
ಭಾರತದ ಪರ ಅಗ್ರ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್ ಒಂದು ವರ್ಷಕ್ಕೂ ಹೆಚ್ಚು ಕಾಲ ಭಾರತದ ಪರ ಅಗ್ರ ಫಾರ್ಮ್ನಲ್ಲಿದ್ದಾರೆ. ಅವರು ಕೇವಲ 26 ಎಸೆತಗಳಲ್ಲಿ 68 ರನ್ ಗಳಿಸಲು ಮೈದಾನದ ಎಲ್ಲಾ ಮೂಲೆಗಳಿಗೂ ಹಾಂಗ್ ಕಾಂಗ್ ಬೌಲರ್ಗಳನ್ನು ದಂಡಿಸಿದರು. ಇದು ಭಾರತಕ್ಕೆ 8 ವಿಕೆಟ್ಗಳಿಂದ ಪಂದ್ಯವನ್ನು ಗೆಲ್ಲಲು ಸಹಾಯ ಮಾಡಿತು ಮತ್ತು ಸೂಪರ್ 4 ರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿತು.
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಅರ್ಧಶತಕ ಗಳಿಸಿದರು. ಆದರೆ ಅವರು ಇನ್ನೂ ನಿರಾತಂಕವಾಗೊ ಬ್ಯಾಟ್ ಬೀಸಲಿಲ್ಲ ಮತ್ತು ಅನೇಕ ಸಂದರ್ಭಗಳಲ್ಲಿ ಪ್ರಯಾಸಪಟ್ಟಂತೆ ಕಾಣುತ್ತಿದ್ದರು. ಸೂರ್ಯಕುಮಾರ್ ಯಾದವ್ ತಲಾ 6 ಬೌಂಡರಿ ಹಾಗೂ 6 ಸಿಕ್ಸರ್ಗಳ ನೆರವಿನಿಂದ ಎಲ್ಲರ ಗಮನ ಸೆಳೆದರು.

ಇಂಗ್ಲೆಂಡ್, ವೆಸ್ಟ್ ಇಂಡೀಸ್ನಲ್ಲಿ ಉತ್ತಮವಾಗಿ ಆಡಿದ ಯಾದವ್
"ನೋಡಿ, ಸೂರ್ಯಕುಮಾರ್ ಮೂರನೇ ಕ್ರಮಾಂಕದಲ್ಲಿ ಆಡಬೇಕು ಎನ್ನುವುದರ ಅದರ ಹಿಂದೆ ನನ್ನದೊಂದು ಕಾರಣವಿದೆ. ಬೇರೆಯವರು ಮತ್ತೆ ಫಾರ್ಮ್ಗೆ ಬರಬೇಕೆಂದು ನೀವು ಬಯಸುತ್ತೀರಿ ಎಂಬ ಕಾರಣಕ್ಕಾಗಿ ಸೂರ್ಯಕುಮಾರ್ ಅಂತವರನ್ನು ಆಡಿಸದೇ ಇರಬಾರದು. ಇಂಗ್ಲೆಂಡ್ನಲ್ಲಿ ಮತ್ತು ವೆಸ್ಟ್ ಇಂಡೀಸ್ನಲ್ಲಿ ಉತ್ತಮವಾಗಿ ಆಡಿದರು. ಅವರು 30 ವರ್ಷ ವಯಸ್ಸಿನವರಾಗಿದ್ದಾರೆ, ಅವರು 21, 22ರಂತಿಲ್ಲ," ಎಂದು ಬುಧವಾರ ರಾತ್ರಿ ನಡೆದ ಭಾರತ vs ಹಾಂಗ್ಕಾಂಗ್ ಪಂದ್ಯದಲ್ಲಿ ಗೌತಮ್ ಗಂಭೀರ್ ಸ್ಟಾರ್ ಸ್ಪೋರ್ಟ್ಸ್ ಕಾಮೆಂಟರಿಯಲ್ಲಿ ಹೇಳಿದರು.
ಸೂರ್ಯಕುಮಾರ್ ಯಾದವ್ ಈಗಾಗಲೇ 30 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅವರು ತಮ್ಮ ಕೈಯಲ್ಲಿರುವ ಹೆಚ್ಚಿನ ಸಮಯವನ್ನು ಆಡಬೇಕು ಎಂದು ಮಾಜಿ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಹೇಳಿದ್ದು, ಅವರು ಟಿ20 ಪಂದ್ಯಗಳಲ್ಲಿ ಭಾರತಕ್ಕಾಗಿ ಹೆಚ್ಚಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಸಲಹೆ ನೀಡಿದರು.

ವಿರಾಟ್ ಕೊಹ್ಲಿಗೆ ತುಂಬಾ ಅನುಭವವಿದೆ
"ಸೂರ್ಯಕುಮಾರ್ ಯಾದವ್ ಕೈಯಲ್ಲಿ ಹೆಚ್ಚು ಸಮಯವಿಲ್ಲ, ಅವರನ್ನು ನಂ.3ರಲ್ಲಿ ಬ್ಯಾಟಿಂಗ್ ಮಾಡಿಸಬೇಕು. ಅವರ ಫಾರ್ಮ್ ಅನ್ನು ಸದುಪಯೋಗಪಡಿಸಿಕೊಳ್ಳಿ ಮತ್ತು ವಿರಾಟ್ ಕೊಹ್ಲಿ ಅವರಿಗೆ ತುಂಬಾ ಅನುಭವವಿದೆ. ಅವರು ಇನ್ನೂ ನಂ.4ರಲ್ಲಿ ಬಂದು ಬ್ಯಾಟ್ ಮಾಡಬಹುದು, ಪರಿಸ್ಥಿತಿಯನ್ನು ಅವಲಂಬಿಸಿ ಸೂರ್ಯಕುಮಾರ್ ಯಾದವ್ ಇಲ್ಲಿಂದ ವಿಶ್ವಕಪ್ನವರೆಗೆ ನಂ.3ರಲ್ಲಿ ಬ್ಯಾಟಿಂಗ್ ಮಾಡಬೇಕು ಮತ್ತು ಫಲಿತಾಂಶಗಳು ಹೇಗೆ ಇರುತ್ತವೆ ಎಂಬುದನ್ನು ನೋಡಬೇಕು ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ," ಎಂದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ತಿಳಿಸಿದರು.
ಸೆಪ್ಟೆಂಬರ್ 4ರಂದು ನಡೆಯಲಿರುವ ಸೂಪರ್ 4ರ ಮೊದಲ ಹಣಾಹಣಿಯಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಎದುರಿಸುವ ಸಾಧ್ಯತೆಯಿದೆ. ಶುಕ್ರವಾರ (ಸೆಪ್ಟೆಂಬರ್ 2) ತನ್ನ ಕೊನೆಯ ಗ್ರೂಪ್ ಎ ಹಣಾಹಣಿಯಲ್ಲಿ ಪಾಕಿಸ್ತಾನವು ಹಾಂಗ್ಕಾಂಗ್ ಅನ್ನು ಸೋಲಿಸಿದರೆ ಮಾತ್ರ ಅದು ಸಾಧ್ಯವಾಗಲಿದೆ.


Click it and Unblock the Notifications












