ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ಭಾರತೀಯ ಅಥ್ಲೀಟ್ಗಳಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ದೆಹಲಿಯ ಯೂತ್ ಅಫೇರ್ಸ್ ಆ್ಯಂಡ್ ಸ್ಪೋರ್ಟ್ಸ್ ಮಿನಿಸ್ಟರ್ ನಿತೀಶ್ ಪ್ರಾಮಾಣಿಕ್ ಅವರು ಹುರಿದುಂಬಿಸಲಿದ್ದಾರೆ.
ಟೀಮ್ ಇಂಡಿಯಾ ಹೆಸರಿಗೆ ಮತ್ತೊಂದು ವಿಶ್ವದಾಖಲೆ ಸೇರ್ಪಡೆ!
ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಸ್ಟೇಡಿಯಂನಿಂದಲೇ ಅನುರಾಗ್ ಸಿಂಗ್ ಠಾಕೂರ್ ಮತ್ತು ನಿತೀಶ್ ಪ್ರಮಾಣಿಕ್ ಭಾರತೀಯ ತಂಡಕ್ಕೆ ಚಿಯರ್ ಮಾಡಲಿದ್ದಾರೆ. ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ಇದು ಭಾರತೀಯ ಕ್ರೀಡಾಪಟುಗಳಿಗೆ ಇನ್ನಷ್ಟು ಸ್ಫೂರ್ತಿ ನೀಡಲಿದೆ.
#Cheer4India ಪ್ರಚಾರದ ಭಾಗವಾಗಿ ಭಾರತೀಯ ಎಲ್ಲಾ ಕ್ರೀಡಾ ಸಚಿವರು, ಮಾಜಿ ಅಥ್ಲೀಟ್ಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹರ್ಯಾಣದ ಕ್ರೀಡಾ ಸಚಿವ ಮನ್ದೀಪ್ ಸಿಂಗ್, ಮಧ್ಯ ಪ್ರದೇಶದ ಕ್ರೀಡಾಸಚಿವ ಯಶೋಧರ ರಾಜೆ ಸಿಂಧಿಯಾ, ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿ ಚಂದ್ ಕೂಡ ಭಾರತೀಯ ಕ್ರೀಡಾಪಟುಗಳನ್ನು ಹುರಿದುಂಬಿಸಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಿಜೇತರಿಗೆ ಭರ್ಜರಿ ಹಣ ಘೋಷಣೆ
ಈ ಬಾರಿ ಭಾರತದಿಂದ ಒಟ್ಟು 127 ಅಥ್ಲೀಟ್ಗಳಿರುವ ತಂಡ ಟೋಕಿಯೋ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುತ್ತಿದೆ. ಇದರಲ್ಲಿ 56 ಮಂದಿ ಮಹಿಳಾ ಅಥ್ಲೀಟ್ಗಳಿರುವುದು ವಿಶೇಷ. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ.