಗಿದೆ. ಐದು ಬಂಗಾರದ ಪದಕಗಳಿಗಾಗಿ ಶುಭಾಶಯಗಳು. ಭವಿಷ್ಯಕ್ಕೂ ಶುಭ ಹಾರೈಕೆಗಳು,' ಎಂದು ತೆಂಡೂಲ್ಕರ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಗೋಲ್ಡನ್ ಗರ್ಲ್ ಎಂದ ಪಂತ್
ಹಿಮಾಳಿಗೆ ಶುಭಾಶಯ ಕೋರಿ ಬಂದಿರುವ ಸಾವಿರಾರು ಟ್ವೀಟ್ಗಳ ಮಧ್ಯೆ ಟೀಮ್ ಇಂಡಿಯಾ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರ ಟ್ವೀಟ್ ಹೆಚ್ಚು ಗಮನ ಸೆಳೆಯುವಂತಿದೆ. 'ಹಿಮಾ ದಾಸ್, ನೀನು ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದೀಯ. ಭಾರತದ ಚಿನ್ನದ ಹುಡುಗಿ ನಿನಗೆ ನಮನಗಳು,' ಎಂದು ಪಂತ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications












