
ಮುಂಚೂಣಿಯಲ್ಲಿ ವಿರೇಂದ್ರ ಸೆಹ್ವಾಗ್
ಭಾರತ ತಂಡದ ಕೋಚ್ ಹುದ್ದೆಗೆ ಹಲವರು ಅರ್ಜಿ ಸಲ್ಲಿಸಿದ್ದು ಈ ಈ ಪೈಕಿ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರು ಮುಂಚೂಣಿಯಲ್ಲಿದ್ದಾರೆ. ಆದರೆ, ಇದೀಗ ಕುಂಬ್ಳೆ ಅವರನ್ನು ಮುಂದುವರೆಸಲು ನಿರ್ಧರಿಸಲಾಗಿದ್ದು, ಮುಂದೆ ಕುಂಬ್ಳೆ ಅವರನ್ನು ಕೈಬಿಟ್ಟ ಬಳಿಕ ಕೋಚ್ ಹುದ್ದೆ ಸೆಹ್ವಾಗ್ ಅವರಿಗೆ ಒಲಿದರೆ ಆಶ್ಚರ್ಯ ಪಡಬೇಕಿಲ್ಲ.

ಮತ್ತೆ ಅರ್ಜಿ ಹಾಕಿದ ಕುಂಬ್ಳೆ
ಹಾಲಿ ಕೋಚ್ ಹುದ್ದೆಯ ಅವಧಿ ಮುಕ್ತಾಯಗೊಂಡಿದ್ದರಿಂದ ಹೋಸ ಕೋಚ್ ಆಯ್ಕೆಗೆ ಬಿಸಿಸಿಐ ಅರ್ಜಿ ಕರೆದಿದೆ. ಈ ಹಿನ್ನಲೆಯಲ್ಲಿ ಮತ್ತೆ ಎರಡನೇ ಬಾರಿಗೂ ಕೋಚ್ ಹುದ್ದೆ ನಿಭಾಯಿಸಲು ಸಿದ್ಧರಾಗಿರುವ ಕುಂಬ್ಳೆ ಅವರು ಅರ್ಜಿ ಸಲ್ಲಿಸಿದ್ದಾರೆ.

ಕೋಚ್ ಹುದ್ದೆಗೆ ಅರ್ಜಿ ಹಾಕಿದ ಮತ್ತೀತರರು
ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆ ನಿಭಾಯಿಸಲು ಮಾಜಿ ಕ್ರಿಕೆಟಿಗರಾದ ಲಾಲ್ ಚಂದ್ ರಜಪೂತ್, ಕರ್ನಾಟಕದ ದೊಡ್ಡ ಗಣೇಶ್, ಟಾಮ್ ಮೂಡಿ ಹಾಗೂ ರಿಚರ್ಡ್ ಪೈಬಸ್ ಅವರೂ ಅರ್ಜಿ ಸಲ್ಲಿಸಿದ್ದಾರೆ.

‘ಜೂನ್ 26ರ ವರೆಗೆ ಹೊಸ ಕೋಚ್ ಬೇಡ
‘ಜೂನ್ 26ರಂದು ಬಿಸಿಸಿಐ ವಾರ್ಷಿಕ ಮಹಾಸಭೆ ನಿಗದಿಯಾಗಿದ್ದು ಅಲ್ಲಿಯವರೆಗೂ ಹೋಸ ಕೋಚ್ ನೇಮಕ ಪ್ರಕ್ರಿಯೆ ನಡೆಸದಂತೆ ಚೌಧರಿಯವರಿಗೆ ಸೂಚಿಸಿದ್ದೇನೆ' ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಖನ್ನಾ ಹೇಳಿದ್ದಾರೆ. ಇದರಿಂದ ಅಲ್ಲಿ ವರೆಗೆ ಕುಂಬ್ಳೆ ಅವರನ್ನು ಮುಂದುವರೆಸಲು ಚಿಂತನೆ ನಡೆದಿವೆ,


Click it and Unblock the Notifications











