
ಅಕ್ಷರ್ ಪಟೇಲ್ ಬ್ಯಾಟಿಂಗ್ನಲ್ಲಿ ಸಾಕಷ್ಟು ಸುಧಾರಿಸಿದ್ದಾರೆ
ಅಕ್ಷರ್ ಇತ್ತೀಚೆಗೆ ಬ್ಯಾಟಿಂಗ್ ನಲ್ಲಿ ಸಾಕಷ್ಟು ಸುಧಾರಿಸಿದ್ದಾರೆ. ರವೀಂದ್ರ ಜಡೇಜಾ ಭಾರತ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಕಾರಣ ಅವರ ಬ್ಯಾಟಿಂಗ್ ಸಾಮರ್ಥ್ಯ. ಆದರೆ ಈಗ ಅದು ಹೆಚ್ಚು ದಿನ ಉಳಿಯದು. ವೆಸ್ಟ್ ಇಂಡೀಸ್ ವಿರುದ್ಧದ ಬ್ಯಾಟಿಂಗ್ ಮೂಲಕ ಅಕ್ಷರ್ ಭಾರತದ ಪರ ಮ್ಯಾಚ್ ವಿನ್ನರ್ ಎನಿಸಿಕೊಂಡಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಅನ್ನು ಉತ್ತಮವಾಗಿ ಸುಧಾರಿಸಿರುವ ಜೊತೆಗೆ, ಅಕ್ಷರ್ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅಕ್ಷರ್ ಪ್ರದರ್ಶನದಿಂದ ಜಡೇಜಾ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ ಎಂದು ಅಜಯ್ ಜಡೇಜಾ ಹೇಳಿದರು.

ವಿಂಡೀಸ್ ವಿರುದ್ಧದ ಸರಣಿಯಲ್ಲಿ ಮಿಂಚಿದ ಅಕ್ಷರ್ ಪಟೇಲ್
ವಿಂಡೀಸ್ ವಿರುದ್ಧ ಅದ್ಬುತ ಪ್ರದರ್ಶನ ನೀಡುವ ಮೂಲಕ ಅಕ್ಷರ್ ಬ್ಯಾಟಿಂಗ್ ಮೂಲಕ ಭಾರತದ ಗೆಲುವಿನ ಪ್ರಮುಖ ಪ್ಲೇಯರ್ ಆಗಲು ಸಾಧ್ಯವಾಯಿತು. ಜಿಂಬಾಬ್ವೆ ವಿರುದ್ಧವೂ ಆತ ಮಿಂಚಿದ್ದಾನೆ. ಹೊಸ ಚೆಂಡಿನಲ್ಲೂ ವಿಕೆಟ್ ಕಬಳಿಸುವುದು ಅಕ್ಷರ್ ಅವರ ಪ್ರಮುಖ ಲಕ್ಷಣ. ಪವರ್ಪ್ಲೇಯಲ್ಲಿ ಜಡೇಜಾ ಬೌಲಿಂಗ್ ಮಾಡಿದಾಗಲೆಲ್ಲಾ ಅವರು ಉತ್ತಮ ರನ್ಗಳನ್ನು ನೀಡಿದರು. ಆದರೆ ಅಕ್ಷರ್ ಪವರ್ಪ್ಲೇನಲ್ಲಿ ಸ್ವಲ್ಪ ಹೆಚ್ಚು ಉತ್ತಮ ಪ್ರದರ್ಶನ ನೀಡುವ ಬೌಲರ್.
ಅಕ್ಷರ್ ಮೊದಲಿಗೆ ಬ್ಯಾಟಿಂಗ್ ನಲ್ಲಿ ಕೊಂಚ ಹಿಂದೆ ಬಿದ್ದಿದ್ದರು. ಆದರೆ ಇತ್ತೀಚಿನ ಪ್ರದರ್ಶನಗಳು ಉತ್ತಮವಾಗಿವೆ. ಅವರು ಪರಿಸ್ಥಿತಿಗೆ ಅನುಗುಣವಾಗಿ ವೇಗ ಮತ್ತು ಸಮಚಿತ್ತದಿಂದ ಆಡಬಹುದು. ಅಕ್ಷರ್ ಅನುಭವಿ ಸ್ಪಿನ್ನರ್ ಆಗಿದ್ದು, ಭಾರತ ತಂಡಕ್ಕಾಗಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಅಕ್ಷರ್ ಬ್ಯಾಕ್ಅಪ್ ಸ್ಟಾರ್ ಆಗಿದ್ದು, ಜಡೇಜಾ ಏಷ್ಯಾಕಪ್ನಲ್ಲಿ ಭಾರತದ ಪ್ರಮುಖ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ.
ನನ್ನ ಪ್ರಕಾರ ಎಲ್ಲಾ ಮಾದರಿಯ ಕ್ರಿಕೆಟ್ ಒತ್ತಡ ಒಂದೇ ಆಗಿದೆ: ವೆಂಕಟೇಶ್ ಅಯ್ಯರ್

ಜಡೇಜಾ ಅರ್ಧದಷ್ಟು ಅಕ್ಷರ್ಗೆ ಅವಕಾಶ ಸಿಕ್ಕಿಲ್ಲ!
ಜಡೇಜಾ ಅವರ ಅರ್ಧದಷ್ಟು ಅವಕಾಶವೂ ಅಕ್ಷರಕ್ಕೆ ಸಿಕ್ಕಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ಜಡೇಜಾ ಅನುಪಸ್ಥಿತಿಯಲ್ಲಿ ಅವಕಾಶ ಸಿಕ್ಕಾಗ, ಅಕ್ಷರ್ ಚೆಂಡಿನ ಮೂಲಕ ಅದ್ಭುತ ಪ್ರದರ್ಶನ ತೋರಿದರು. ಆದರೆ ಜಡೇಜಾ ವಾಪಸ್ಸಾದ ನಂತರ ಮತ್ತೊಮ್ಮೆ ಹೊಡೆತ ತಿಂದರು. ಸದ್ಯ ತಂಡದ ಮ್ಯಾನೇಜ್ಮೆಂಟ್ ಜಡೇಜಾಗೆ ಆದ್ಯತೆ ನೀಡುತ್ತಿದೆ. ಆದರೆ ಜಡ್ಡು ಪ್ರದರ್ಶನ ಹದಗೆಟ್ಟರೆ ಅಕ್ಷರ್ ರೆಡಿ ಇದ್ದಾರೆ. ಇದು ಖಂಡಿತವಾಗಿಯೂ ಜಡೇಜಾ ಮೇಲೆ ಉತ್ತಮ ಪ್ರದರ್ಶನ ನೀಡುವಂತೆ ಒತ್ತಡ ಹೇರಲಿದೆ.
ಚಹಾಲ್ ದಾಂಪತ್ಯದಲ್ಲಿ ಬಿರುಕು ವದಂತಿ: 'ಬಹಳ ದ್ವೇಷಪೂರಿತ' ಎಂದು ಸ್ಪಷ್ಟೀಕರಣ ನೀಡಿದ ಧನಶ್ರೀ ವರ್ಮಾ

ಇಬ್ಬರ ನಡುವೆ ಕೇವಲ ಒಂದು ವ್ಯತ್ಯಾಸವಿದೆ!
ಜಡೇಜಾ ಪಂದ್ಯಗಳು ಮತ್ತು ವಿಕೆಟ್ಗಳ ಸಂಖ್ಯೆಯಲ್ಲಿ ಅಕ್ಷರ್ಗಿಂತ ಹೆಚ್ಚು ಮುಂದಿದ್ದಾರೆ. ಸದ್ಯ ಈ ಸ್ಥಾನಕ್ಕೆ ಇಬ್ಬರೂ ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ ಎನ್ನಬಹುದು. ಇಬ್ಬರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಫೀಲ್ಡಿಂಗ್. ಇದರಲ್ಲಿ ಜಡೇಜಾಗೆ ಎಲ್ಲರಿಗಿಂತ ಮುಂದಿದ್ದಾರೆ. ಜಡೇಜಾಗೆ ಉತ್ತಮ ಬದಲಿ ಆಟಗಾರನಾಗಿ ಅಕ್ಷರ್ ಆಯ್ಕೆಯಾಗುದು ನಿಜಕ್ಕೂ ಸಂತೋಷವಾಗಿದೆ ಎಂದು ಅಜಯ್ ಜಡೇಜಾ ಹೇಳಿದರು.


Click it and Unblock the Notifications












