
ಇತ್ತೀಚೆಗೆ ಟೀಂ ಇಂಡಿಯಾದ ಯುವ ಬೌಲರ್ ಅರ್ಷದೀಪ್ ಸಿಂಗ್ ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ ಅವರನ್ನು ಭೇಟಿ ಕುರಿತಾಗಿ ಇಂಟ್ರೆಸ್ಟಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ. ಅರ್ಷ್ದೀಪ್ ಕೋಚ್ ಜಸ್ವಂತ್ ರಾಯ್ ಅವರು ಮಾಧ್ಯಮಗಳೊಂದಿಗೆ ಆಸಕ್ತಿದಾಯಕ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ.
ಅರ್ಷದೀಪ್ ಅದ್ಭುತವಾಗಿ ಬೌಲಿಂಗ್ ಮಾಡಿದ್ದಕ್ಕಾಗಿ ಅಕ್ರಮ್ ಶ್ಲಾಘಿಸಿದರು ಮತ್ತು ಅವರು ಏನನ್ನಾದರೂ ಕಲಿಯಲು ಬಯಸಿದರೆ ಅವರ ಬಳಿಗೆ ಬರಲು ಹೇಳಿದರು ಎಂದು ಜಸ್ವಂತ್ ರಾಯ್ ನೆನಪಿಸಿಕೊಂಡರು.
ಕಳೆದ 1 ವರ್ಷದಲ್ಲಿ ಕಾಮೆಂಟರಿ ಜೊತೆಗೆ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ 3 ಪ್ಲೇಯರ್ಸ್
''ಸರ್ದಾರ್ಜಿ ನೀವು ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದೀರಿ. ನೀನೊಬ್ಬ ಶ್ರೇಷ್ಠ ಬೌಲರ್. ಆದರೆ ನೀವು ಆಟದಲ್ಲಿ ಪರಿಪೂರ್ಣರು ಎಂದು ನೀವು ಭಾವಿಸಿದರೆ ನನ್ನ ಬಳಿಗೆ ಬರಬೇಡಿ. ನನ್ನಿಂದ ಏನಾದರೂ ಕಲಿಯಲು ಅಥವಾ ಕೇಳಲು ಬಯಸಿದರೆ ನನ್ನನ್ನು ಯಾವಾಗ ಬೇಕಾದರೂ ಭೇಟಿ ಮಾಡಬಹುದು'' ಎಂದು ಅಕ್ರಮ್ ಹೇಳಿದರು.
ಅಂದು ರಾತ್ರಿ ಹೋಟೆಲ್ ರೂಮಿಗೆ ಹೋದ ಮೇಲೂ ಅರ್ಷದೀಪ್ ಅದನ್ನೇ ಯೋಚಿಸುತ್ತಾ ಕಾಲಕಳೆದ. ಮರುದಿನ ವಾಸಿಂ ಅವರನ್ನು ಭೇಟಿಯಾಗಲು ಹೋಗಿದ್ದೆ ಎಂದು ಅರ್ಷದೀಪ್ ಹೇಳಿದ್ದಾಗಿ ಕೋಚ್ ಜಸ್ವಂತ್ ವಿವರಿಸಿದ್ದು, ವಾಸಿಂ ಅವರನ್ನು ಭೇಟಿಯಾಗಲು ಹೋಗದಿದ್ದರೆ ತನಗೆ ಎಲ್ಲವೂ ಗೊತ್ತಿದೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಏಷ್ಯಾಕಪ್ ಸೂಪರ್-4 ನಲ್ಲಿ ಪಾಕಿಸ್ತಾನದ ಬ್ಯಾಟ್ಸ್ಮನ್ ಆಸಿಫ್ ಅಲಿ ಅವರ ಕ್ಯಾಚ್ ಅನ್ನು ಅರ್ಶ್ದೀಪ್ ಕೈ ಚೆಲ್ಲಿದ ನಂತರ, ನೆಟಿಜನ್ಗಳು ಅವರನ್ನು ಟ್ರೋಲ್ ಮಾಡಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತದ ಸೋಲಿಗೆ ಇವರೇ ಕಾರಣ ಎಂದು ಟೀಕಿಸಿದ್ದರು. ಆದರೆ ಈ ಪಂಜಾಬಿ ಆಟಗಾರನ ಪ್ರತಿಭೆಯನ್ನು ವಾಸಿಂ ಕೊಂಡಾಡಿದ್ದಾರೆ. ಟ್ರೋಲಿಂಗ್ ನಿಲ್ಲಿಸುವಂತೆ ಕೇಳಿಕೊಂಡಿದ್ದರು ಎಂದು ತಿಳಿದುಬಂದಿದೆ.
ಏಷ್ಯಾಕಪ್ನಲ್ಲಿ ಕ್ಯಾಚ್ ಕೈಬಿಡುವುದನ್ನು ಹೊರತುಪಡಿಸಿದರೆ ಅರ್ಷದೀಪ್ ಅದ್ಭುತ ಬೌಲಿಂಗ್ ಮಾಡಿದರು. ವಿಶೇಷವಾಗಿ ಡೆತ್ ಬೌಲರ್ ಗಳ ನಡುವೆ ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇತರ ಬೌಲರ್ಗಳ ಸಹಕಾರದ ಕೊರತೆಯಿಂದ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಸದ್ಯ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ದೂರ ಉಳಿದಿರುವ ಅರ್ಷದೀಪ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಆಡಲಿದ್ದಾರೆ.