
ಇವರು ಮೊದಲ ಆಯ್ಕೆಯ ಆರಂಭಿಕ ಜೋಡಿಯಾಗಬೇಕು
"ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಮೊದಲ ಆಯ್ಕೆಯ ಆರಂಭಿಕ ಜೋಡಿಯಾಗಬೇಕು, ಇದರಲ್ಲಿ ಯಾವುದೇ ಸಂದೇಹವಿಲ್ಲ. ಯಾವುದೇ ಫಿಟ್ನೆಸ್ ಅಥವಾ ಗಾಯದ ಸಮಸ್ಯೆಗಳಿದ್ದರೆ, ರಿಷಭ್ ಪಂತ್ ಕೂಡ ಮೇಲ್ಭಾಗದ ಕ್ರಮಾಂಕದಲ್ಲಿ ಇನ್ನಿಂಗ್ಸ್ ಆರಂಭಿಸಬಹುದು, ತಂಡದಲ್ಲಿ ಹಲವಾರು ಆಯ್ಕೆಗಳಿವೆ, ಪ್ರತಿಯೊಬ್ಬರೂ ಇನ್ನಿಂಗ್ಸ್ ತೆರೆಯಬಹುದು ಮತ್ತು ಈ ದೇಶದಲ್ಲಿ ತುಂಬಾ ಪೈಪೋಟಿ ಇದೆ. ಈಗಿನ ಆಟಗಾರರು ಆಡುವ ಹನ್ನೊಂದರ ಬಳಗದಲ್ಲಿ ಎಲ್ಲಿ ಬೇಕಾದರೂ ಆಡಲು ಸಿದ್ಧರಾಗಿದ್ದಾರೆ," ಎಂದು ಸಿಎಸ್ಕೆ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ತಿಳಿಸಿದರು.

ರೋಹಿತ್ ಶರ್ಮಾ ಕೂಡ ಬೇಗನೆ ಔಟಾಗುತ್ತಿದ್ದಾರೆ
ಟಿ20 ಆಟದ ವಿಕಾಸದ ಬಗ್ಗೆ ಮಾತನಾಡಿದ ರಾಬಿನ್ ಉತ್ತಪ್ಪ, ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ಕೂಡ ಅಸಾಂಪ್ರದಾಯಿಕ ಹೊಡೆತಗಳನ್ನು ಆಡಲು ಪ್ರಾರಂಭಿಸಿದ್ದಾರೆ ಎಂದರು.
"ನಾಯಕ ರೋಹಿತ್ ಶರ್ಮಾ ಕೂಡ ಅಸಾಂಪ್ರದಾಯಿಕ ಶಾಟ್ಗಳನ್ನು ಆಡಲು ಪ್ರಾರಂಭಿಸಿದ್ದಾರೆ. ಇದರಿಂದ ಬೇಗನೆ ಔಟಾಗುತ್ತಿದ್ದು, ಈ ವಿಕಾಸವನ್ನು ಸಾಂಪ್ರದಾಯಿಕ ವೀಕ್ಷಕರು ಆನಂದಿಸದಿರಬಹುದು. ಆದರೆ ಇದು ಸಮಕಾಲೀನ ವೀಕ್ಷಕರಿಗೆ ಹೆಚ್ಚು ಆನಂದದಾಯಕವಾಗಿದೆ," ಎಂದು ಉತ್ತಪ್ಪ ತಿಳಿಸಿದರು.

ಬ್ಯಾಟಿಂಗ್ ಶೈಲಿಯು ಬಹಳಷ್ಟು ಬದಲಾಗಿದೆ
"ನನ್ನ ಆಟದ ದಿನಗಳಿಂದ ಬ್ಯಾಟಿಂಗ್ ಶೈಲಿಯು ಬಹಳಷ್ಟು ಬದಲಾಗಿದೆ, ಆಟವು ಸಾಕಷ್ಟು ವಿಕಸನಗೊಂಡಿದೆ. ವಿಶೇಷವಾಗಿ ಕಳೆದ ಏಳು ವರ್ಷಗಳಲ್ಲಿ ಆಟವು ವಿಕಸನದ ಮೂಲಕ ಸಾಗಿದೆ. 2015ರಿಂದ ಆಟವು ತುಂಬಾ ಮತ್ತು ವೇಗವಾಗಿ ವಿಕಸನಗೊಂಡಿದೆ ಎಂದು ನಾನು ಭಾವಿಸುತ್ತೇನೆ. ಈಗ ಪ್ರತಿ ಮತ್ತು ಪ್ರತಿಯೊಬ್ಬ ಆಟಗಾರನೂ 360-ಡಿಗ್ರಿ ಆಟಗಾರನಾಗಿದ್ದಾನೆ, ಯಾವುದೇ ಆಟಗಾರ ಈಗ ಡಿವಿಲಿಯರ್ಸ್ನಂತೆ ಬ್ಯಾಟ್ ಮಾಡಬಹುದು," ಎಂದು ರಾಬಿನ್ ಉತ್ತಪ್ಪ ಹೇಳಿದರು.
ಭಾರತದ ಆರಂಭಿಕ ಜೋಡಿಯು ಕೆಲವು ಸಮಯದಿಂದ ಫಾರ್ಮ್ನಿಂದ ಹೊರಗಿದ್ದು, ಏಷ್ಯಾ ಕಪ್ನಲ್ಲಿ ತಮ್ಮ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. ಹಾಂಕಾಂಗ್ ವಿರುದ್ಧ ಕೆಎಲ್ ರಾಹುಲ್ 39 ಎಸೆತಗಳಲ್ಲಿ 36 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ 98* ರನ್ ಜೊತೆಯಾಟದಿಂದ ಭಾರತೀಯ ಇನ್ನಿಂಗ್ಸ್ ಅನ್ನು ರಕ್ಷಿಸಲಾಯಿತು, ಅಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 26 ಎಸೆತಗಳಲ್ಲಿ 68* ರನ್ ಗಳಿಸಿ ಮಿಂಚಿದರು.

ಏಷ್ಯಾ ಕಪ್ಗಾಗಿ ಭಾರತದ ಪೂರ್ಣ ತಂಡ
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಯುಜ್ವೇಂದ್ರ ಚಹಾಲ್, ಅರ್ಶದೀಪ್ ಸಿಂಗ್, ದೀಪಕ್ ಹೂಡಾ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್.
ಸ್ಟ್ಯಾಂಡ್ಬೈ ಆಟಗಾರರು: ದೀಪಕ್ ಚಹಾರ್, ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್


Click it and Unblock the Notifications












