ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪರನ್ನು ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಿತು ಆದರೆ ಇದುವರೆಗೂ ಯಾವುದೇ ಪಂದ್ಯದಲ್ಲಿ ಆಡುವ ಅವಕಾಶವನ್ನು ಮಾತ್ರ ನೀಡಿಲ್ಲ.
ಈ ಬಾರಿಯ ಟೂರ್ನಿ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 1000 ರನ್ ಬಾರಿಸಬೇಕೆಂಬ ಕನಸ್ಸನ್ನು ರಾಬಿನ್ ಉತ್ತಪ್ಪ ವ್ಯಕ್ತಪಡಿಸಿದ್ದರು.
ಮನದೀಪ್ ಸಿಂಗ್ ಮತ್ತು ಶ್ರೀವತ್ಸ್ ಗೋಸ್ವಾಮಿ
ಪಂಜಾಬ್ ಕಿಂಗ್ಸ್ ತಂಡದ ಮನದೀಪ್ ಸಿಂಗ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಶ್ರೀವತ್ಸ್ ಗೋಸ್ವಾಮಿ ಕೂಡಾ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ನಡೆದಿರುವ ಪಂದ್ಯಗಳ ಪೈಕಿ ಒಂದೇ ಒಂದು ಪಂದ್ಯದಲ್ಲಿಯೂ ಅವಕಾಶ ಸಿಗದೇ ಬೆಂಚ್ ಕಾದಿದ್ದಾರೆ.
ಸಚಿನ್ ಬೇಬಿ ಮತ್ತು ಗುರ್ಕೀರತ್ ಸಿಂಗ್ ಮನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಚಿನ್ ಬೇಬಿ ಮತ್ತು ಗುರ್ಕೀರತ್ ಸಿಂಗ್ ಮನ್ ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಯಾವುದೇ ಪಂದ್ಯದಲ್ಲಿಯೂ ಸಹ ಅವಕಾಶವನ್ನು ಪಡೆದಿಲ್ಲ.
ಕೃಷ್ಣಪ್ಪ ಗೌತಮ್ ಮತ್ತು ಉಮೇಶ್ ಯಾದವ್
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿರುವ ಕೃಷ್ಣಪ್ಪ ಗೌತಮ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆಯಾಗಿರುವ ಉಮೇಶ್ ಯಾದವ್ ಇದುವರೆಗೂ ಸಹ ಯಾವುದೇ ಪಂದ್ಯದಲ್ಲಿಯೂ ತಮ್ಮ ತಂಡಗಳ ಆಡುವ ಬಳಗವನ್ನು ಸೇರಿಕೊಳ್ಳುವ ಅವಕಾಶವನ್ನು ಪಡೆದುಕೊಂಡಿಲ್ಲ.
ಕುಲ್ ದೀಪ್ ಯಾದವ್ ಮತ್ತು ಆಕಾಶ್ ಸಿಂಗ್
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕುಲದೀಪ್ ಯಾದವ್ ಇದುವರೆಗೂ ಯಾವುದೇ ಪಂದ್ಯದಲ್ಲಿಯೂ ಆಡುವ ಅವಕಾಶವನ್ನು ಪಡೆದುಕೊಂಡಿಲ್ಲ. ಹಾಗೆಯೇ ರಾಜಸ್ತಾನ್ ರಾಯಲ್ಸ್ ತಂಡದ ಯುವ ಆಟಗಾರ ಆಕಾಶ್ ಸಿಂಗ್ ಕೂಡ ಒಂದೇ ಒಂದು ಅವಕಾಶವನ್ನೂ ಪಡೆದುಕೊಂಡಿಲ್ಲ