
ಟೀಮ್ ಇಂಡಿಯಾ ಸ್ಪಿನ್ನರ್ಗಳ ಉತ್ತಮ ಪ್ರದರ್ಶನ
ಕಾನ್ಪುರದ ನಿಧಾನಗತಿಯ ಪಿಚ್ನಲ್ಲಿ ಭಾರತದ ಸ್ಪಿನ್ನರ್ಗಳು ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಆದರೆ ನ್ಯೂಜಿಲೆಂಡ್ ಪರವಾಗಿ ಸ್ಪಿನ್ನರ್ಗಳು ನೀರಸ ಪ್ರದರ್ಶನ ನೀಡಿದ್ದರು. ಆದರೆ ಕಿವಿಸ್ ತಂಡದ ವೇಗಿಗಳು ಮಾತ್ರ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಆಘಾತ ನೀಡಿದ್ದಾರೆ. ಭಾರತ ಎರಡು ಇನ್ನಿಂಗ್ಸ್ಗಳಲ್ಲಿ ಒಟ್ಟು 17 ವಿಕೆಟ್ ಕಳೆದುಕೊಂಡಿದೆ. ಆದರೆ ನ್ಯೂಜಿಲೆಂಡ್ ತಂಡದ ಸ್ಪಿನ್ನರ್ಗಳು ಪಡೆದುಕೊಂಡಿದ್ದು ಕೇವಲ 3 ವಿಕೆಟ್ ಮಾತ್ರ. ಉಳಿದ 14 ವಿಕೆಟ್ಗಳು ಕಿವೀಸ್ ವೇಗಿಗಳ ಪಾಲಾಗಿದೆ. ಸ್ಪಿನ್ನರ್ಗಳು ಪಡೆದ ಮೂರು ವಿಕೆಟ್ ಕೂಡ ಅಜಾಜ್ ಪಟೇಲ್ ಪಾಲಾಗಿದ್ದು ಉಳಿದಿಬ್ಬರು ಸ್ಪಿನ್ನರ್ಗಳಾದ ರಚಿನ್ ರವೀಂದ್ರ ಹಾಗೂ ವಿಲ್ ಸೋಮರ್ವಿಲ್ಲೆ ಒಂದೂ ವಿಕೆಟ್ ಪಡೆಯದ ನಿರಾಸೆ ಅನುಭವಿಸಿದ್ದಾರೆ.

ಟೀಕಿಸಿದ ಇಯಾನ್ ಸ್ಮಿತ್
ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಇಯಾನ್ ಸ್ಪಿನ್ ಕಿವಿಸ್ ಪಡೆಯ ಸ್ಪಿನ್ನರ್ಗಳ ವಿರುದ್ಧ ತೀವ್ರ ಟೀಕೆಯನ್ನು ಮಾಡಿದ್ದಾರೆ. "ನಾವು ಸ್ಪಿನ್ ಬೌಲಿಂಗ್ನಲ್ಲಿ ಸಾಕಷ್ಟು ಒ್ರಗತಿಯನ್ನು ಸಾಧಿಸಬೇಕಿದೆ ಹಾಗೂ ಹುಲ್ಲಿನಿಂದ ರಕ್ಷಣೆ ಪಡೆಯುವುದನ್ನು ನಿಲ್ಲಿಸಬೇಕು. ತಂಡದ ಸ್ಪಿನ್ ಬೌಲಿಂಗ್ನ ಪ್ರದರ್ಶನ ತುಂಬಾ ಅಸ್ತವ್ಯಸ್ಥವಾಗಿದೆ. ಇದು ತಮಾಷೆಯಲ್ಲ. ನಾವು ತವರಿನಲ್ಲಿ ಆಡಿದಾಗ ವೇಗಿಗಳಿಗೆ ನೆರವಾಗುವಂತೆ ಉಪಖಂಡದಲ್ಲಿ ಸ್ಪಿನ್ನರ್ಗಳಿಗೆ ನೆರವಾಗುತ್ತದೆ. ನಾವು ಅಲ್ಲಿ ಉತ್ತಮವಾಗಿ ಆಡದ ಹೊರತು ಬೇರೇನೂ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ ಇಯಾನ್ ಸ್ಮಿತ್.
ಬಹುಕಾಲದ ಗೆಳತಿ ಜೊತೆಗೆ, ಟೀಂ ಇಂಡಿಯಾ ಬೌಲರ್ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ

ಸೌಥಿ ಹಾಗೂ ಜೇಮಿಸನ್ಗೆ ವಿಲಿಯಮ್ಸನ್ ಪಡೆ ಧನ್ಯವಾದ ಹೇಳಬೇಕು
ಇನ್ನು ಈ ಪಂದ್ಯದಲ್ಲು ನ್ಯೂಜಿಲೆಂಡ್ ತಂಡದ ಪ್ರದರ್ಶನಕ್ಕೆ ಇಡೀ ತಂಡ ವೇಗಿಗಳಾದ ಕೈಲ್ ಜೇಮಿಸನ್ ಹಾಗೂ ಟಿಮ್ ಸೌಥಿಗೆ ಧನ್ಯವಾದ ಸಲ್ಲಿಸಬೇಕು ಎಂದಿದ್ದಾರೆ. ಇಡೀ ಪಂದ್ಯದಲ್ಲಿ ಅವರು ನೀಡಿದ ಪ್ರದರ್ಶನದಿಂದಾಗಿ ಅಂತಿಮ ದಿನದವರೆಗೂ ನ್ಯೂಜಿಲೆಂಡ್ ಆಡಲು ಸಾಧ್ಯವಾಗಿದೆ ಎಂದಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲಲು ಕೂಡ ವೇಗಿಗಳೇ ಕಾರಣ
ಇನ್ನು ಇದೇ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯವನ್ನು ಗೆಲ್ಲಲು ಕೂಡ ವೇಗಿಗಳೇ ಕಾರಣ ಎಂದಿದ್ದಾರೆ. ತಂಡ ಎಲ್ಲಾ ವೇಗದ ಬೌಲಿಂಗ್ ಆಟಗಾರರನ್ನೇ ಕಣಕ್ಕಿಳಿಸಿದ್ದು ಗೆಲುವಿಗೆ ಕಾರಣವಾಗಿದೆ ಎಂದಿದ್ದಾರೆ. "ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಸ್ಪಿನ್ ಬೌಲರ್ಗಳನ್ನು ಬಳಸದೆಯೇ ಪಂದ್ಯವನ್ನು ಗೆಲ್ಲು ಸಾಧ್ಯವಾಗಿದ್ದಕ್ಕೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದು ಬಹಳಷ್ಟು ನಿರಾಶಾದಾಯಕ ಹಾಗೂ ಕಳಪೆ ಸಂಗತಿ ಎಂದು ಕೂಡ ಅವರು ಹೇಳಿದ್ದರು. ಅವರು ಸ್ಪಿನ್ ಬೌಲಿಂಗ್ನ ಪಕ್ಷಪಾತಿಯಾಗಿ ಮಾತನಾಡಿದ್ದಾರೆ ನಿಜ. ಆದರೆ ನಾವು ಆ ವಿಚಾರವಾಗಿ ಗಮನಹರಿಸಬೇಕಿದೆ" ಎಂದಿದ್ದಾರೆ ಇಯಾನ್ ಸ್ಪಿನ್.


Click it and Unblock the Notifications












