For Quick Alerts
ALLOW NOTIFICATIONS  
For Daily Alerts
 

Asia Cup 2022: ಪಾಕಿಸ್ತಾನ ವಿರುದ್ಧ ಕ್ಯಾಚ್ ಬಿಟ್ಟ ಯುವ ವೇಗಿ ಬೆಂಬಲಕ್ಕೆ ನಿಂತ ಭಾರತದ ಮಾಜಿ ಸ್ಪಿನ್ನರ್

Asia Cup 2022 IND vs PAK: Harbhajan Singh Supports Arshdeep Singh Who Dropped A Catch Against Pakistan

ದುಬೈನಲ್ಲಿ ಸದ್ಯ ನಡೆಯುತ್ತಿರುವ 2022ರ ಏಷ್ಯಾ ಕಪ್‌ನಲ್ಲಿ ಭಾನುವಾರ ನಡೆದ ಭಾರತ-ಪಾಕಿಸ್ತಾನ ನಡುವಿನ ಸೂಪರ್ 4 ಪಂದ್ಯವನ್ನು ಉಭಯ ತಂಡಗಳು ರೋಮಾಂಚನಕಾರಿ ಆಟವಾಡಿ ಅಂತಿಮವಾಗಿ ಬಾಬರ್ ಅಜಂ ನಾಯಕತ್ವದ ತಂಡವು ಐದು ವಿಕೆಟ್‌ಗಳಿಂದ ಮೇಲುಗೈ ಸಾಧಿಸಿತು.

ಪಾಕಿಸ್ತಾನ ತಂಡವು ಗ್ರೂಪ್ ಹಂತದ ಸೋಲಿಗೆ ಸೇಡು ತೀರಿಸಿಕೊಂಡಿತು ಮತ್ತು ಈಗ ಭಾರತವು ಫೈನಲ್‌ಗೆ ಹೋಗಬೇಕೆಂದರೆ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ತನ್ನ ಪಂದ್ಯಗಳನ್ನು ಗೆಲ್ಲಲೇಬೇಕಿದೆ.

ಆದಾಗ್ಯೂ, ಎರಡನೇ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಯುವ ವೇಗಿ ಅರ್ಶ್‌ದೀಪ್ ಸಿಂಗ್ ಅವರು ರವಿ ಬಿಷ್ಣೋಯ್ ಅವರ ಬೌಲಿಂಗ್‌ನಲ್ಲಿ ಬಂದಿದ್ದ ಸುಲಭ ಕ್ಯಾಚ್‌ನ್ನು ಕೈಚೆಲ್ಲಿದರು. ಈ ಸುಲಭವಾದ ಅವಕಾಶವನ್ನು ಕೈಬಿಟ್ಟಿದ್ದರಿಂದ ಪಂದ್ಯವೇ ಕೈತಪ್ಪಿತು, ಇದರಿಂದ ಆಸಿಫ್ ಅಲಿ ಜೀವದಾನ ಪಡೆದರು.

ಅಂತಿಮ ಓವರ್ ಬೌಲ್ ಮಾಡಿದ ಅರ್ಶ್‌ದೀಪ್ ಸಿಂಗ್

ಅರ್ಶ್‌ದೀಪ್ ಸಿಂಗ್ ನಂತರ ಇನ್ನಿಂಗ್ಸ್‌ನ ಅಂತಿಮ ಓವರ್ ಬೌಲ್ ಮಾಡಲು ಬಂದರು. ಆದರೆ ಏಳು ರನ್‌ಗಳನ್ನು ಡಿಫೆಂಡ್ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ ಮತ್ತು ಕೊನೆಯಲ್ಲಿ ಪಾಕಿಸ್ತಾನವು ಗೆಲುವಿನೊಂದಿಗೆ ಸಂಭ್ರಮಿಸಿದರು. ಇದೀಗ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಅರ್ಶ್‌ದೀಪ್ ಅವರ ರಕ್ಷಣೆಗೆ ಬಂದಿದ್ದಾರೆ, ಯಾರೂ ಉದ್ದೇಶಪೂರ್ವಕವಾಗಿ ಕ್ಯಾಚ್‌ಗಳನ್ನು ಬಿಡುವುದಿಲ್ಲ ಮತ್ತು ಯುವ ವೇಗಿಯನ್ನು ಟೀಕಿಸಬಾರದು ಎಂದು ಹೇಳಿದ್ದಾರೆ.

"ಯುವ ಆಟಗಾರ ಅರ್ಶ್‌ದೀಪ್ ಸಿಂಗ್ ಅವರನ್ನು ಟೀಕಿಸುವುದನ್ನು ನಿಲ್ಲಿಸಿ. ಯಾರೂ ಉದ್ದೇಶಪೂರ್ವಕವಾಗಿ ಕ್ಯಾಚ್ ಅನ್ನು ಬಿಡುವುದಿಲ್ಲ. ನಮ್ಮ ಭಾರತದ ಹುಡುಗರ ಬಗ್ಗೆ ನಮಗೆ ಹೆಮ್ಮೆ ಇದೆ. ಪಾಕಿಸ್ತಾನ ತಂಡ ಉತ್ತಮವಾಗಿ ಆಡಿದೆ. ಈ ವೇದಿಕೆಯಲ್ಲಿ ಆರ್ಶ್‌ದೀಪ್ ವಿರುದ್ಧ ಅಗ್ಗದ ಮಾತುಗಳನ್ನು ಹೇಳುವ ಮೂಲಕ ನಮ್ಮದೇ ಹುಡುಗರನ್ನು ಹೀಯಾಳಿಸುವ ಇಂತಹ ಜನರಿಗೆ ನಾಚಿಕೆಯಾಗಬೇಕು ಮತ್ತು ಅರ್ಶ್‌ದೀಪ್ ಸಿಂಗ್ ಈಸ್ ಗೋಲ್ಡ್," ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಭಾರತದ ಯುವ ಬೌಲರ್‌ಗೆ ಮೊಹಮ್ಮದ್ ಹಫೀಜ್ ಬೆಂಬಲ

ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡ ಟ್ವಿಟರ್‌ನಲ್ಲಿ ಅರ್ಷದೀಪ್‌ಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಕೂಡ ಭಾರತದ ಯುವ ಬೌಲರ್‌ಗೆ ಬೆಂಬಲವಾಗಿ ಬಂದರು ಮತ್ತು ಹಫೀಜ್ ತಮ್ಮ ಬೆಂಬಲವನ್ನು ಟ್ವಿಟ್ಟರ್‌ನಲ್ಲಿ ತೋರಿಸಿದ್ದಾರೆ. ಅವರ ಅಭಿಮಾನಿಗಳು ಕೂಡ ಅರ್ಷದೀಪ್ ಬೆಂಬಲಕ್ಕೆ ನಿಂತಿದ್ದಾರೆ.

ಅರ್ಶ್‌ದೀಪ್ ಬೆಂಬಲಿಸಿದ ವಿರಾಟ್ ಕೊಹ್ಲಿ

ಅರ್ಶ್‌ದೀಪ್ ಬೆಂಬಲಿಸಿದ ವಿರಾಟ್ ಕೊಹ್ಲಿ

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಅರ್ಶ್‌ದೀಪ್‌ಗೆ ತಮ್ಮ ಬೆಂಬಲವನ್ನು ನೀಡಿದರು. "ಯಾರಾದರೂ ಅಂತಹ ತಪ್ಪು ಮಾಡಬಹುದು, ಪರಿಸ್ಥಿತಿ ಒತ್ತಡದಲ್ಲಿತ್ತು ಮತ್ತು ಅಂತಹ ಸಂದರ್ಭಗಳಲ್ಲಿ ತಪ್ಪುಗಳು ಸಂಭವಿಸುತ್ತವೆ. ನನಗೆ ಇನ್ನೂ ನೆನಪಿದೆ, ನನ್ನ ಮೊದಲ ಚಾಂಪಿಯನ್ಸ್ ಟ್ರೋಫಿಯನ್ನು ಆಡುತ್ತಿದ್ದೆ ಮತ್ತು ಪಂದ್ಯವು ಪಾಕಿಸ್ತಾನದ ವಿರುದ್ಧವಾಗಿತ್ತು. ನಾನು ಶಾಹಿದ್ ಅಫ್ರಿದಿ ವಿರುದ್ಧ ಕೆಟ್ಟ ಹೊಡೆತವನ್ನು ಆಡಿದ್ದೆ, ನಂತರ ನಾನು ಬೆಳಿಗ್ಗೆ 5 ಗಂಟೆಯವರೆಗೆ ಸೀಲಿಂಗ್ ಅನ್ನು ನೋಡುತ್ತಿದ್ದೆ".

"ನನಗೆ ನಿದ್ರೆ ಬರಲಿಲ್ಲ ಮತ್ತು ನನ್ನ ವೃತ್ತಿಜೀವನ ಮುಗಿದಿದೆ ಎಂದು ನಾನು ಭಾವಿಸಿದೆ. ಹಿರಿಯ ಆಟಗಾರರು ನಿಮ್ಮ ಸುತ್ತಲೂ ಇರುತ್ತಾರೆ, ಇದೀಗ ಉತ್ತಮ ತಂಡದ ವಾತಾವರಣವಿದೆ. ನಾನು ನಾಯಕ ಮತ್ತು ಕೋಚ್‌ಗೆ ಕ್ರೆಡಿಟ್ ನೀಡುತ್ತೇನೆ. ಆಟಗಾರರು ತಮ್ಮ ತಪ್ಪುಗಳಿಂದ ಕಲಿಯುತ್ತಾರೆ. ಆದ್ದರಿಂದ ಒಬ್ಬರು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು, ಮತ್ತೊಮ್ಮೆ ಒತ್ತಡದ ಪರಿಸ್ಥಿತಿ ಎದುರು ನೋಡಬೇಕು," ಎಂದರು.

ರೋಹಿತ್ ಮತ್ತು ಸೂರ್ಯ ಕುಮಾರ್ ಗೆ ಹೋಲಿಸಿ ಹಿಯ್ಶಾಳಿಸಿದ ಪಾಕ್ | OneIndia Kannada
ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 60 ರನ್

ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 60 ರನ್

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಕುರಿತು ಮಾತನಾಡುವುದಾದರೆ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 181/7 ಗಳಿಸಿತು. ಮಾಜಿ ನಾಯಕ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 60 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿದರು.

182 ರನ್‌ಗಳನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ 51 ಎಸೆತಗಳಲ್ಲಿ 71 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿದರು. ಆದಾಗ್ಯೂ, ಪರಿಣಾಮ ಇನ್ನಿಂಗ್ಸ್ ಮೊಹಮ್ಮದ್ ನವಾಜ್ ಅವರು ನಂ.4 ರಲ್ಲಿ ಬ್ಯಾಟಿಂಗ್‌ಗೆ ಹೋದರು ಮತ್ತು ಎಡಗೈ ಆಟಗಾರ 20 ಎಸೆತಗಳಲ್ಲಿ 42 ರನ್ ಗಳಿಸಿದರು.

ಭಾರತದ ಪರ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್ ಮತ್ತು ಅರ್ಷದೀಪ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.

Story first published: Monday, September 5, 2022, 17:38 [IST]
Other articles published on Sep 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+