2011ರ ವಿಶ್ವಕಪ್ ಗೆಲ್ಲಲು ಓರಿಯೊ ಬಿಸ್ಕೆಟ್ ಕೂಡ ಕಾರಣ ಎಂದಿದ್ದ ಧೋನಿ!
ಓರಿಯೋ ರೀ ಲಾಂಚ್ ಸಂದರ್ಭದಲ್ಲಿ, ಅವರು ಓರಿಯೊ ಬಿಸ್ಕೆಟ್ಗಳನ್ನು ಬಿಡುಗಡೆ ಮಾಡಿದ್ದು, 2011 ರ ವಿಶ್ವಕಪ್ ಗೆಲ್ಲಲು ಇದು ಒಂದು ಕಾರಣ ಎಂದು ಹೇಳಿದರು. ಧೋನಿ ವಿಶ್ವಕಪ್ ಗೆಲುವನ್ನ ಓರಿಯೊಗೆ ಕ್ರೆಡಿಟ್ ನೀಡಿದ ಬಗ್ಗೆ ನೆಟಿಜನ್ಗಳು ಸಾಕಷ್ಟು ಕಾಮೆಂಟ್ಗಳನ್ನು ಮಾಡಿದ್ದರು. ಇದಕ್ಕೆ ಗೌತಮ್ ಗಂಭೀರ್ 1983 ವಿಶ್ವಕಪ್ ಗೆಲುವಿನ ಸಮಯದಲ್ಲಿ ಓರಿಯೊ ಬಿಸ್ಕೆಟ್ ಇರಲಿಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದರು. ಆದ್ರೆ ಇದಾದ ನಂತರ ಗಂಭೀರ್ ಈ ವಿಡಿಯೋವನ್ನು ಅಪ್ಲೋಡ್ ಮಾಡಿ ನಾಯಿಗೆ ಓರಿಯೊ ಎಂದು ಕರೆಯುವ ಮೂಲಕ ಧೋನಿಗೆ ಪರೋಕ್ಷವಾಗಿ ಉತ್ತರಿಸಿದ್ದಾರೆ.
ಧೋನಿಯನ್ನ ಪರೋಕ್ಷವಾಗಿ ಟೀಕಿಸಿದ ಗಂಭೀರ್
ಓರಿಯೊ ಬಿಸ್ಕೆಟ್ಗೆ ಮನ್ನಣೆ ನೀಡಿರುವ ಧೋನಿಯನ್ನು ಗಂಭೀರ್ ಪರೋಕ್ಷವಾಗಿ ದೂಷಿಸಿದ್ದಾರೆ ಎಂಬುದು ಈ ಘಟನೆಯಿಂದ ಸ್ಪಷ್ಟವಾಗಿದೆ. 2011ರಲ್ಲಿ ಗಂಭೀರ್ 97 ರನ್ ಸಿಡಿಸಿ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಧೋನಿ 79 ಎಸೆತಗಳಲ್ಲಿ ಅಜೇಯ 91 ರನ್ಗಳಿಸಿ ತಂಡವನ್ನ ಗೆಲುವಿನ ದಡ ತಲುಪಿಸಿದ್ರು. ಈ ಪಂದ್ಯದಲ್ಲಿ ಧೋನಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಲಭಿಸಿದ್ರೆ, ಯುವರಾಜ್ ಸಿಂಗ್ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದರು. ಆದ್ರೀಗ ಈ ವೀಡಿಯೋ ಮೂಲಕ ಗಂಭೀರ್ ನಿಜವಾಗಿ ಏನು ಹೇಳಲು ಬಯಸಿದ್ದಾರೆಂದು ಚರ್ಚೆ ಆರಂಭವಾಗಿದ್ದು, ಆದರೆ ಇದು ಒಂದು ಸಂದೇಶವನ್ನು ಖಂಡಿತವಾಗಿಯು ಹೊಂದಿದೆ.
ಗೌತಮ್ ಗಂಭೀರ್ ಕಾಲುಗಳನ್ನ ಮುಟ್ಟಿ ನಮಸ್ಕರಿಸಿದ ಯುವ ಅಭಿಮಾನಿ: ಆಟೋಗ್ರಾಫ್ ನೀಡಿದ ಗಂಭೀರ್

ಸಿಎಸ್ಕೆಗೆ ವಿದಾಯ ಹೇಳಬಹುದೇ ಎಂಬ ಕುತೂಹಲದ ಪತ್ರಿಕಾಗೋಷ್ಠಿ!
ಭಾರತದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಎರಡು ವರ್ಷಗಳ ಹಿಂದೆ ಅನಿರೀಕ್ಷಿತವಾಗಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದು ಗೊತ್ತೇ ಇದೆ. ಅಂದಿನಿಂದ ಅವರು ಐಪಿಎಲ್ನಲ್ಲಿ ಮಾತ್ರ ಆಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿರುವ ಧೋನಿ ಕಳೆದ ವರ್ಷ ಸಿಎಸ್ ಕೆಗೆ ವಿದಾಯ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ ತವರು ಮೈದಾನವಾದ ಚೆನ್ನೈ ಸ್ಟೇಡಿಯಂನಲ್ಲಿ ಚೆನ್ನೈ ಅಭಿಮಾನಿಗಳ ಮುಂದೆ ಆಡಿದ ನಂತರವೇ ಆಟಕ್ಕೆ ವಿದಾಯ ಹೇಳುವುದಾಗಿ ಘೋಷಿಸಿದರು. ಆದರೆ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಧೋನಿ ಮಹತ್ವದ ಘೋಷಣೆ ಮಾಡಿದ್ದರು
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವ ಮಾಹಿ ಶನಿವಾರ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸೆ.25 (ಭಾನುವಾರ) ಮಧ್ಯಾಹ್ನ 2 ಗಂಟೆಗೆ ಫೇಸ್ ಬುಕ್ ನಲ್ಲಿ ಲೈವ್ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹತ್ವದ ಘೋಷಣೆ ಮಾಡುವುದಾಗಿ ತಿಳಿಸಿದರು. ಅದರೊಂದಿಗೆ ಧೋನಿ ಐಪಿಎಲ್ಗೆ ವಿದಾಯ ಹೇಳಲಿದ್ದಾರೆ ಎಂಬ ಪ್ರಚಾರವೂ ಜೋರಾಯಿತು.
ಭಾರತಕ್ಕೆ ಬಂದಿಳಿದ ವಿಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್: ಚುಟುಕು ಮಾದರಿಯಲ್ಲಿ ಮತ್ತೆ ರನ್ ಮಳೆ ಹರಿಸಲು ಸಜ್ಜು!
ಜಾಹೀರಾತು ಘೋಷಣೆಯ ಸಸ್ಪೆನ್ಸ್
ಆದರೆ ಧೋನಿ ಪತ್ರಿಕಾಗೋಷ್ಟಿಗೂ ಕ್ರಿಕೆಟ್ಗೂ ಯಾವುದೇ ಸಂಬಂಧವಿಲ್ಲ ಎಂದು ಧೋನಿ ಘೋಷಿಸಿದರು. 2 ಗಂಟೆಗೆ ಸೋಷಿಯಲ್ ಮೀಡಿಯಾದಲ್ಲಿ ಧೋನಿ ಏನು ಹೇಳುತ್ತಾರೆಂದು ನೋಡಿದ ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ. ಇದು ನಿವೃತ್ತಿಯ ವಿಷಯವಲ್ಲ ಎಂದು ಅನೇಕ ಅಭಿಮಾನಿಗಳು ಕೂಲ್ ಆಗಿದ್ದರೂ, ಇನ್ನು ಕೆಲವರು ಫ್ಯಾನ್ ಫಾಲೋಯಿಂಗ್ ಅನ್ನು ಜಾಹೀರಾತಿಗಾಗಿ ಬಳಸಿಕೊಂಡ ಧೋನಿಯ ವಾಣಿಜ್ಯೀಕರಣದ ಬಗ್ಗೆ ಟೀಕಿಸಿದ್ದಾರೆ. 2022 ರಲ್ಲಿ ಮತ್ತೊಮ್ಮೆ ಪ್ರಸಿದ್ಧ ಬಿಸ್ಕತ್ತು ಬ್ರ್ಯಾಂಡ್ ಓರಿಯೊವನ್ನು ಬಿಡುಗಡೆ ಮಾಡುವುದಾಗಿ ಧೋನಿ ಘೋಷಿಸಿದ್ದಾರೆ. ಇದು ಸಂಪೂರ್ಣವಾಗಿ ವಾಣಿಜ್ಯ ಪ್ರಚಾರ ಮಾತ್ರ.
ಬಿಸ್ಕೆಟ್ ಬ್ರಾಂಡ್ ಬಿಡುಗಡೆ ಸಂದರ್ಭದಲ್ಲಿ ಧೋನಿ ವರದಿಗಾರರೊಬ್ಬರನ್ನು ವೇದಿಕೆಗೆ ಆಹ್ವಾನಿಸಿದರು. 2011ರಲ್ಲಿ ಭಾರತ ಓರಿಯೊ ಬಿಸ್ಕೆಟ್ ಬ್ರಾಂಡ್ ಅನ್ನು ಬಿಡುಗಡೆ ಮಾಡಿದಾಗ ವಿಶ್ವಕಪ್ ಗೆದ್ದಿತ್ತು ಎಂದು ಅವರು ಹೇಳಿದರು. ಈ ವರ್ಷ ನಮಗೆ ಮತ್ತೊಂದು ವಿಶ್ವಕಪ್ (ಟಿ20 ವಿಶ್ವಕಪ್) ಇದೆ. ಓರಿಯೊ ಬಿಸ್ಕೆಟ್ ಬ್ರಾಂಡ್ ಅನ್ನು ಮರು ಬಿಡುಗಡೆ ಮಾಡಿರುವುದರಿಂದ ಈ ವರ್ಷವೂ ಭಾರತ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಬಹುದು ಎಂದು ಅವರು ಹೇಳಿರುವುದು ಸಾಕಷ್ಟು ಚರ್ಚೆಗೆ ಕಾರಣವಾಯಿತು.


Click it and Unblock the Notifications












