Asia Cup 2022: ಪಾಕ್ ವಿರುದ್ಧ ಸೋಲಿನ ನಂತರ ರಿಷಭ್ ಪಂತ್ ಸ್ಥಾನ ಪ್ರಶ್ನಿಸಿದ ಗಂಭೀರ್, ರವಿಶಾಸ್ತ್ರಿ

2022ರ ಏಷ್ಯಾ ಕಪ್ನಲ್ಲಿ ಸೂಪರ್ 4ರ ಪಂದ್ಯದಲ್ಲಿ ಪಾಕಿಸ್ತಾನ ಐದು ವಿಕೆಟ್ಗಳ ಜಯ ಸಾಧಿಸುವುದರೊಂದಿಗೆ ಸಾಂಪ್ರದಾಯಿಕ ಎದುರಾಳಿಗಳು ತಲಾ ಒಂದು ಪಂದ್ಯ ಗೆದ್ದಂತಾಗಿದೆ. ಗ್ರೂಪ್ ಹಂತದಲ್ಲಿ ಭಾರತ ಐದು ವಿಕೆಟ್ಗಳ ಗೆಲುವು ಸಾಧಿಸಿತ್ತು.
ಏಷ್ಯಾ ಕಪ್ನ ಭಾನುವಾರದ ಪಂದ್ಯದಲ್ಲಿಯೂ ಭಾರತ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದ್ದು, ಟಿ20 ಸೆಟಪ್ಗೆ ಫಿನಿಶರ್ ಆಗಿ ಕರೆತರಲಾದ ದಿನೇಶ್ ಕಾರ್ತಿಕ್ ಅವರನ್ನು ದೀಪಕ್ ಹೂಡಾಗಾಗಿ ಕೈಬಿಡಲಾಯಿತು. ಆದರೆ ರವಿ ಬಿಷ್ಣೋಯ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಅವೇಶ್ ಖಾನ್ ಮತ್ತು ಗಾಯಗೊಂಡ ರವೀಂದ್ರ ಜಡೇಜಾ ಬದಲಿಗೆ ಬಂದರು.
ಮಾಜಿ ಕ್ರಿಕೆಟಿಗರಾದ ವಾಸಿಂ ಅಕ್ರಮ್, ಗೌತಮ್ ಗಂಭೀರ್ ಮತ್ತು ರವಿಶಾಸ್ತ್ರಿ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ 2022ರ ಸೂಪರ್ 4 ಪಂದ್ಯದಲ್ಲಿ ಭಾರತದ ಎಡಗೈ ಬ್ಯಾಟರ್ ರಿಷಭ್ ಪಂತ್ ಅವರ ಶಾಟ್ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಇದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಇನ್ನಿಂಗ್ಸ್ನ ನಿರ್ಣಾಯಕ ಸಮಯದಲ್ಲಿ ಔಟಾಗಲು ಕಾರಣವಾಯಿತು.

ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 60 ರನ್
ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ತಂಡ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ 54 ರನ್ಗಳ ಆರಂಭಿಕ ಜೊತೆಯಾಟ ನೀಡಿದರು. ನಂತರ ತಮ್ಮ ಆಕ್ರಮಣಕಾರಿ ವಿಧಾನಕ್ಕೆ ಹಿಂತಿರುಗಿದ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ನೊಂದಿಗೆ 60 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿದರು. ಕೊನೆಗೆ ಭಾರತ 20 ಓವರ್ಗಳಲ್ಲಿ 181/7 ಅನ್ನು ಗಳಿಸಿತು. ಆದರೆ ರಿಷಭ್ ಪಂತ್ ಸೇರಿದಂತೆ ಉಳಿದ ಬ್ಯಾಟರ್ಗಳು ದೊಡ್ಡ ಮೊತ್ತದ ಪ್ರಯತ್ನದಲ್ಲಿ ಬೇಗನೆ ಕುಸಿದರು.
ದಿನೇಶ್ ಕಾರ್ತಿಕ್ ಅವರಿಗೆ ಆದ್ಯತೆ ನೀಡಿದ್ದರಿಂದ ಪಾಕಿಸ್ತಾನ ವಿರುದ್ಧದ ಎ ಗುಂಪಿನ ಪಂದ್ಯದಲ್ಲಿ ಆಡದ ರಿಷಭ್ ಪಂತ್, ಅನುಭವಿ ಕೀಪರ್-ಬ್ಯಾಟರ್ ಕಾರ್ತಿಕ್ಗಿಂತ ಭಾನುವಾರದ ಪಂದ್ಯಕ್ಕಾಗಿ ಆಡುವ ಹನ್ನೊಂದರಲ್ಲಿ ಸೇರ್ಪಡೆಗೊಂಡರು. ರಿಷಭ್ ಪಂತ್ 12 ಎಸೆತಗಳಲ್ಲಿ ಎರಡು ಬೌಂಡರಿಗಳನ್ನು ಹೊಡೆದರು. ಶಾದಾಬ್ ಖಾನ್ ಅವರ ಬೌಲಿಂಗ್ನಲ್ಲಿ ನೇರವಾಗಿ ರಿವರ್ಸ್ ಸ್ವೀಪ್ ಮಾಡಿ ಕ್ಯಾಚ್ ನೀಡಿ ಔಟಾದರು.

ತನ್ನ ಶಾಟ್ಗೆ ಕಾರಣವನ್ನು ಕೇಳುತ್ತಿರುವುದು ಕಂಡುಬಂದಿತು
ಸಾಮಾಜಿಕ ಮಾಧ್ಯಮದಲ್ಲಿ ಬಂದಿರುವ ವೀಡಿಯೊಗಳಲ್ಲಿ, ರಿಷಭ್ ಪಂತ್ ಡ್ರೆಸ್ಸಿಂಗ್ ರೂಮ್ಗೆ ಹಿಂತಿರುಗಿದ ತಕ್ಷಣ, ನಾಯಕ ರೋಹಿತ್ ಶರ್ಮಾ ತನ್ನ ಶಾಟ್ಗೆ ಕಾರಣವನ್ನು ಕೇಳುತ್ತಿರುವುದು ಕಂಡುಬಂದಿತು. ರಿಷಭ್ ಪಂತ್ ಅವರು ಆ ಶಾಟ್ ಆಡುವ ಹಿಂದಿನ ಕಾರಣವನ್ನು ಭಾರತ ತಂಡದ ನಾಯಕನಿಗೆ ವಿವರಿಸಿದರು.
ಪಂದ್ಯ ಮುಗಿದ ನಂತರ ರಿಷಭ್ ಪಂತ್ ಅವರ ಔಟಾದ ವಿಧಾನದ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದರು. "ರಿಷಭ್ ಪಂತ್ ನಿರಾಶೆಗೊಳ್ಳುತ್ತಾರೆ, ಏಕೆಂದರೆ ಅದು ಅವರ ಶಾಟ್ ಅಲ್ಲ. ಅವರ ಶಾಟ್ ಬಹುಶಃ ಲಾಂಗ್-ಆನ್ ಅಥವಾ ಡೀಪ್ ಮಿಡ್-ವಿಕೆಟ್ನಲ್ಲಿ ಹೊಡೆಬಹುದಿತ್ತು. ಸಂಪೂರ್ಣವಾಗಿ ನೀವು ಅದನ್ನು ತೆಗೆದುಕೊಳ್ಳಬಹುದು ಏಕೆಂದರೆ ಅದು ನಿಮ್ಮ ಶಕ್ತಿ. ಶಕ್ತಿ ರಿವರ್ಸ್-ಸ್ವೀಪಿಂಗ್ ಅಲ್ಲ," ಎಂದು ಹೇಳಿದರು.

ಗೌತಮ್ ಗಂಭೀರ್ ಅಭಿಪ್ರಾಯವನ್ನು ಒಪ್ಪಿದ ವಾಸಿಂ ಅಕ್ರಮ್
ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಕೂಡ ಗೌತಮ್ ಗಂಭೀರ್ ಅಭಿಪ್ರಾಯಗಳನ್ನು ಒಪ್ಪಿಕೊಂಡಿದ್ದಾರೆ. "ವಿಶೇಷವಾಗಿ, ಆಟದ ಆ ಹಂತದಲ್ಲಿ ಆ ಶಾಟ್ ಆಡುವ ಅಗತ್ಯವಿರಲಿಲ್ಲ. ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಆ ಶಾಟ್ ಆಡುತ್ತಾರೆ ಎಂದು ನನಗೆ ತಿಳಿದಿದೆ. ಅವರು ವಿಶ್ವ ಕ್ರಿಕೆಟ್ನ ಅಗ್ರ ಆಟಗಾರರಲ್ಲಿ ಒಬ್ಬರು ಎಂದು ನನಗೆ ತಿಳಿದಿದೆ. ಆದರೆ ಈ ಹಂತದಲ್ಲಿ ಆ ಹೊಡೆತದ ಅಗತ್ಯವಿರಲಿಲ್ಲ," ಎಂದು ತಿಳಿಸಿದ್ದಾರೆ.
ಭಾರತದ ಮುಖ್ಯ ಕೋಚ್ ಆಗಿ ರಿಷಭ್ ಪಂತ್ನಲ್ಲಿ ಸೂಕ್ತವಾದ ಶಾಟ್ ಆಯ್ಕೆಯ ಪ್ರಾಮುಖ್ಯತೆಯನ್ನು ಕೊರೆದಿದ್ದ ರವಿಶಾಸ್ತ್ರಿ, ರೋಹಿತ್ ಶರ್ಮಾ, ರಾಹುಲ್ ಮತ್ತು ವಿರಾಟ್ ಕೊಹ್ಲಿ ಆಡಿದ ಹೊಡೆತಗಳಿಂದ ರಿಷಭ್ ಪಂತ್ ಹೇಗೆ ಕಲಿತಿಲ್ಲ ಎಂಬುದನ್ನು ತೋರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications