
ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ವಾಸಿಂ ಜಾಫರ್ ಮಾತು
12 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ ಕೇವಲ ಒಂದು ಬೌಂಡರಿ ಬಾರಿಸಿದರು. ವಾನ್ ಮೀಕೆರೆನ್ ಅವರ ಎಸೆತವು ಸ್ಟಂಪ್ನ ಮುಂದೆ ಬೀಳುವ ಮೊದಲು ರಾಹುಲ್ ಪ್ಯಾಡ್ಗೆ ಸವರಿತು ಮತ್ತು ಅಂಪೈರ್ ಔಟ್ ಎಂದು ಹೇಳಿದರು.
ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್, ಇತ್ತೀಚೆಗೆ ರಾಹುಲ್ ಅನುಭವಿಸಿದ ಗಾಯದಿಂದಾಗಿ ಬ್ಯಾಟರ್ ತನ್ನ ಲಯವನ್ನು ಕಳೆದುಕೊಂಡಂತೆ ತೋರುತ್ತಿದೆ ಎಂದು ಹೇಳಿದರು.

ಸ್ವಲ್ಪಮಟ್ಟಿಗೆ ಅದೇ ಲಯವನ್ನು ಕಾಯ್ದುಕೊಳ್ಳುವುದು ಕಷ್ಟ
"ಕೆಎಲ್ ರಾಹುಲ್ ಅಂಕಿಅಂಶಗಳು ಸೂಚಿಸುವುದಕ್ಕಿಂತ ಉತ್ತಮ ಆಟಗಾರ ಎಂದು ನಾನು ಭಾವಿಸುತ್ತೇನೆ. ನಮ್ಮ ಹಿಂದಿನ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಅವರು ಉತ್ತಮ ಫಾರ್ಮ್ನಲ್ಲಿದ್ದರು ಮತ್ತು ನಂತರ ಅವರು ಗಾಯಗೊಂಡರು. ಚೇತರಿಕೆ ನಂತರ ಅವರು ತಂಡಕ್ಕೆ ಹಿಂತಿರುಗಬೇಕಾಯಿತು. ಆದ್ದರಿಂದ ಸ್ವಲ್ಪಮಟ್ಟಿಗೆ ಅದೇ ಲಯವನ್ನು ಕಾಯ್ದುಕೊಳ್ಳುವುದು ಕಷ್ಟ," ಎಂದು ಕ್ರಿಕ್ಟ್ರಾಕರ್ನಲ್ಲಿ "ಬ್ಯಾಟ್ಬ್ರಿಕ್ಸ್ 7 ಪ್ರೆಸೆಂಟ್ಸ್ ರನ್ ಕಿ ರಣನೀತಿ' ಕುರಿತು ಮಾತನಾಡುವಾಗ ವಾಸಿಂ ಜಾಫರ್ ಅಭಿಪ್ರಾಯಪಟ್ಟರು.
"ಕೆಎಲ್ ರಾಹುಲ್ ಈಗಾಗಲೇ ಒಂದೆರಡು ಬಾರಿ ಗಾಯಗೊಂಡಿದ್ದಾರೆ ಎಂದು ನಿಮಗೆ ತಿಳಿದಿದೆ. ಅವರ ಬ್ಯಾಟಿಂಗ್ ಮಕಾಗಿರುವುದಕ್ಕೆ ಬಹುಶಃ ಅದೂ ಒಂದು ಕಾರಣವಾಗಿರಬಹುದು. ಆದರೆ ನನ್ನ ಪ್ರಕಾರ ನಿಸ್ಸಂಶಯವಾಗಿ ಸಂಖ್ಯೆಗಳು ಇವೆ ಮತ್ತು ಅವರು ಆ ಸಂಖ್ಯೆಯನ್ನು ಸುಧಾರಿಸಲು ಬಯಸುತ್ತಾರೆ. ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಅಸಾಧಾರಣ ಆಟಗಾರ ಮತ್ತು ಟಿ20 ಮತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಸಾಧಾರಣವಾಗಿದ್ದಾರೆ," ಎಂದು ವಾಸಿಂ ಜಾಫರ್ ತಿಳಿಸಿದರು.

ಕೆಎಲ್ ರಾಹುಲ್ ಕ್ರೀಸ್ನಲ್ಲಿ ಹೆಚ್ಚು ಕಾಲ ಇರಬಹುದಿತ್ತು
ಪಾಕಿಸ್ತಾನ ವಿರುದ್ಧ ಹೈ-ವೋಲ್ಟೇಜ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ಇತರ ಹಿರಿಯ ಬ್ಯಾಟರ್ಗಳು ದೊಡ್ಡ ಪಂದ್ಯಗಳಲ್ಲಿ ಉತ್ತಮವಾಗಿ ಹೊರಹೊಮ್ಮುವ ಅಗತ್ಯವನ್ನು ವಾಸಿಂ ಜಾಫರ್ ಪುನರುಚ್ಚರಿಸಿದರು.
"ನಾವು ಪಾಕಿಸ್ತಾನದ ವಿರುದ್ಧ ಸೆಣಸಾಡಿದ್ದೇವೆ. ರೋಹಿತ್ ಶರ್ಮಾ ಕೂಡ ಕಳಪೆಯಾಗಿ ಔಟಾದರು, ಕೆಎಲ್ ರಾಹುಲ್ ಸಹ ಕಡಿಮೆ ರನ್ಗೆ ಔಟಾದರು. ಭರವಸೆಯ ಬ್ಯಾಟರ್ ಆಗಿದ್ದ ಸೂರ್ಯಕುಮಾರ್ ಯಾದವ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದ್ದರು. ಅವರು ದೊಡ್ಡ ಪಂದ್ಯಗಳೊಂದಿಗೆ ಫಾರ್ಮ್ಗೆ ಬರಬೇಕಾಗಿದೆ," ಎಂದು ತಿಳಿಸಿದರು.
ಎಲ್ಬಿಡಬ್ಲ್ಯು ನಿರ್ಧಾರವನ್ನು ಮರುಪರಿಶೀಲಿಸಲು ನಿರ್ಧರಿಸಿದ್ದರೆ ಕೆಎಲ್ ರಾಹುಲ್ ಕ್ರೀಸ್ನಲ್ಲಿ ಹೆಚ್ಚು ಕಾಲ ಇರಬಹುದಿತ್ತು. ಮರುಪರಿಶೀಲನೆಯಲ್ಲಿ, ಚೆಂಡು ಲೆಗ್ ಸ್ಟಂಪ್ ಅನ್ನು ತಪ್ಪಿಸಿಕೊಂಡಿದೆ ಎಂದು ಕಂಡುಬಂದಿದೆ. ಆದರೆ, ಭಾರತ ತಂಡ ರಿವ್ಯೂ ತೆಗೆದುಕೊಂಡಿರಲಿಲ್ಲ.


Click it and Unblock the Notifications












